‘ಶರಣರ ಮಾತನ್ನು ಎಲ್ಲ ಜನಾಂಗದವರೂ ಪಾಲಿಸುತ್ತಾರೆ ಎನ್ನಲಾಗುವುದಿಲ್ಲ. ಹಾಗಾಗಿ, ಮಾದಿಗ, ಛಲವಾದಿ, ಮಡಿವಾಳ, ಯಾದವ, ರೆಡ್ಡಿ, ಹೀಗೆ ಅವರವರ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ ದೀಕ್ಷೆ ನೀಡಿ, ಅವರ ಮೂಲಕವೇ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಾತಿಗೊಂದು ಮಠದ ಪರಿಕಲ್ಪನೆಯಲ್ಲಿ ಕಾಳಜಿ ಇದೆಯೇ ಹೊರತು ಅನ್ಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.