<p>ನರಿಯು ಒಂದು ಬೇಟೆಯರಸಿ<br />ಕಾಡಲಲೆಯಿತು<br />ಬೇಟೆ ಸಿಗದೆ ಒಂದು ಊರ<br />ದಾರಿ ಹಿಡಿಯಿತು</p>.<p>ಬೀದಿ ನಾಯಿ ಇದನು ಕಂಡು<br />ತಾನು ಬೊಗಳಿತು<br />ತನ್ನ ಬಳಗವೆಲ್ಲ ಕರೆದು<br />ದಾಳಿ ಮಾಡಿತು</p>.<p>ಸಂದಿಗೊಂದಿ ಓಡಿ ನರಿಯು<br />ದಣಿದು ಬಿಟ್ಟಿತು<br />ನಾಯಿ ಬಳಗ ಬೆನ್ನ ಹಿಂದೆ<br />ಬಂದು ಬಿಟ್ಟಿತು</p>.<p>ಅಂದು ಹೋಳಿ ಬಣ್ಣದಾಟ<br />ಜಗಕೆ ಸಡಗರ<br />ನರಿಗೆ ಬಿಡದ ಪೀಕಲಾಟ<br />ಎಲ್ಲ ಮುಜುಗರ</p>.<p>ಕೊಳಗ ತುಂಬ ಬಣ್ಣ ತುಂಬಿ<br />ಎಲ್ಲ ಇಟ್ಟರು<br />ಕಾಮದಹನದೆಡೆಗೆ ತಮ್ಮ<br />ದೃಷ್ಟಿ ನೆಟ್ಟರು</p>.<p>ಜಾಗ ಸಿಗದೆ ನರಿಯು ಓಡಿ<br />ಬಂದು ಬಿಟ್ಟಿತು<br />ನೀಲಿ ಕೊಳಗದೊಳಗೆ ಬಂದು<br />ಜಿಗಿದು ಬಿಟ್ಟಿತು</p>.<p>ನಾಯಿ ಬಳಗ ಹಿಂದೆ ಬಂದು<br />ಮುಂದೆ ಓಡಿತು<br />ನರಿಯು ತನ್ನ ಜೀವ ಉಳಿಯಿ<br />ತೆಂದು ಬೀಗಿತು</p>.<p>ಜೀವ ಉಳಿದ ಖುಷಿಗೆ ನರಿಯು<br />ಕಾಡು ಸೇರಿತು<br />ತಾನೆ ರಾಜನೆಂದು ಹೇಳಿ<br />ವನದಿ ನಲಿಯಿತು</p>.<p>ನೀಲಿ ಪ್ರಾಣಿ ನೋಡಿ ಸಿಂಹ<br />ಬೆಚ್ಚಿ ಬಿದ್ದಿತು<br />ಅದನೆ ರಾಜನೆಂದು ತಾನು<br />ಒಪ್ಪಿಕೊಂಡಿತು</p>.<p>ಸಿಕ್ಕ ಬೇಟೆ ತಿಂದು ನರಿಯು<br />ಕೊಬ್ಬಿ ಬಿಟ್ಟಿತು<br />ತಾನೆ ರಾಜನೆಂಬ ಖುಷಿಗೆ<br />ಉಬ್ಬಿ ಬಿಟ್ಟಿತು</p>.<p>ಒಂದು ದಿನವು ಮಳೆಯು ಬರಲು<br />ಬಣ್ಣ ಕರಗಿತು<br />ಎಲ್ಲ ಪ್ರಾಣಿ ನೋಡಿ ನಗಲು<br />ನರಿಯು ನಡುಗಿತು</p>.<p>ಬಣ್ಣ ಕಳೆದ ಠಕ್ಕ ನರಿಯ<br />ಮೋಸ ತಿಳಿಯಿತು<br />ಒಂದೆ ಬಾರಿ ಜಿಗಿದು ಸಿಂಹ<br />ಪ್ರಾಣ ತೆಗೆಯಿತು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ನರಿಯು ಒಂದು ಬೇಟೆಯರಸಿ<br />ಕಾಡಲಲೆಯಿತು<br />ಬೇಟೆ ಸಿಗದೆ ಒಂದು ಊರ<br />ದಾರಿ ಹಿಡಿಯಿತು</p>.