ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ರೋಡ್‌ ಷೊ

ರಾಜರಾಜೇಶ್ವರಿನಗರ ಕ್ಷೇತ್ರ
Last Updated 7 ಮೇ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಸಂಜೆ ಯಶವಂತಪುರದಲ್ಲಿ ಭರ್ಜರಿ ರೋಡ್ ಷೋ ನಡೆಸಿದರು.

ಒಂದು ತಾಸು ತಡವಾಗಿ ಬಂದ ಶಾ ಮತ್ತಿಕೆರೆ ಸರ್ಕಲ್ ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಹೂ ಮಾಲೆ ಹಾಕಿದರು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಾಗೆ ಭಾರಿ ಗಾತ್ರದ ಕನಕಾಂಬರ ಹೂವಿನ ಹಾರ ಹಾಕಿ ಮೈಸೂರು ಪೇಟಾ ತೊಡಿಸಿ ಗೌರವ ಸಮರ್ಪಿಸಿದರು. ಪಟಾಕಿ ಸಿಡಿಸಿ ಷೋಗೆ ಚಾಲನೆ ನೀಡಲಾಯಿತು.

ಜೆ.ಪಿ.ಪಾರ್ಕ್, ಬಿ.ಕೆ‌. ನಗರ, ತ್ರಿವೇಣಿ ರಸ್ತೆ,, ಯಶವಂತಪುರ ಸರ್ಕಲ್, ಬಿ.ಕೆ.ನಗರ 10ನೇ ಕ್ರಾಸ್, ಆಂಜನೇಯ ಟೆಂಪಲ್ ರಸ್ತೆ, ಎಲ್.ಎನ್‌.ಕಾಲೋನಿ ಮುಖಾಂತರ ತೆರೆದ ವಾಹನದಲ್ಲಿ ಪ್ರಚಾರ ಕಾರ್ಯ ನಡೆಸಿದರು.

ಅತ್ಯುತ್ಸಾಹದಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಕೇಸರಿ ಪೇಟಾ ತೊಟ್ಟು ‘ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ’ ಎಂದು ಘೋಷಣೆ ಕೂಗುತ್ತಾ ಸಾಗಿದರು. ರಸ್ತೆಯ ಇಕ್ಕೆಲಗಳಲ್ಲೂ ಕಿಕ್ಕಿರಿದು ಸೇರಿದ್ದ ಸಾವಿರಾರು ಜನರು ಶಾ ಅವರ ಉತ್ಸಾಹ ಇಮ್ಮಡಿಗೊಳಿ
ಸಿದರು. ಮುಖಂಡರಾದ ಆರ್. ನಂಜುಂಡಪ್ಪ,

ಶಾಸಕ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ್, ಪಾಲಿಕೆಯ ಸದಸ್ಯೆ ಮಮತಾ ವಾಸುದೇವ್, ಲಕ್ಷೀಕಾಂತ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT