ಶಿವಮೊಗ್ಗ ಮೂಲದ ನಂಜುಂಡಸ್ವಾಮಿ ಬೆಳೆದದ್ದು ಕಲಾ ಪರಿಸರದಲ್ಲಿ. ಅವರ ತಂದೆಯೇ ಕಲಾಭ್ಯಾಸದ ಮೊದಲ ಗುರು. ನಂತರ ಶಿಲ್ಪಿ ಕೆ. ಜ್ಞಾನೇಶ್ವರ ಅವರ ಬಳಿ ರೇಖಾಶಾಸ್ತ್ರ, ಸಾಂಪ್ರದಾಯಿಕ ಕಲೆಯನ್ನು ಕ್ರಮಬದ್ಧವಾಗಿ ಕಲಿತರು. ಶಿವಮೊಗ್ಗದಲ್ಲೇ ತಮ್ಮ ಕಲಾಜೀವನ ಆರಂಭಿಸಿದ ಸ್ವಾಮಿ, ರಾಮಧ್ಯಾನಿ, ಸುಬ್ರಹ್ಮಣ್ಯ, ಜೇಮ್ಸವಾಜ್ ಅವರ ಪ್ರೋತ್ಸಾಹದಿಂದ ವ್ಯಂಗ್ಯಚಿತ್ರಕಲೆಯಲ್ಲೂ ಜನಪ್ರಿಯತೆ ಗಳಿಸಿಕೊಂಡರು.