<p>ಬೀದಿ ನಾಯಿ ಇದನು ಕಂಡು<br />ತಾನು ಬೊಗಳಿತು<br />ತನ್ನ ಬಳಗವೆಲ್ಲ ಕರೆದು<br />ದಾಳಿ ಮಾಡಿತು</p>.<p>ಸಂದಿಗೊಂದಿ ಓಡಿ ನರಿಯು<br />ದಣಿದು ಬಿಟ್ಟಿತು<br />ನಾಯಿ ಬಳಗ ಬೆನ್ನ ಹಿಂದೆ<br />ಬಂದು ಬಿಟ್ಟಿತು</p>.<p>ಅಂದು ಹೋಳಿ ಬಣ್ಣದಾಟ<br />ಜಗಕೆ ಸಡಗರ<br />ನರಿಗೆ ಬಿಡದ ಪೀಕಲಾಟ<br />ಎಲ್ಲ ಮುಜುಗರ</p>.<p>ಕೊಳಗ ತುಂಬ ಬಣ್ಣ ತುಂಬಿ<br />ಎಲ್ಲ ಇಟ್ಟರು<br />ಕಾಮದಹನದೆಡೆಗೆ ತಮ್ಮ<br />ದೃಷ್ಟಿ ನೆಟ್ಟರು</p>.<p>ಜಾಗ ಸಿಗದೆ ನರಿಯು ಓಡಿ<br />ಬಂದು ಬಿಟ್ಟಿತು<br />ನೀಲಿ ಕೊಳಗದೊಳಗೆ ಬಂದು<br />ಜಿಗಿದು ಬಿಟ್ಟಿತು</p>.<p>ನಾಯಿ ಬಳಗ ಹಿಂದೆ ಬಂದು<br />ಮುಂದೆ ಓಡಿತು<br />ನರಿಯು ತನ್ನ ಜೀವ ಉಳಿಯಿ<br />ತೆಂದು ಬೀಗಿತು</p>.<p>ಜೀವ ಉಳಿದ ಖುಷಿಗೆ ನರಿಯು<br />ಕಾಡು ಸೇರಿತು<br />ತಾನೆ ರಾಜನೆಂದು ಹೇಳಿ<br />ವನದಿ ನಲಿಯಿತು</p>.<p>ನೀಲಿ ಪ್ರಾಣಿ ನೋಡಿ ಸಿಂಹ<br />ಬೆಚ್ಚಿ ಬಿದ್ದಿತು<br />ಅದನೆ ರಾಜನೆಂದು ತಾನು<br />ಒಪ್ಪಿಕೊಂಡಿತು</p>.<p>ಸಿಕ್ಕ ಬೇಟೆ ತಿಂದು ನರಿಯು<br />ಕೊಬ್ಬಿ ಬಿಟ್ಟಿತು<br />ತಾನೆ ರಾಜನೆಂಬ ಖುಷಿಗೆ<br />ಉಬ್ಬಿ ಬಿಟ್ಟಿತು</p>.<p>ಒಂದು ದಿನವು ಮಳೆಯು ಬರಲು<br />ಬಣ್ಣ ಕರಗಿತು<br />ಎಲ್ಲ ಪ್ರಾಣಿ ನೋಡಿ ನಗಲು<br />ನರಿಯು ನಡುಗಿತು</p>.<p>ಬಣ್ಣ ಕಳೆದ ಠಕ್ಕ ನರಿಯ<br />ಮೋಸ ತಿಳಿಯಿತು<br />ಒಂದೆ ಬಾರಿ ಜಿಗಿದು ಸಿಂಹ<br />ಪ್ರಾಣ ತೆಗೆಯಿತು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>