<p><strong>ಮತ್ತೆ ಬರುವೆಯಾ ರಾಮ?</strong></p>.<p>ಯಾವ ಮೋಹಕ ಸೆಳತ<br />ನನ್ನ ಕರೆದಿದ್ದು ಮೇಲಿಂದ ಕೆಳಗೆ<br />ವಸುಂಧರೆಯ ಕಡೆಗೆ–<br />ರಾಮನ ಮೇಲಿನ ಭಕ್ತಿಯೇ</p>.<p>ಈ ಅಂಗೈಯೊಳಗಿನ ಕಾಳಿಗಿಂತ<br />ಅಂದು ನನ್ನ ಬೆನ್ನ ಮೇಲೆಳದ ಮೂರು ಗೆರೆಯ<br />ನಿನ್ನ ಕೈಯ ಕಂಪು ತಂಪಾಗಿ<br />ಮನದಾಳದಲ್ಲೆಲ್ಲೋ ಹೆಪ್ಪುಗಟ್ಟಿದೆ ರಾಮ</p>.<p>ಮತ್ತೆ ಬರುವೆಯಾ ರಾಮ ಕಾಡಿಗೆ<br />ಇನ್ನೊಬ್ಬ ದಶರಥ ಸಿಕ್ಕರೂ ಸಿಕ್ಕಾನು<br />ನಿನ್ನ ಕಾಡಿಗೆ ಅಟ್ಟಲು<br />ಭರತನಿಗೆ ಪಟ್ಟಕಟ್ಟಲು<br />ಬಂದರೂ ಬಂದಾಳು<br />ನಿನ್ನ ಜೊತೆ<br />ಸೀತಾಮಾತೆ</p>.<p>ಆದರೆ ಎಲ್ಲಿದೆ ರಾಮ ಆ ದಟ್ಟ ಕಾಡು<br />ಎಲ್ಲ ನಾಡಾಗಿದೆ<br />ನರಕದ ಬೀಡಾಗಿದೆ<br />ನಿನ್ನ ನವಿರಾದ ಆ ಕೈಯ ಸ್ಪರ್ಶಸುಖ<br />ಮತ್ತೆ ಸಿಗಲಾರದೇನೋ?<br />ನನಗೆ ದಕ್ಕಲಾರದೇನೋ?<br />ಮತ್ತೆ ಬರುವೆಯಾ ರಾಮ ಕಾಡಿಗೆ?</p>.<p>-ಕಮಲಾಕರ ಕೆ.ಆರ್.</p>.<p>ಕೆನರಾ ಬ್ಯಾಂಕ್, ರಿಕವರಿ ವಿಭಾಗ.<br />112,ಜೆ ಸಿ ರಸ್ತೆ,ಬೆಂಗಳೂರು-2<br />ಮೊ. 9448343367<br />kamalakarakr@gmail.com</p>.<p>***</p>.<p><strong>ಅಳಿಲು ಸೇವೆ</strong></p>.<p>ನಾನಿಟ್ಟ ಕಾಳುಗಳನು ಪಟ್ಟನೆ<br />ಪುಟ್ಟ ಕೈಗಳಿರಿಸಿಕೊಂಡು<br />ಚಂಗನೆ ಮಾಯವಾಯಿತೊಂದು<br />ಕೆಂಬಣ್ಣದ ಚೆಂದದ ಇಣಚಿ</p>.<p>ಮತ್ತದೇ ಮರದಿಂದಿಳಿದು<br />ಆಕಡೆ ಈಕಡೆ ಇಣುಕುತ<br />ಬರುತಿತ್ತು ಮರಿಗಳಿಗೆ<br />ತನ್ನವರಿಗೆ ಕಾಳುಗಳನು ಹಂಚಿ</p>.<p>ರಾಮ ಸೇತುವೆ ಕಟ್ಟುವಾಗ<br />ಸೇವೆ ಮಾಡಿದ ಸಣ್ಣ ಅಳಿಲು<br />ತನ್ನ ಪುಟ್ಟ ಕರಗಳಲಿ<br />ತಂದಿತ್ತಾಗ ಹೊಳೆವ ಮಳಲು</p>.<p>ಅದೆಷ್ಟು ಹೊತ್ತು ಕಾದೆನು<br />ಹಸ್ತಗಳಲಿ ಕಾಳುಗಳನಿಡಿದು<br />ಆದರೆ ಬರಲೇ ಇಲ್ಲ<br />ಶ್ರೀರಾಮನಿಂದ ಬೆನ್ನೊಳು ಮೂರು<br />ಬಂಗಾರದ ಗೆರೆಗಳನೆಳೆಸಿಕೊಂಡ<br />ಪುಟ್ಟ ಇಣಚಿ ಮತ್ತೆಂದು.