<p>ಎಂದೂ ಹೊಟ್ಟೆ ತುಂಬದ<br>ಆ ಬಡಕಲು ಬಾಲ್ಯಕ್ಕೆ<br>ಅನ್ನ ಆಸರೆಯಾದ<br>ನನ್ನಪ್ಪ ನೆಟ್ಟ ತೆಂಗಿನ ಮರ<br>ನಾನು ಹುಟ್ಟಿದ ವರ್ಷವೇ ಫಲಗಟ್ಟಿತ್ತಂತೆ!</p>.<p>ಕಾಲೇಜು ಮಾಸ್ತರರು ಇತಿಹಾಸ ಕಲಿಸುವಾಗ,<br>ಕನ್ನಡ ಮಾಸ್ತರರು ಕವಿತೆ ಬಣ್ಣಿಸುವಾಗ<br>ಆ ಕಲ್ಪವೃಕ್ಷ ಕಣ್ಮುಂದೆ ಬಂದಿತ್ತು,<br>ಇಡೀ ಮನೆಯ ಕಷ್ಟ ಸುಖಗಳ<br>ನಡೆಸುವ ಆ ಮರ ಅಪ್ಪನಂತೆಯೂ<br>ಗಾಂಧಿ ತಾತನಂತೆಯೂ ಕಾಣುತ್ತಿತ್ತು!</p>.<p>ಇಂದು ಆ ನೆನಪುಗಳೂ<br />ಮೈನವಿರೇಳಿಸುತ್ತವೆ:<br />ತುಪಾಕಿಗೂ ಬಗ್ಗದ<br />ಬಡಕಲು ಮೈಯ ತೆಂಗಿನ ತೊಗಟೆ,<br />ಸ್ವಾರ್ಥ, ಸಣ್ಣತನಗಳ ಮೀರಿದ<br />ವಿಶಾಲತೆಯ ಕುರುಹಾದ<br />ಎತ್ತರೆತ್ತರ ಹರಡಿದ ಗರಿಗಳ ಘನತೆ.</p>.<p>ಸತ್ತ ಹಿರಿಯರಿಗೆ ಎಡೆ ಇಟ್ಟು<br />ಸ್ವರ್ಗದಲ್ಲೇ ತಂಪಾಗಿರಿಸುವ<br />ಮಹಾನವಮಿಯಲ್ಲಿ ಮಗ್ನರಾದ ಮಂದಿಗೆ<br />ನೀನು ಹಿರಿಯನೆನಿಸುವುದೇ ಇಲ್ಲ;<br />ನೀನು ಸತ್ತೆ ಎಂದು ಸ್ಮರಿಸುವ<br />ಭಾಗ್ಯವೂ ನಮ್ಮದಲ್ಲ;<br />ಕೊಂದ ಪಾಪಪ್ರಜ್ಞೆಯಂತೂ<br />ಇಲ್ಲವೇ ಇಲ್ಲ!<br />ಹೆಸರಿನ ಫಲವುಣ್ಣಲು<br />ಸ್ಪರ್ಧೆಗಿಳಿದವರೇ ಎಲ್ಲ<br />ನಿನ್ನುಸಿರ ನಾದವನು<br />ದಮನಿಗಳ ಮಿಡಿತವನು<br />ಕೇಳುವವರಿಲ್ಲ!</p>.<p>ನನ್ನಪ್ಪ ನೆಟ್ಟ ತೆಂಗಿನ ಮರಕ್ಕಾದರೂ<br />ವಾರಸುದಾರರಿದ್ದೇವೆ ಹಲವರು;<br />ನೀ ನೆಟ್ಟ ಸತ್ಯ, ಸರಳತೆಗಳ ಸಮೃದ್ಧ ವನಕ್ಕೆ<br />ಬಾಡಿಗೆ ಕಾವಲುಗಾರರೂ ಗತಿಯಿಲ್ಲ;<br />ಈ ಗಾಂಧೀವನದ ನಿರ್ಲಜ್ಜ ಒತ್ತುವರಿಗೆ<br />ನಿಂತವರೇ ಎಲ್ಲ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಂದೂ ಹೊಟ್ಟೆ ತುಂಬದ<br>ಆ ಬಡಕಲು ಬಾಲ್ಯಕ್ಕೆ<br>ಅನ್ನ ಆಸರೆಯಾದ<br>ನನ್ನಪ್ಪ ನೆಟ್ಟ ತೆಂಗಿನ ಮರ<br>ನಾನು ಹುಟ್ಟಿದ ವರ್ಷವೇ ಫಲಗಟ್ಟಿತ್ತಂತೆ!