<p>ಈ ಅಜಾತಶತ್ರು ನಮ್ಮ ನಡುವೆ ಇದ್ದದ್ದು ಬಹಳ<br>ಜನರಿಗೆ ಗೊತ್ತೇ ಇರಲಿಲ್ಲ.<br>ಎಲ್ಲರೊಳು ಚಂದಾಗಿ<br>ಒಂದಾಗಿ ಇದ್ದೂ ಇಲ್ಲದ<br>ಪ್ರಬುದ್ಧ ಬುದ್ಧನಾಗಿದ್ದ.<br>ಎಲ್ಲರೂ ನಮ್ಮವ ನಮ್ಮವ ಎಂಬ ಭಾವ.<br>ಅನುರಾಗಿಯಾಗಿಯೂ ವಿರಾಗಿಯಂತಿದ್ದ.<br>ಶಿಲುಬೆ ಹೊತ್ತ ನೇಗಿಲಯೋಗಿಯಾಗಿದ್ದ.ಸದ್ದಿಲ್ಲದೆ ಕನ್ನಡದ ಕಹಳೆ ಊದಿದ್ದ.<br>ಮಕ್ಕಳನು ಮೋಡಿ ಮಾಡುವ ಸಾಗರದ ಕಿನ್ನರ ಜೋಗಿಯಾಗಿದ್ದ.<br>ಅಂತರಂಗದಲಿ ಕ್ರಿಸ್ತನಾಗಿದ್ದ.<br>ಬಹಿರಂಗದಲಿ ಶಾಂತಿದೂತನಾಗಿದ್ದ.<br>ಕನ್ನಡದಲಿ ಉಸಿರಾಡುವ ಕ್ರಾಂತಿದೂತನಾಗಿದ್ದ.</p>.<p>ಈ 'ನಾಡಿ 'ಯ ನಡೆ ಅಪರಂಜಿ.<br>ನುಡಿ ಮಾಸದ ಹೊನ್ನಕಳಸ.<br>ಲಿಂಗವೂ ಮೆಚ್ಚಿ ಅಹುದಹುದೆಂಬ ಬರಹ.<br>ನಾಡಿಯ ನುಡಿಮುತ್ತಿಗೆ<br>ಬೊಮ್ಮನೂ ತಲೆದೂಗಿದ್ದುಂಟು.<br>ಭಳಿರೇ! ಎಂದದ್ದುಂಟು!!</p>.<p>ಈ ಅಜಾತಶತ್ರುವಿಗೆ ಪ್ರಶಸ್ತಿ ಸಮ್ಮಾನಗಳ<br>ಹಂಗಿಲ್ಲ.<br>ಎಂದೂ ಕೀರ್ತಿಯ ಬೆನ್ನು ಹತ್ತಿದವನಲ್ಲ.</p>.<p>ಇವನು ಕನ್ನಡ ಸಾಹಿತ್ಯಲೋಕದ<br>ಮಿಶನರಿಯಾಗಿದ್ದ!<br>ಕನ್ನಡದ ಚಿಣ್ಣರ ಪ್ರಿಯ ಸಾಂತಾಕ್ಲೂಜ್ ಅಜ್ಜನಾಗಿದ್ದ!</p>.<p>ಇಂಥ ನುಡಿಬ್ರಹ್ಮ<br>ನಮ್ಮ ನಡುವೆ ಇದ್ದ<br>ಎಂಬುದನು ನಂಬಲು ಸಾಧ್ಯವೇ ಇಲ್ಲ.<br>ಇಂದವನು ನಮ್ಮ ನಿಮ್ಮೆಲರನು ತೊರೆದು <br>ದೂರ - ಬಹುದೂರ<br>ಪಯಣ ಕೈಕೊಂಡಿದ್ದಾನೆ.<br>ಅಂಥ ಅನಾಸಕ್ತ ಕ್ರಿಸ್ತಯೋಗಿಗೆ<br>ನಮೋ! ನಮೋ!!<br>ನಮ್ಮ ನಿಮ್ಮೆಲ್ಲರ ಕಂಬನಿಯ ತರ್ಪಣ.<br>ಶ್ರದ್ಧಾಂಜಲಿಯ ಸಮರ್ಪಣ.</p>.<p>ಓಂ ಶಾಂತಿ!<br>ಅಮೆನ್!!