<p>ಶತ್ರು ಒಳಗೇ ನುಸುಳಿಬಿಟ್ಟಿದ್ದಾನೆ. <br>ಬಡಿದೋಡಿಸುವವರಿಲ್ಲದೇ ಮಣೆ ಹಾಕಿ ಕೂರಿಸಿ <br>ಮೃಷ್ಟಾನ್ನ ಬಡಿಸುತ್ತಿದ್ದಾರೆ ಹಿರಿಯರು. <br>ಅನ್ನವಿಟ್ಟ ಕೈಗಳಿಗೆ ಕೋಳ ಹಾಕುವ ಜನರಿಗೆ <br>ಗಂಧ ಪೂಸಿ ಹಾರ ಹಾಕಿ ಕಳಿಸಿಕೊಡುತ್ತಿದ್ದಾರೆ. <br>ರಸ್ತೆಯ ತುಂಬ ರೇಪಾದ ಹೆಣ್ಣುಗಳ ಯೋನಿ ರಕ್ತ <br>ದ ಹಾಸಿನ ಮೇಲೆ ನಡೆದು ತಾಲಿಬಾನಿಗಳು ಟಾಟಾ ಹೇಳಿ <br>ವಿಮಾನ ಹತ್ತಿದ್ದಾರೆ ಮೇಲಿಂದ ಹೂ ಚೆಲ್ಲಿದ್ದಾರೆ <br>ವಾರೆ ಮೇರೇ ಶೇರ್ ವಾರೆ ಮೇರೇ ಸನಾತನಿ</p>.<p>ಮರೆತುಹೋಯಿತೇ ನೀವು ಸದಾ ಜಪಿಸುವ ಮನುವಾಣಿ <br>ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: <br>ಎಲ್ಲಿ ಹೋದರು ನಿಮ್ಮ ದೇವತೆಗಳು? <br>ಅರ್ಥವಾಗಿಲ್ಲ ಅನರ್ಹರಿಗೆ <br>ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ: <br>ಎಲ್ಲಿ ಸ್ತ್ರೀಯರ ಅಪಮಾನವೋ <br>ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ.</p>.<p>ಇದು ವಿಷಮ ಕಾಲ <br>ಹಜಾರದಲ್ಲಿ ಮನೆಯ ಯಜಮಾನ ವಿಷಮಯ ಜನರ <br>ಕಾಲು ತೊಳೆದು ತೀರ್ಥ ಪ್ರೋಕ್ಷಣೆ ಮಾಡಿಕೊಂಡು <br>ಇತ್ತ ಹಿತ್ತಲಿಗೆ ಬಂದು ಮನೆಯ ಮಹಾಲಕ್ಷ್ಮಿಯರ <br>ಬಡಿದು ಬಾವಿಗೆ ತಳ್ಳುವ ಕ್ರೂರ ಜಾಲ<br>ಮಗಳನ್ನೇ ಬಲಿಕೊಡುವ ತಾಲಿಬಾನಿಗಳಿಗೆ ಆರತಿ ಎತ್ತಿ <br>ದ ಮೇಲೆ ಇನ್ನು ಯಾವ ಬಾಯಲ್ಲಿ ನುಡಿಯುತ್ತೀರಿ <br>ಹೆಣ್ಣುಮಕ್ಕಳ ಮಾನ ರಕ್ಷಣೆ ಸನಾತನ ಸಂಸ್ಕೃತಿ?</p>.<p>ಇದು ತೀರ್ಮಾನದ ಕಾಲ <br>ನಿಮ್ಮ ಸ್ತ್ರೀಯರು ದೇವತೆಗಳೋ ಬಹಿಷ್ಕೃತರೋ? <br>ಪುರಸ್ಕೃತರೋ ಅಪಮಾನಿತರೋ? <br>ಬೇಟಿಯರನ್ನು ಬೇಟೆ ಮಾಡುವವರ ಮೆರವಣಿಗೆಯಲ್ಲಿ <br>ಡೋಲು ನುಡಿಸುತ್ತ ಕುಣಿಯುತ್ತ ಉನ್ಮತ್ತ <br>ನಿಮಗೆ ಕಾದಿದೆ ಮಹಾದೇವಿಯ ಶಾಪ<br>ತುಂಬಿಬಂದಿದೆ ನಿಮ್ಮ ಪಾಪ ಕೂಪ</p>.<p>ಬೆಂಕಿ ಬಿದ್ದಿದೆ ಮನೆಗೆ <br>ಈಗಲೂ ಬಾವಿ ತೋಡುವ ಸಂಕಲ್ಪವಿಲ್ಲ ನಿಮಗೆ<br>ಎದೆಯಲ್ಲಿ ಆದ್ರತೆಯಿಲ್ಲದೇ ತೋಡಿದರೂ ಅಲ್ಲಿ ನೀರಿಲ್ಲ <br>ಕಲ್ಲು ಕರಗುವ ಕಾಲದಲ್ಲೂ ಸ್ಪಂದನವಿಲ್ಲ <br>ಬುದ್ದಿಯ ಅಧಃಪತನ ವಿಪರೀತ ವಿನಾಶಕ್ಕೆ ಕ್ಷಮೆಯಿಲ್ಲ <br>ನೆನಪಿರಲಿ, ದೇವಿ ಇಲ್ಲದಿದ್ದರೆ ನೀವು ಪ್ರೇತಗಳೇ ಸರಿ <br>ನಚೇ ದೇವಂ ದೇವೋನ ಖಲು ಕುಶಲ ಸ್ಪಂದಿತುಮಪಿ. <br><br><br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶತ್ರು