<p><strong>(ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ–2020ರಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕವನ)</strong></p>.<p>ತಂದೆ,<br />ನಿನಗೇ ಗೊತ್ತಲ್ಲ,<br />ಇಲ್ಲಿ ಸಮಯಕ್ಕೆ, ತಾಳ್ಮೆಗೆ ತೀರಾ ಅಭಾವ<br />ಕ್ಯೂನಲ್ಲಿ, ಟ್ರಾಫಿಕ್ನಲ್ಲಿ ಕಾಯದಂತೆ,<br />ನನ್ನ ಬೇಡಿಕೆಗಳನ್ನೆಲ್ಲ ಮನ್ನಿಸು ದೇವ</p>.<p>ಸ್ವಗತದ ಮರುಳರಿಗೂ,<br />ಬ್ಲೂಟೂತ್ನ ನನಗೂ,<br />ಭೇದ ಕಾಣಿಸು</p>.<p>ತಿಂಗಳ ಮಕ್ಕಳ ಸ್ಕೂಲ್ ಫೀಸಿಗೆ<br />ಸೆಕೆಂಡ್ ಹ್ಯಾಂಡ್ ಕಾರಿಗೆ, ಶಾಪಿಂಗ್ಗೆ,<br />ಸಮಯಕ್ಕೆ ದುಡ್ಡ ಕರುಣಿಸು ದೇವರೇ</p>.<p>ತಲೆ ತುಂಬಾ ಜೇನುಗೂಡಿದ್ದ ಹಳ್ಳಿ ಹುಡುಗನ<br />ನೆರಳಾದರೂ ಉಳಿಯಲಿ<br />ಅಚಾನಕ್ಕಾಗಿ ಬಾಲ್ಯ ಗೆಳೆಯರು ಸಿಕ್ಕಾಗ<br />ಕನಿಷ್ಠ ಅವರ ಹೆಸರಾದರೂ ಮರಳಲಿ</p>.<p>ಬೇರು ಸಡಿಲುಗೊಂಡ, ನೀರು ದಕ್ಕದ ಮರಗಳು<br />ಜೋರು ಮಳೆಗೆ, ಬಿರುಗಾಳಿಗೆ<br />ನಗರವಾಸಿಗಳು ರಸ್ತೆ ಗುಂಡಿಗೆ<br />ಬೀಳಿಸದಿರು ತಂದೆ</p>.<p>ಆಗಾಗ್ಗೆ ಕನಸ ಕೊಡುತ್ತಿರು<br />ಎರಡಂತಸ್ತಿನ ವಿಲ್ಲಾ ಕೊಂಡಂತೆ<br />ವರ್ಷಕ್ಕೆರಡು ವಿದೇಶಿ ಪ್ರವಾಸ ಹೋದಂತೆ</p>.<p>ಒಂದೇ ಸೂರಡಿ ಇದ್ದರೂ<br />ಒಂದೇ ಸ್ಕ್ರೀನ್ನಲ್ಲಿ ತೋರಿಸು<br />ದೇವ, ಮಡದಿ ಮಕ್ಕಳನ್ನ</p>.<p>ದುಂಡಗಿನ ಗಾಜಿನ ಹೂಜಿ ಮೀನು ನಾನು<br />ಆಳ, ಅಗಲ ಅರಿಯುವಂತೆ<br />ತಾರಸಿಯ ಹೂ ಕುಂಡದ ಬೇರು ನಾನು<br />ನಿಜ ನೆಲವು ಸಿಕ್ಕುವಂತೆ<br />ಮಾಡು ಪ್ರಭುವೇ<br />ಬೇರು ಆಳಕ್ಕಿಳಿಯಲು, ಮತ್ತೆ ಚಿಗುರಲು</p>.<p>(ಆದರೆ ಬೇರು ಯಾವ ಕಾಂಪೌಂಡ್ಗೂ ತಾಗದಿರಲಿ)</p>.<p>ಜೀವಾವಧಿ ಶಿಕ್ಷೆ ಜಾರಿಯಾಗಿರುವ ಖೈದಿಯಂತೆ<br />ಶಾಪಗ್ರಸ್ತ ಗಂಧರ್ವನಂತೆ<br />ನಾನು<br />ಕೊನೆಯರೆಗೂ ಉಸಿರಾದರೂ<br />ಬಸವಳಿಯದಂತೆ ದಕ್ಕಲಿ</p>.