<p><strong>ಮಂಡ್ಯ</strong>: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ 157 ಕಲಾತಂಡಗಳಿಂದ 2250 ಕಲಾವಿದರು ಭಾಗವಹಿಸಿದ್ದು, ತಂಡಗಳ ನಡುವೆ ಅಂತರ ಹೆಚ್ಚಿದ ಕಾರಣ ಮೆರವಣಿಗೆಯ ಸೊಬಗು ಕಳೆಗುಂದಿತು.</p><p>ಕಲಾತಂಡಗಳ ನಡುವೆ ಸಮನ್ವಯತೆ ಸಾಧಿಸಿ ಒಟ್ಟಾಗಿ ಕರೆದೊಯ್ಯಬೇಕಿದ್ದ ಮೆರವಣಿಗೆ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಕಾಳಜಿ ತೋರದ ಕಾರಣ ಕಲಾತಂಡಗಳು ಲಯ ತಪ್ಪಿದವು.</p><p><strong>ಪ್ರೇಕ್ಷಕರ ಕೊರತೆ:</strong></p><p>ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಎರಡೂ ಬದಿ ಕಿಕ್ಕಿರಿದು ಸೇರಿರುತ್ತಾರೆ ಎಂಬ ಕಲಾವಿದರ ನಿರೀಕ್ಷೆ ಹುಸಿಯಾಯಿತು.</p><p> ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಾತ್ರ ಜನಸಂದಣಿ ಇದ್ದುದನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಕಲೆಯನ್ನು ಕಣ್ತುಂಬಿಕೊಳ್ಳಬೇಕಾದ ಕಲಾಭಿಮಾನಿಗಳ ಕೊರತೆ ತೀವ್ರ ಕಾಡಿತು. </p><p>ಹೀಗಾಗಿ ಕಲಾವಿದರು ಕೆಲವು ಕಡೆ ಕಲಾ ಪ್ರದರ್ಶನ ನೀಡದೆ ಕೈ ಬೀಸಿಕೊಂಡು ಮುಂದೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು</p><p><strong>ಶಾಲಾ ಮಕ್ಕಳ ಹರ್ಷೋದ್ಗಾರ</strong></p><p>ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಕಲಾವಿದರನ್ನು ನೋಡಿ ಹರ್ಷೋದ್ಗಾರ ಮಾಡಿದರು.</p><p>ಯುವಕ- ಯುವತಿಯರು ಹಾಗೂ ಶಾಲಾ ಮಕ್ಕಳು ಕಲಾವಿದರೊಂದಿಗೆ ನೃತ್ಯ ಮಾಡುತ್ತಾ ಸಂಭ್ರಮಿಸಿದರು.</p><p> ಮಹಿಳೆಯರು ಗಾರುಡಿಗೊಂಬೆ ವೀರಗಾಸೆ ಕಲಾವಿದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.</p> .ಮಂಡ್ಯ: ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ 157 ಕಲಾತಂಡಗಳಿಂದ 2250 ಕಲಾವಿದರು ಭಾಗವಹಿಸಿದ್ದು, ತಂಡಗಳ ನಡುವೆ ಅಂತರ ಹೆಚ್ಚಿದ ಕಾರಣ ಮೆರವಣಿಗೆಯ ಸೊಬಗು ಕಳೆಗುಂದಿತು.</p><p>ಕಲಾತಂಡಗಳ ನಡುವೆ ಸಮನ್ವಯತೆ ಸಾಧಿಸಿ ಒಟ್ಟಾಗಿ ಕರೆದೊಯ್ಯಬೇಕಿದ್ದ ಮೆರವಣಿಗೆ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಕಾಳಜಿ ತೋರದ ಕಾರಣ ಕಲಾತಂಡಗಳು ಲಯ ತಪ್ಪಿದವು.</p><p><strong>ಪ್ರೇಕ್ಷಕರ ಕೊರತೆ:</strong></p><p>ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಜನರು ರಸ್ತೆಯ ಎರಡೂ ಬದಿ ಕಿಕ್ಕಿರಿದು ಸೇರಿರುತ್ತಾರೆ ಎಂಬ ಕಲಾವಿದರ ನಿರೀಕ್ಷೆ ಹುಸಿಯಾಯಿತು.</p><p> ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಾತ್ರ ಜನಸಂದಣಿ ಇದ್ದುದನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಕಲೆಯನ್ನು ಕಣ್ತುಂಬಿಕೊಳ್ಳಬೇಕಾದ ಕಲಾಭಿಮಾನಿಗಳ ಕೊರತೆ ತೀವ್ರ ಕಾಡಿತು. </p><p>ಹೀಗಾಗಿ ಕಲಾವಿದರು ಕೆಲವು ಕಡೆ ಕಲಾ ಪ್ರದರ್ಶನ ನೀಡದೆ ಕೈ ಬೀಸಿಕೊಂಡು ಮುಂದೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು</p><p><strong>ಶಾಲಾ ಮಕ್ಕಳ ಹರ್ಷೋದ್ಗಾರ</strong></p><p>ರಸ್ತೆಯ ಇಕ್ಕೆಲಗಳಲ್ಲಿ ನೆರದಿದ್ದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಕಲಾವಿದರನ್ನು ನೋಡಿ ಹರ್ಷೋದ್ಗಾರ ಮಾಡಿದರು.</p><p>ಯುವಕ- ಯುವತಿಯರು ಹಾಗೂ ಶಾಲಾ ಮಕ್ಕಳು ಕಲಾವಿದರೊಂದಿಗೆ ನೃತ್ಯ ಮಾಡುತ್ತಾ ಸಂಭ್ರಮಿಸಿದರು.</p><p> ಮಹಿಳೆಯರು ಗಾರುಡಿಗೊಂಬೆ ವೀರಗಾಸೆ ಕಲಾವಿದರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.</p> .ಮಂಡ್ಯ: ಧ್ವಜಾರೋಹಣದ ಮೂಲಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>