ಗಣಿತ ಅಧ್ಯಾಪಕರಾದ ಗುರುರಾಜ್ ಎಸ್. ದಾವಣಗೆರೆ ಅವರಿಗೆ ಹೊಸಕಾಲದ ಬಹುಮುಖಿ ವಿಷಯಗಳ ಮೇಲೆ ಇನ್ನಿಲ್ಲದ ಆಸಕ್ತಿ. ಅದರಲ್ಲೂ ತಂತ್ರಜ್ಞಾನ ಹಾಗೂ ವಿಜ್ಞಾನವನ್ನು ಅವರು ಕಣ್ಣುಗಳನ್ನು ಅಗಲಿಸಿ ನೋಡುವವರ ಪೈಕಿ. ವಿಜ್ಞಾನ, ತಂತ್ರಜ್ಞಾನ ವಿಸ್ತರಣೆಗೊಳ್ಳುತ್ತಾ, ಬದುಕಿನ ಭಾಗವೇ ಆಗುತ್ತಾ, ಹೊಸತೇನೋ ಸವಾಲು ಬಂತಿದೋ ಎನ್ನುವಂತೆ ಮಾಡುತ್ತಲೇ ಇವೆ. ಇಂತಹ ಸಂಗತಿಗಳ ಮಾಹಿತಿ ಕೊಡುವುದರ ಜೊತೆಗೆ ಅವನ್ನು 360 ಡಿಗ್ರಿಯಲ್ಲಿ ನೋಡುವ ಕ್ರಮವೊಂದು ಇರುವುದು ಉತ್ತಮ. ಅಂತಹ ಯತ್ನವನ್ನು ಗುರುರಾಜ್ ಮಾಡಿದ್ದಾರೆ. ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟ ಲೇಖನಗಳನ್ನು ಒಳಗೊಂಡ ಮಾಹಿತಿಪೂರ್ಣ ಸಂಕಲನ ‘ವಿರಾಟ್ ವಿಜ್ಞಾನ’.