</p>.<p>ಕಾಲೇಜು ಮಾಸ್ತರರು ಇತಿಹಾಸ ಕಲಿಸುವಾಗ,<br>ಕನ್ನಡ ಮಾಸ್ತರರು ಕವಿತೆ ಬಣ್ಣಿಸುವಾಗ<br>ಆ ಕಲ್ಪವೃಕ್ಷ ಕಣ್ಮುಂದೆ ಬಂದಿತ್ತು,<br>ಇಡೀ ಮನೆಯ ಕಷ್ಟ ಸುಖಗಳ<br>ನಡೆಸುವ ಆ ಮರ ಅಪ್ಪನಂತೆಯೂ<br>ಗಾಂಧಿ ತಾತನಂತೆಯೂ ಕಾಣುತ್ತಿತ್ತು!</p>.<p>ಇಂದು ಆ ನೆನಪುಗಳೂ<br />ಮೈನವಿರೇಳಿಸುತ್ತವೆ:<br />ತುಪಾಕಿಗೂ ಬಗ್ಗದ<br />ಬಡಕಲು ಮೈಯ ತೆಂಗಿನ ತೊಗಟೆ,<br />ಸ್ವಾರ್ಥ, ಸಣ್ಣತನಗಳ ಮೀರಿದ<br />ವಿಶಾಲತೆಯ ಕುರುಹಾದ<br />ಎತ್ತರೆತ್ತರ ಹರಡಿದ ಗರಿಗಳ ಘನತೆ.</p>.<p>ಸತ್ತ ಹಿರಿಯರಿಗೆ ಎಡೆ ಇಟ್ಟು<br />ಸ್ವರ್ಗದಲ್ಲೇ ತಂಪಾಗಿರಿಸುವ<br />ಮಹಾನವಮಿಯಲ್ಲಿ ಮಗ್ನರಾದ ಮಂದಿಗೆ<br />ನೀನು ಹಿರಿಯನೆನಿಸುವುದೇ ಇಲ್ಲ;<br />ನೀನು ಸತ್ತೆ ಎಂದು ಸ್ಮರಿಸುವ<br />ಭಾಗ್ಯವೂ ನಮ್ಮದಲ್ಲ;<br />ಕೊಂದ ಪಾಪಪ್ರಜ್ಞೆಯಂತೂ<br />ಇಲ್ಲವೇ ಇಲ್ಲ!<br />ಹೆಸರಿನ ಫಲವುಣ್ಣಲು<br />ಸ್ಪರ್ಧೆಗಿಳಿದವರೇ ಎಲ್ಲ<br />ನಿನ್ನುಸಿರ ನಾದವನು<br />ದಮನಿಗಳ ಮಿಡಿತವನು<br />ಕೇಳುವವರಿಲ್ಲ!</p>.<p>ನನ್ನಪ್ಪ ನೆಟ್ಟ ತೆಂಗಿನ ಮರಕ್ಕಾದರೂ<br />ವಾರಸುದಾರರಿದ್ದೇವೆ ಹಲವರು;<br />ನೀ ನೆಟ್ಟ ಸತ್ಯ, ಸರಳತೆಗಳ ಸಮೃದ್ಧ ವನಕ್ಕೆ<br />ಬಾಡಿಗೆ ಕಾವಲುಗಾರರೂ ಗತಿಯಿಲ್ಲ;<br />ಈ ಗಾಂಧೀವನದ ನಿರ್ಲಜ್ಜ ಒತ್ತುವರಿಗೆ<br />ನಿಂತವರೇ ಎಲ್ಲ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>