<p>ಎಲ್ಲರೂ ಎಲ್ಲರ ವಿಮರ್ಶಿಸುವಾಗ,<br />ಎಲ್ಲಿ ನಿಂತರೂ ಇನ್ನೊಬ್ಬರಿಗೆ ಅಡ್ಡಿಯಾದಾಗ,<br />ಅಭುಕ್ತ ಮೂಲೆಯ ಕರುಣಿಸು<br />ಯಾರಿಗೂ ಕಾಣದಂತೆ ಬಿಕ್ಕಲು<br />ನನ್ನೊಂದಿಗೆ ನಾನೇ ಮಾತಾಡಲು</p>.<p>ಟ್ರಾಫಿಕ್ನಲ್ಲಿ ಮಂಗಳಮುಖಿಯರು ಅಚಾನಕ್ಕಾಗಿ<br />ಬೆನ್ನು ಚಪ್ಪರಿಸಿದಂತೆ,<br />ಮನೆಯವರ ಆತ್ಮೀಯತೆ ಅಪರೂಪಕ್ಕಾದರೂ ಸಿಕ್ಕಲಿ<br />ಬತ್ತಿದ ಬಾವಿಯಲ್ಲಿ ಸೆಲೆ ಉಕ್ಕುವಂತೆ</p>.<p>ಮೆಟ್ರೊನಲ್ಲಿ ಒಣ ಕಟ್ಟಿಗೆಯಂತೆ ನಿಂತ ಮುದುಕನನ್ನೂ<br />ದೂರದಿಂದ ಅಮ್ಮನಂತೆ ಕಾಣುವ ಮುದುಕಿಯನ್ನೂ<br />ತೂರಿಸಿ ಜ್ಞಾನೋದಯವಾಗುವಂತೆ ಮಾಡಬೇಡ</p>.<p>ಕನ್ನಡಿಯಲ್ಲಿ ನನ್ನ ಮುಖ ನನಗೇ ಗುರುತು ಸಿಗದಾದಾಗ<br />ನೀನ್ಯಾರೆಂದು ನಗರ ಕೇಳಿದಾಗ<br />ಪೂರ್ತಿ ಮಳೆಯಲ್ಲಿ ತೋಯಿಸಿ<br />ಪ್ರವಾಹದಲ್ಲಿ ಹಳ್ಳಿಗೆ ರವಾನಿಸು</p>.<p><em><strong>–ಶೈಲೇಶ್ ಕುಮಾರ್ ಶಿವಕುಮಾರ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>(ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ–2020ರಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕವನ)</strong></p>.<p>ತಂದೆ,<br />ನಿನಗೇ ಗೊತ್ತಲ್ಲ,<br />ಇಲ್ಲಿ ಸಮಯಕ್ಕೆ, ತಾಳ್ಮೆಗೆ ತೀರಾ ಅಭಾವ<br />ಕ್ಯೂನಲ್ಲಿ, ಟ್ರಾಫಿಕ್ನಲ್ಲಿ ಕಾಯದಂತೆ,<br />ನನ್ನ ಬೇಡಿಕೆಗಳನ್ನೆಲ್ಲ ಮನ್ನಿಸು ದೇವ</p>.<p>ಸ್ವಗತದ ಮರುಳರಿಗೂ,<br />ಬ್ಲೂಟೂತ್ನ ನನಗೂ,<br />ಭೇದ ಕಾಣಿಸು</p>.<p>ತಿಂಗಳ ಮಕ್ಕಳ ಸ್ಕೂಲ್ ಫೀಸಿಗೆ<br />ಸೆಕೆಂಡ್ ಹ್ಯಾಂಡ್ ಕಾರಿಗೆ, ಶಾಪಿಂಗ್ಗೆ,<br />ಸಮಯಕ್ಕೆ ದುಡ್ಡ ಕರುಣಿಸು ದೇವರೇ</p>.<p>ತಲೆ ತುಂಬಾ ಜೇನುಗೂಡಿದ್ದ ಹಳ್ಳಿ ಹುಡುಗನ<br />ನೆರಳಾದರೂ ಉಳಿಯಲಿ<br />ಅಚಾನಕ್ಕಾಗಿ ಬಾಲ್ಯ ಗೆಳೆಯರು ಸಿಕ್ಕಾಗ<br />ಕನಿಷ್ಠ ಅವರ ಹೆಸರಾದರೂ ಮರಳಲಿ</p>.