<p><strong>ಬುಲಂದ್ಶಹರ್ (ಉತ್ತರಪ್ರದೇಶ):</strong> ಇಲ್ಲಿನ ರಾಜ್ಯ ಮಟ್ಟದ ಕಬಡ್ಡಿ ಆಟಗಾರ, 22 ವರ್ಷ ವಯಸ್ಸಿನ ಬ್ರಿಜೇಶ್ ಸೋಲಂಕಿ ಅವರು ನಾಯಿ ಕಚ್ಚಿದ್ದ ಪರಿಣಾಮ ರೇಬಿಸ್ನಿಂದ ಬುಧವಾರ ಮೃತಪಟ್ಟಿದ್ದಾರೆ. </p>.<p>ಮಾರ್ಚ್ನಲ್ಲಿ ಅವರು ಇಲ್ಲಿನ ಫರಾನಾ ಗ್ರಾಮದ ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋದ ವೇಳೆ ಅದು ಅವರ ಕೈಗೆ ಕಚ್ಚಿತ್ತು. ಆದರೆ ಇದನ್ನು ಸಣ್ಣ ಗಾಯವೆಂದು ನಿರ್ಲಕ್ಷಿಸಿ ಅವರು ರೇಬಿಸ್ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.</p>.<p>‘ಕೈನೋವು ಕಾಣಿಸಿಕೊಂಡರೂ ಅದು ಕಬಡ್ಡಿ ಆಟದಿಂದ ಆಗಿರಬಹುದು ಎಂದು ಅವರು ಭಾವಿಸಿದ್ದರು’ ಎಂದು ಅವರ ಕೋಚ್ ಪ್ರವೀಣ್ ಕುಮಾರ್ ತಿಳಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. </p>.<p>ಜೂನ್ 28ರಂದು ಅವರ ಆರೋಗ್ಯ ಬಿಗಡಾಯಿಸಿತ್ತು. ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ. ಮೂವರು ಸೋದರರಲ್ಲಿ ಅವರು ಕಿರಿಯವರಾಗಿದ್ದರು.</p>.<p>ಮುಂಜಾಗ್ರತೆ ಕ್ರಮವಾಗಿ ಆರೋಗ್ಯ ಇಲಾಖೆ, ಗ್ರಾಮದ 29 ಮಂದಿಗೆ ರೇಬಿಸ್ ನಿರೋಧಕ ಲಸಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬುಲಂದ್ಶಹರ್ (ಉತ್ತರಪ್ರದೇಶ):</strong> ಇಲ್ಲಿನ ರಾಜ್ಯ ಮಟ್ಟದ ಕಬಡ್ಡಿ ಆಟಗಾರ, 22 ವರ್ಷ ವಯಸ್ಸಿನ ಬ್ರಿಜೇಶ್ ಸೋಲಂಕಿ ಅವರು ನಾಯಿ ಕಚ್ಚಿದ್ದ ಪರಿಣಾಮ ರೇಬಿಸ್ನಿಂದ ಬುಧವಾರ ಮೃತಪಟ್ಟಿದ್ದಾರೆ. </p>.<p>ಮಾರ್ಚ್ನಲ್ಲಿ ಅವರು ಇಲ್ಲಿನ ಫರಾನಾ ಗ್ರಾಮದ ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯನ್ನು ರಕ್ಷಿಸಲು ಹೋದ ವೇಳೆ ಅದು ಅವರ ಕೈಗೆ ಕಚ್ಚಿತ್ತು. ಆದರೆ ಇದನ್ನು ಸಣ್ಣ ಗಾಯವೆಂದು ನಿರ್ಲಕ್ಷಿಸಿ ಅವರು ರೇಬಿಸ್ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.</p>.<p>‘ಕೈನೋವು ಕಾಣಿಸಿಕೊಂಡರೂ ಅದು ಕಬಡ್ಡಿ ಆಟದಿಂದ ಆಗಿರಬಹುದು ಎಂದು ಅವರು ಭಾವಿಸಿದ್ದರು’ ಎಂದು ಅವರ ಕೋಚ್ ಪ್ರವೀಣ್ ಕುಮಾರ್ ತಿಳಿಸಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. </p>.<p>ಜೂನ್ 28ರಂದು ಅವರ ಆರೋಗ್ಯ ಬಿಗಡಾಯಿಸಿತ್ತು. ನೊಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದಾರೆ. ಮೂವರು ಸೋದರರಲ್ಲಿ ಅವರು ಕಿರಿಯವರಾಗಿದ್ದರು.</p>.<p>ಮುಂಜಾಗ್ರತೆ ಕ್ರಮವಾಗಿ ಆರೋಗ್ಯ ಇಲಾಖೆ, ಗ್ರಾಮದ 29 ಮಂದಿಗೆ ರೇಬಿಸ್ ನಿರೋಧಕ ಲಸಿಕೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>