ಬ್ರಿಟಿಷರ ವಿರುದ್ಧ ಸೆಟೆದು ನಿಂತವರನ್ನು ಅಂಡಮಾನ್ನಲ್ಲಿ ಕರಿನೀರಿನ ಶಿಕ್ಷೆಗೊಳಪಡಿಸುತ್ತಿದ್ದ ಅಮಾನವೀಯ ಘಟನೆಯ ಕುರಿತು ಗೊತ್ತಲ್ಲಾ? ಅಂಥ ಶಿಕ್ಷೆಗೊಳಗಾದ ಒಬ್ಬ ತ್ಯಾಗಿಯ ಕತೆಯಿದು. ಅಲ್ಲಿ ಶಿಕ್ಷೆಗೊಳಗಾದವರು ನೂರಾರು ಮಂದಿ. ಆದರೆ, ಆ ಪೈಕಿ ದಾಖಲೆಯಾಗಿ ಕಥೆಗಳಾದವರು, ಸಿನಿಮಾ, ನಾಟಕಗಳಾದವರು ಬೆರಳೆಣಿಕೆಯಷ್ಟು ಕೆಲವೇ ಮಂದಿ. ಆದರೆ, ಅದೆಷ್ಟೋ ತ್ಯಾಗಿಗಳು ಕಾಲಾಪಾನಿಯ ಶಿಕ್ಷೆಗೊಳಗಾಗಿ ಅಜ್ಞಾತವಾಗಿ ಕಾಲನ ಮರೆಗೆ ಸರಿದಿದ್ದಾರೆ. ಅಂಥ ಬೆಳಕಿಗೆ ಬಾರದ ಹೋರಾಟಗಾರ ಸರಜೂನ ಕಥೆಯೇ ಇದು.