ಕೈಗಾರಿಕೋದ್ಯಮಿಯೂ, ಕೋಟ್ಯಧೀಶನೂ ಆದ ಸಾಮ್ ಭಾಸ್ಕರ್ನನ್ನು ಅವ್ಯಕ್ತವಾದ ಹಸಿವೊಂದು ಸೆಳೆಯುತ್ತಿರುತ್ತದೆ. ಭಾಸ್ಕರ್ ಯಾವಾಗಲೂ ‘ನನಗೆ ಬೇಕು, ನನಗೆ ಬೇಕು’ ಎಂದು ಚೀತ್ಕರಿಸುತ್ತ ಇರುತ್ತಾನೆ. ಮುಂಬಯಿಯಲ್ಲಿ ಶುರುವಾಗುವ ಈ ಉದ್ಯಮಿಯ ಶೋಧವು ಅವನನ್ನು ವಾರಾಣಸಿಗೆ ಕರೆತರುತ್ತದೆ. ಈ ಕಾದಂಬರಿಯಲ್ಲಿ ಎಲ್ಲ ಸಂಕೀರ್ಣಗಳನ್ನು ಒಳಗೊಂಡ ನಿರಂತರ ಸಮಕಾಲೀನ ವಸ್ತು ವಿಷಯವಿದೆ. ಕಥೆಯ ಆಧ್ಯಾತ್ಮಿಕ ಮತ್ತು ಐಂದ್ರಿಯಿಕ ಆಯಾಮಗಳು ಸೂಕ್ಷ್ಮವಾಗಿ ಹೆಣೆದು, ಇದು ಅಸಾಮಾನ್ಯ ಕೃತಿಯಾಗಿ ಹೊರಹೊಮ್ಮಿದೆ ಎನ್ನುವುದು ಅಕಾದೆಮಿಯು ಈ ಪುಸ್ತಕದ ಹಿಂಬದಿಯಲ್ಲಿ ನೀಡಿರುವ ವಿವರಣೆ.