</p>.<p>ರಂಜಿತಾ ಎಂ.<br />ಕೊಪ್ಪ ತಾಲೂಕು<br />ಚಿಕ್ಕಮಗಳೂರು ಜಿಲ್ಲೆ<br />ಬಸರಿಕಟ್ಟೆ ಅಂಚೆ<br />577114</p>.<p><br />***<br /><strong>ಇಣಚಿಯ ಇಣುಕು</strong></p>.<p>ಇಣಚಿಯೊಂದು ಇಣುಕುತಲಿ<br />ಬೊಗಸೆಯಲಿ ಕಾಳ ಕಂಡಿದೆ</p>.<p>ಮೆಲ್ಲ-ಮೆಲ್ಲ ತೆವಳಿ ಬಂದು<br />ತನ್ನಾಹಾರವ ಪಡೆದಿದೆ..<br />ತನ್ನ ಪುಟ್ಟ-ಪುಟ್ಟ ಕೈಗಳಲಿ<br />ಧನ್ಯವಾದ ಅರ್ಪಿಸಿದೆ</p>.<p>ಮೇಲಿನಿಂದ ಕೆಳಗೆ ಬರಲಿ<br />ಮರದಲಿ ನೇತುಕೊಂಡಿದೆ<br />ಕೈ ತುಂಬ ಊಟ ತುಂಬಿಕೊಂಡು<br />ಓಡಿ ಹೋಗೋ ತುರ್ತಿನಲ್ಲಿದೆ</p>.<p>ಮಳಲ ಭಕ್ತಿ ತೋರಿ ತಾನು<br />ಅಳಿಲ ಸೇವೆ ಸಲ್ಲಿಸಿದೆ...<br />ಅದರ ಸಹಾಯ ನೆನೆದು<br />ಅಳಿಲಿಗೆ ಊಟ ನೀಡುತಿರುವೆ</p>.<p>~ವಿಭಾ ವಿಶ್ವನಾಥ್, ಹಾಸನ</p>.<p><br /><strong>ಮಯೂರ: ಜೂನ್, 2018ರ ಸಂಚಿಕೆಗೆ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಮತ್ತೆ ಬರುವೆಯಾ ರಾಮ?</strong></p>.<p>ಯಾವ ಮೋಹಕ ಸೆಳತ<br />ನನ್ನ ಕರೆದಿದ್ದು ಮೇಲಿಂದ ಕೆಳಗೆ<br />ವಸುಂಧರೆಯ ಕಡೆಗೆ–<br />ರಾಮನ ಮೇಲಿನ ಭಕ್ತಿಯೇ</p>.<p>ಈ ಅಂಗೈಯೊಳಗಿನ ಕಾಳಿಗಿಂತ<br />ಅಂದು ನನ್ನ ಬೆನ್ನ ಮೇಲೆಳದ ಮೂರು ಗೆರೆಯ<br />ನಿನ್ನ ಕೈಯ ಕಂಪು ತಂಪಾಗಿ<br />ಮನದಾಳದಲ್ಲೆಲ್ಲೋ ಹೆಪ್ಪುಗಟ್ಟಿದೆ ರಾಮ</p>.<p>ಮತ್ತೆ ಬರುವೆಯಾ ರಾಮ ಕಾಡಿಗೆ<br />ಇನ್ನೊಬ್ಬ ದಶರಥ ಸಿಕ್ಕರೂ ಸಿಕ್ಕಾನು<br />ನಿನ್ನ ಕಾಡಿಗೆ ಅಟ್ಟಲು<br />ಭರತನಿಗೆ ಪಟ್ಟಕಟ್ಟಲು<br />ಬಂದರೂ ಬಂದಾಳು<br />ನಿನ್ನ ಜೊತೆ<br />ಸೀತಾಮಾತೆ</p>.<p>ಆದರೆ ಎಲ್ಲಿದೆ ರಾಮ ಆ ದಟ್ಟ ಕಾಡು<br />ಎಲ್ಲ ನಾಡಾಗಿದೆ<br />ನರಕದ ಬೀಡಾಗಿದೆ<br />ನಿನ್ನ ನವಿರಾದ ಆ ಕೈಯ ಸ್ಪರ್ಶಸುಖ<br />ಮತ್ತೆ ಸಿಗಲಾರದೇನೋ?<br />ನನಗೆ ದಕ್ಕಲಾರದೇನೋ?<br />ಮತ್ತೆ ಬರುವೆಯಾ ರಾಮ ಕಾಡಿಗೆ?</p>.<p>-ಕಮಲಾಕರ ಕೆ.ಆರ್.