<p>ಬೇರು ಸಡಿಲುಗೊಂಡ, ನೀರು ದಕ್ಕದ ಮರಗಳು<br />ಜೋರು ಮಳೆಗೆ, ಬಿರುಗಾಳಿಗೆ<br />ನಗರವಾಸಿಗಳು ರಸ್ತೆ ಗುಂಡಿಗೆ<br />ಬೀಳಿಸದಿರು ತಂದೆ</p>.<p>ಆಗಾಗ್ಗೆ ಕನಸ ಕೊಡುತ್ತಿರು<br />ಎರಡಂತಸ್ತಿನ ವಿಲ್ಲಾ ಕೊಂಡಂತೆ<br />ವರ್ಷಕ್ಕೆರಡು ವಿದೇಶಿ ಪ್ರವಾಸ ಹೋದಂತೆ</p>.<p>ಒಂದೇ ಸೂರಡಿ ಇದ್ದರೂ<br />ಒಂದೇ ಸ್ಕ್ರೀನ್ನಲ್ಲಿ ತೋರಿಸು<br />ದೇವ, ಮಡದಿ ಮಕ್ಕಳನ್ನ</p>.<p>ದುಂಡಗಿನ ಗಾಜಿನ ಹೂಜಿ ಮೀನು ನಾನು<br />ಆಳ, ಅಗಲ ಅರಿಯುವಂತೆ<br />ತಾರಸಿಯ ಹೂ ಕುಂಡದ ಬೇರು ನಾನು<br />ನಿಜ ನೆಲವು ಸಿಕ್ಕುವಂತೆ<br />ಮಾಡು ಪ್ರಭುವೇ<br />ಬೇರು ಆಳಕ್ಕಿಳಿಯಲು, ಮತ್ತೆ ಚಿಗುರಲು</p>.<p>(ಆದರೆ ಬೇರು ಯಾವ ಕಾಂಪೌಂಡ್ಗೂ ತಾಗದಿರಲಿ)</p>.<p>ಜೀವಾವಧಿ ಶಿಕ್ಷೆ ಜಾರಿಯಾಗಿರುವ ಖೈದಿಯಂತೆ<br />ಶಾಪಗ್ರಸ್ತ ಗಂಧರ್ವನಂತೆ<br />ನಾನು<br />ಕೊನೆಯರೆಗೂ ಉಸಿರಾದರೂ<br />ಬಸವಳಿಯದಂತೆ ದಕ್ಕಲಿ</p>.<p>ಎಲ್ಲರೂ ಎಲ್ಲರ ವಿಮರ್ಶಿಸುವಾಗ,<br />ಎಲ್ಲಿ ನಿಂತರೂ ಇನ್ನೊಬ್ಬರಿಗೆ ಅಡ್ಡಿಯಾದಾಗ,<br />ಅಭುಕ್ತ ಮೂಲೆಯ ಕರುಣಿಸು<br />ಯಾರಿಗೂ ಕಾಣದಂತೆ ಬಿಕ್ಕಲು<br />ನನ್ನೊಂದಿಗೆ ನಾನೇ ಮಾತಾಡಲು</p>.<p>ಟ್ರಾಫಿಕ್ನಲ್ಲಿ ಮಂಗಳಮುಖಿಯರು ಅಚಾನಕ್ಕಾಗಿ<br />ಬೆನ್ನು ಚಪ್ಪರಿಸಿದಂತೆ,<br />ಮನೆಯವರ ಆತ್ಮೀಯತೆ ಅಪರೂಪಕ್ಕಾದರೂ ಸಿಕ್ಕಲಿ<br />ಬತ್ತಿದ ಬಾವಿಯಲ್ಲಿ ಸೆಲೆ ಉಕ್ಕುವಂತೆ</p>.<p>ಮೆಟ್ರೊನಲ್ಲಿ ಒಣ ಕಟ್ಟಿಗೆಯಂತೆ ನಿಂತ ಮುದುಕನನ್ನೂ<br />ದೂರದಿಂದ ಅಮ್ಮನಂತೆ ಕಾಣುವ ಮುದುಕಿಯನ್ನೂ<br />ತೂರಿಸಿ ಜ್ಞಾನೋದಯವಾಗುವಂತೆ ಮಾಡಬೇಡ</p>.<p>ಕನ್ನಡಿಯಲ್ಲಿ ನನ್ನ ಮುಖ ನನಗೇ ಗುರುತು ಸಿಗದಾದಾಗ<br />ನೀನ್ಯಾರೆಂದು ನಗರ ಕೇಳಿದಾಗ<br />ಪೂರ್ತಿ ಮಳೆಯಲ್ಲಿ ತೋಯಿಸಿ<br />ಪ್ರವಾಹದಲ್ಲಿ ಹಳ್ಳಿಗೆ ರವಾನಿಸು</p>.<p><em><strong>–ಶೈಲೇಶ್ ಕುಮಾರ್ ಶಿವಕುಮಾರ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>