ಅವರ ಹುಟ್ಟೂರು ಗುಬ್ಬಿ ತಾಲ್ಲೂಕಿನ ಗೋಳೇನಹಳ್ಳಿ. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದ ಎಸ್ಸೆಸ್ಸೆಲ್ಸಿ ನಂತರ ವಿದ್ಯಾಭ್ಯಾಸ ಮುಂದುವರಿಸಲು ಅವರಿಗೆ ಸಾಧ್ಯವಾಗಿಲ್ಲ. ಉದ್ಯೋಗ ಅರಸಿ ತಿಪಟೂರಿಗೆ ಬಂದು ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ 15 ವರ್ಷ ದುಡಿದರು. ನಂತರ ಚಿಕ್ಕದಾಗಿ ಸ್ವಂತ ಹೋಟೆಲ್ ಆರಂಭಿಸಿದರು. ವಿದ್ಯಾಭ್ಯಾಸದ ಸಮಯದಲ್ಲಿ ತಾವು ಅನುಭವಿಸಿದ ಕಷ್ಟ ನೆನಪಿಗೆ ಬಂತು. ಹಸಿವು ಮಕ್ಕಳ ಓದಿಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಹೋಟೆಲ್ನಲ್ಲಿ ಅತ್ಯಲ್ಪ ಹಣ ಪಡೆದು ಊಟ, ತಿಂಡಿ ನೀಡಲು ಆರಂಭಿಸಿದರು.