</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈ ಅಜಾತಶತ್ರು ನಮ್ಮ ನಡುವೆ ಇದ್ದದ್ದು ಬಹಳ<br>ಜನರಿಗೆ ಗೊತ್ತೇ ಇರಲಿಲ್ಲ.<br>ಎಲ್ಲರೊಳು ಚಂದಾಗಿ<br>ಒಂದಾಗಿ ಇದ್ದೂ ಇಲ್ಲದ<br>ಪ್ರಬುದ್ಧ ಬುದ್ಧನಾಗಿದ್ದ.<br>ಎಲ್ಲರೂ ನಮ್ಮವ ನಮ್ಮವ ಎಂಬ ಭಾವ.<br>ಅನುರಾಗಿಯಾಗಿಯೂ ವಿರಾಗಿಯಂತಿದ್ದ.<br>ಶಿಲುಬೆ ಹೊತ್ತ ನೇಗಿಲಯೋಗಿಯಾಗಿದ್ದ.ಸದ್ದಿಲ್ಲದೆ ಕನ್ನಡದ ಕಹಳೆ ಊದಿದ್ದ.<br>ಮಕ್ಕಳನು ಮೋಡಿ ಮಾಡುವ ಸಾಗರದ ಕಿನ್ನರ ಜೋಗಿಯಾಗಿದ್ದ.<br>ಅಂತರಂಗದಲಿ ಕ್ರಿಸ್ತನಾಗಿದ್ದ.<br>ಬಹಿರಂಗದಲಿ ಶಾಂತಿದೂತನಾಗಿದ್ದ.<br>ಕನ್ನಡದಲಿ ಉಸಿರಾಡುವ ಕ್ರಾಂತಿದೂತನಾಗಿದ್ದ.</p>.<p>ಈ 'ನಾಡಿ 'ಯ ನಡೆ ಅಪರಂಜಿ.<br>ನುಡಿ ಮಾಸದ ಹೊನ್ನಕಳಸ.<br>ಲಿಂಗವೂ ಮೆಚ್ಚಿ ಅಹುದಹುದೆಂಬ ಬರಹ.<br>ನಾಡಿಯ ನುಡಿಮುತ್ತಿಗೆ<br>ಬೊಮ್ಮನೂ ತಲೆದೂಗಿದ್ದುಂಟು.<br>ಭಳಿರೇ! ಎಂದದ್ದುಂಟು!!</p>.<p>ಈ ಅಜಾತಶತ್ರುವಿಗೆ ಪ್ರಶಸ್ತಿ ಸಮ್ಮಾನಗಳ<br>ಹಂಗಿಲ್ಲ.<br>ಎಂದೂ ಕೀರ್ತಿಯ ಬೆನ್ನು ಹತ್ತಿದವನಲ್ಲ.</p>.<p>ಇವನು ಕನ್ನಡ ಸಾಹಿತ್ಯಲೋಕದ<br>ಮಿಶನರಿಯಾಗಿದ್ದ!<br>ಕನ್ನಡದ ಚಿಣ್ಣರ ಪ್ರಿಯ ಸಾಂತಾಕ್ಲೂಜ್ ಅಜ್ಜನಾಗಿದ್ದ!</p>.<p>ಇಂಥ ನುಡಿಬ್ರಹ್ಮ<br>ನಮ್ಮ ನಡುವೆ ಇದ್ದ<br>ಎಂಬುದನು ನಂಬಲು ಸಾಧ್ಯವೇ ಇಲ್ಲ.<br>ಇಂದವನು ನಮ್ಮ ನಿಮ್ಮೆಲರನು ತೊರೆದು <br>ದೂರ - ಬಹುದೂರ<br>ಪಯಣ ಕೈಕೊಂಡಿದ್ದಾನೆ.<br>ಅಂಥ ಅನಾಸಕ್ತ ಕ್ರಿಸ್ತಯೋಗಿಗೆ<br>ನಮೋ! ನಮೋ!!<br>ನಮ್ಮ ನಿಮ್ಮೆಲ್ಲರ ಕಂಬನಿಯ ತರ್ಪಣ.<br>ಶ್ರದ್ಧಾಂಜಲಿಯ ಸಮರ್ಪಣ.</p>.<p>ಓಂ ಶಾಂತಿ!<br>ಅಮೆನ್!!</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>