ಒಳಗೇ ನುಸುಳಿಬಿಟ್ಟಿದ್ದಾನೆ. <br>ಬಡಿದೋಡಿಸುವವರಿಲ್ಲದೇ ಮಣೆ ಹಾಕಿ ಕೂರಿಸಿ <br>ಮೃಷ್ಟಾನ್ನ ಬಡಿಸುತ್ತಿದ್ದಾರೆ ಹಿರಿಯರು. <br>ಅನ್ನವಿಟ್ಟ ಕೈಗಳಿಗೆ ಕೋಳ ಹಾಕುವ ಜನರಿಗೆ <br>ಗಂಧ ಪೂಸಿ ಹಾರ ಹಾಕಿ ಕಳಿಸಿಕೊಡುತ್ತಿದ್ದಾರೆ. <br>ರಸ್ತೆಯ ತುಂಬ ರೇಪಾದ ಹೆಣ್ಣುಗಳ ಯೋನಿ ರಕ್ತ <br>ದ ಹಾಸಿನ ಮೇಲೆ ನಡೆದು ತಾಲಿಬಾನಿಗಳು ಟಾಟಾ ಹೇಳಿ <br>ವಿಮಾನ ಹತ್ತಿದ್ದಾರೆ ಮೇಲಿಂದ ಹೂ ಚೆಲ್ಲಿದ್ದಾರೆ <br>ವಾರೆ ಮೇರೇ ಶೇರ್ ವಾರೆ ಮೇರೇ ಸನಾತನಿ</p>.<p>ಮರೆತುಹೋಯಿತೇ ನೀವು ಸದಾ ಜಪಿಸುವ ಮನುವಾಣಿ <br>ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: <br>ಎಲ್ಲಿ ಹೋದರು ನಿಮ್ಮ ದೇವತೆಗಳು? <br>ಅರ್ಥವಾಗಿಲ್ಲ ಅನರ್ಹರಿಗೆ <br>ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ: <br>ಎಲ್ಲಿ ಸ್ತ್ರೀಯರ ಅಪಮಾನವೋ <br>ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥ.</p>.<p>ಇದು ವಿಷಮ ಕಾಲ <br>ಹಜಾರದಲ್ಲಿ ಮನೆಯ ಯಜಮಾನ ವಿಷಮಯ ಜನರ <br>ಕಾಲು ತೊಳೆದು ತೀರ್ಥ ಪ್ರೋಕ್ಷಣೆ ಮಾಡಿಕೊಂಡು <br>ಇತ್ತ ಹಿತ್ತಲಿಗೆ ಬಂದು ಮನೆಯ ಮಹಾಲಕ್ಷ್ಮಿಯರ <br>ಬಡಿದು ಬಾವಿಗೆ ತಳ್ಳುವ ಕ್ರೂರ ಜಾಲ<br>ಮಗಳನ್ನೇ ಬಲಿಕೊಡುವ ತಾಲಿಬಾನಿಗಳಿಗೆ ಆರತಿ ಎತ್ತಿ <br>ದ ಮೇಲೆ ಇನ್ನು ಯಾವ ಬಾಯಲ್ಲಿ ನುಡಿಯುತ್ತೀರಿ <br>ಹೆಣ್ಣುಮಕ್ಕಳ ಮಾನ ರಕ್ಷಣೆ ಸನಾತನ ಸಂಸ್ಕೃತಿ?</p>.<p>ಇದು ತೀರ್ಮಾನದ ಕಾಲ <br>ನಿಮ್ಮ ಸ್ತ್ರೀಯರು ದೇವತೆಗಳೋ ಬಹಿಷ್ಕೃತರೋ? <br>ಪುರಸ್ಕೃತರೋ ಅಪಮಾನಿತರೋ? <br>ಬೇಟಿಯರನ್ನು ಬೇಟೆ ಮಾಡುವವರ ಮೆರವಣಿಗೆಯಲ್ಲಿ <br>ಡೋಲು ನುಡಿಸುತ್ತ ಕುಣಿಯುತ್ತ ಉನ್ಮತ್ತ <br>ನಿಮಗೆ ಕಾದಿದೆ ಮಹಾದೇವಿಯ ಶಾಪ<br>ತುಂಬಿಬಂದಿದೆ ನಿಮ್ಮ ಪಾಪ ಕೂಪ</p>.<p>ಬೆಂಕಿ ಬಿದ್ದಿದೆ ಮನೆಗೆ <br>ಈಗಲೂ ಬಾವಿ ತೋಡುವ ಸಂಕಲ್ಪವಿಲ್ಲ ನಿಮಗೆ<br>ಎದೆಯಲ್ಲಿ ಆದ್ರತೆಯಿಲ್ಲದೇ ತೋಡಿದರೂ ಅಲ್ಲಿ ನೀರಿಲ್ಲ <br>ಕಲ್ಲು ಕರಗುವ ಕಾಲದಲ್ಲೂ ಸ್ಪಂದನವಿಲ್ಲ <br>ಬುದ್ದಿಯ ಅಧಃಪತನ ವಿಪರೀತ ವಿನಾಶಕ್ಕೆ ಕ್ಷಮೆಯಿಲ್ಲ <br>ನೆನಪಿರಲಿ, ದೇವಿ ಇಲ್ಲದಿದ್ದರೆ ನೀವು ಪ್ರೇತಗಳೇ ಸರಿ <br>ನಚೇ ದೇವಂ ದೇವೋನ ಖಲು ಕುಶಲ ಸ್ಪಂದಿತುಮಪಿ. <br><br><br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>