</p>.<p>ಕೆನರಾ ಬ್ಯಾಂಕ್, ರಿಕವರಿ ವಿಭಾಗ.<br />112,ಜೆ ಸಿ ರಸ್ತೆ,ಬೆಂಗಳೂರು-2<br />ಮೊ. 9448343367<br />kamalakarakr@gmail.com</p>.<p>***</p>.<p><strong>ಅಳಿಲು ಸೇವೆ</strong></p>.<p>ನಾನಿಟ್ಟ ಕಾಳುಗಳನು ಪಟ್ಟನೆ<br />ಪುಟ್ಟ ಕೈಗಳಿರಿಸಿಕೊಂಡು<br />ಚಂಗನೆ ಮಾಯವಾಯಿತೊಂದು<br />ಕೆಂಬಣ್ಣದ ಚೆಂದದ ಇಣಚಿ</p>.<p>ಮತ್ತದೇ ಮರದಿಂದಿಳಿದು<br />ಆಕಡೆ ಈಕಡೆ ಇಣುಕುತ<br />ಬರುತಿತ್ತು ಮರಿಗಳಿಗೆ<br />ತನ್ನವರಿಗೆ ಕಾಳುಗಳನು ಹಂಚಿ</p>.<p>ರಾಮ ಸೇತುವೆ ಕಟ್ಟುವಾಗ<br />ಸೇವೆ ಮಾಡಿದ ಸಣ್ಣ ಅಳಿಲು<br />ತನ್ನ ಪುಟ್ಟ ಕರಗಳಲಿ<br />ತಂದಿತ್ತಾಗ ಹೊಳೆವ ಮಳಲು</p>.<p>ಅದೆಷ್ಟು ಹೊತ್ತು ಕಾದೆನು<br />ಹಸ್ತಗಳಲಿ ಕಾಳುಗಳನಿಡಿದು<br />ಆದರೆ ಬರಲೇ ಇಲ್ಲ<br />ಶ್ರೀರಾಮನಿಂದ ಬೆನ್ನೊಳು ಮೂರು<br />ಬಂಗಾರದ ಗೆರೆಗಳನೆಳೆಸಿಕೊಂಡ<br />ಪುಟ್ಟ ಇಣಚಿ ಮತ್ತೆಂದು.</p>.<p>ರಂಜಿತಾ ಎಂ.<br />ಕೊಪ್ಪ ತಾಲೂಕು<br />ಚಿಕ್ಕಮಗಳೂರು ಜಿಲ್ಲೆ<br />ಬಸರಿಕಟ್ಟೆ ಅಂಚೆ<br />577114</p>.<p><br />***<br /><strong>ಇಣಚಿಯ ಇಣುಕು</strong></p>.<p>ಇಣಚಿಯೊಂದು ಇಣುಕುತಲಿ<br />ಬೊಗಸೆಯಲಿ ಕಾಳ ಕಂಡಿದೆ</p>.<p>ಮೆಲ್ಲ-ಮೆಲ್ಲ ತೆವಳಿ ಬಂದು<br />ತನ್ನಾಹಾರವ ಪಡೆದಿದೆ..<br />ತನ್ನ ಪುಟ್ಟ-ಪುಟ್ಟ ಕೈಗಳಲಿ<br />ಧನ್ಯವಾದ ಅರ್ಪಿಸಿದೆ</p>.<p>ಮೇಲಿನಿಂದ ಕೆಳಗೆ ಬರಲಿ<br />ಮರದಲಿ ನೇತುಕೊಂಡಿದೆ<br />ಕೈ ತುಂಬ ಊಟ ತುಂಬಿಕೊಂಡು<br />ಓಡಿ ಹೋಗೋ ತುರ್ತಿನಲ್ಲಿದೆ</p>.<p>ಮಳಲ ಭಕ್ತಿ ತೋರಿ ತಾನು<br />ಅಳಿಲ ಸೇವೆ ಸಲ್ಲಿಸಿದೆ...<br />ಅದರ ಸಹಾಯ ನೆನೆದು<br />ಅಳಿಲಿಗೆ ಊಟ ನೀಡುತಿರುವೆ</p>.<p>~ವಿಭಾ ವಿಶ್ವನಾಥ್, ಹಾಸನ</p>.<p><br /><strong>ಮಯೂರ: ಜೂನ್, 2018ರ ಸಂಚಿಕೆಗೆ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>