<p>ಗುಡಿಸಲಲ್ಲೂ ಮಹಲಿನಲ್ಲೂ<br />ಅಮ್ಮಂದಿರಿಗೆ<br />ತಮ್ಮ ಕಂದರಲ್ಲಿ ಇಂದಿಗೂ<br />ಕಾಣುವ ಏಕೈಕ ಬಿಂಬ<br />ಮುದ್ದು ಗೋವಿಂದನೆಂಬ<br />ಕಣ್ಣಗೊಂಬೆಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಎರೆಮಣ್ಣಿನ ಬಣ್ಣದಲ್ಲೂ<br />ಸೌಂದರ್ಯದ ಸೂಜಿಗಲ್ಲು<br />ಉಂಟು ಎಂದು ತೋರಿದ<br />ಅನ್ವರ್ಥನಾಮನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಪಿಳ್ಳಂಗೋವಿಯ ಸ್ವಚ್ಛಂದ<br />ಸಮ್ಮೋಹಕ ನುಡಿತದಿಂದ<br />ಗೋಕುಲದೆದೆ ಸೂರೆಗೊಂಡ<br />ಜನಪದ ಕಲೆಗಾರನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಅಡೆತಡೆಗಳ ಪರಿವೆಯಿರದ<br />ಪ್ರೇಮವೆಂಬ ಹುಚ್ಚುಹೊಳೆಗೆ<br />ಸ್ಫೂರ್ತಿಯ ಸೆಲೆ ತಾನಾದ<br />ರಾಧಾಮಾಧವನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಹಳ್ಳಿಹೈದರಿಗೆ<br />ದಿಲ್ಲಿಯನ್ನೂ ಗೆಲ್ಲಬಲ್ಲೆವೆಂಬ<br />ಹುಮ್ಮಸ್ಸು ನೀಡಿದ<br />ಪೋರ ಕಂಸಾರಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಬೇಕಾದವರ ಎತ್ತರಿಸಿದ,<br />ಬೇಡದವರ ಒತ್ತರಿಸಿದ,<br />ನಿಗುರಿದವರ ಕತ್ತರಿಸಿದ<br />ಚತುರ ತಂತ್ರಗಾರನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಉಪದೇಶದ ಕೊನೆಗೆ,<br />ತನ್ನ ಆಯ್ಕೆಯ ಸ್ವಾತಂತ್ರ್ಯವನ್ನು<br />ಶಿಷ್ಯನಿಗೇ ಬಿಟ್ಟುಕೊಟ್ಟ<br />ಅನನ್ಯ ಗೀತಾಚಾರ್ಯನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ತಾನು ಕಟ್ಟಿದ್ದೆಲ್ಲವೂ<br />ತನ್ನ ಕಣ್ಣ ಮುಂದೆಯೇ<br />ಕುಸಿದು ಬಿದ್ದದ್ದನ್ನು ಕಂಡು<br />ಕೈಚೆಲ್ಲಿದ, ಕಣ್ಮುಚ್ಚಿದ<br />ವೃದ್ಧ ಮುತ್ಸದ್ದಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಎಲ್ಲರಿಗೂ ಸಲ್ಲಬಲ್ಲ,<br />ಎಲ್ಲರ ಮನ ಗೆಲ್ಲಬಲ್ಲ,<br />ಎಲ್ಲರಲ್ಲೂ ಕೊಂಚ ಉಳ್ಳ<br />ವಿಶ್ವರೂಪಿಗೆ-<br />ನಮಸ್ಕಾರ ನರೋತ್ತಮನಿಗೆ.<br /></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಗುಡಿಸಲಲ್ಲೂ ಮಹಲಿನಲ್ಲೂ<br />ಅಮ್ಮಂದಿರಿಗೆ<br />ತಮ್ಮ ಕಂದರಲ್ಲಿ ಇಂದಿಗೂ<br />ಕಾಣುವ ಏಕೈಕ ಬಿಂಬ<br />ಮುದ್ದು ಗೋವಿಂದನೆಂಬ<br />ಕಣ್ಣಗೊಂಬೆಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಎರೆಮಣ್ಣಿನ ಬಣ್ಣದಲ್ಲೂ<br />ಸೌಂದರ್ಯದ ಸೂಜಿಗಲ್ಲು<br />ಉಂಟು ಎಂದು ತೋರಿದ<br />ಅನ್ವರ್ಥನಾಮನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಪಿಳ್ಳಂಗೋವಿಯ ಸ್ವಚ್ಛಂದ<br />ಸಮ್ಮೋಹಕ ನುಡಿತದಿಂದ<br />ಗೋಕುಲದೆದೆ ಸೂರೆಗೊಂಡ<br />ಜನಪದ ಕಲೆಗಾರನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಅಡೆತಡೆಗಳ ಪರಿವೆಯಿರದ<br />ಪ್ರೇಮವೆಂಬ ಹುಚ್ಚುಹೊಳೆಗೆ<br />ಸ್ಫೂರ್ತಿಯ ಸೆಲೆ ತಾನಾದ<br />ರಾಧಾಮಾಧವನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಹಳ್ಳಿಹೈದರಿಗೆ<br />ದಿಲ್ಲಿಯನ್ನೂ ಗೆಲ್ಲಬಲ್ಲೆವೆಂಬ<br />ಹುಮ್ಮಸ್ಸು ನೀಡಿದ<br />ಪೋರ ಕಂಸಾರಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಬೇಕಾದವರ ಎತ್ತರಿಸಿದ,<br />ಬೇಡದವರ ಒತ್ತರಿಸಿದ,<br />ನಿಗುರಿದವರ ಕತ್ತರಿಸಿದ<br />ಚತುರ ತಂತ್ರಗಾರನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಉಪದೇಶದ ಕೊನೆಗೆ,<br />ತನ್ನ ಆಯ್ಕೆಯ ಸ್ವಾತಂತ್ರ್ಯವನ್ನು<br />ಶಿಷ್ಯನಿಗೇ ಬಿಟ್ಟುಕೊಟ್ಟ<br />ಅನನ್ಯ ಗೀತಾಚಾರ್ಯನಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ತಾನು ಕಟ್ಟಿದ್ದೆಲ್ಲವೂ<br />ತನ್ನ ಕಣ್ಣ ಮುಂದೆಯೇ<br />ಕುಸಿದು ಬಿದ್ದದ್ದನ್ನು ಕಂಡು<br />ಕೈಚೆಲ್ಲಿದ, ಕಣ್ಮುಚ್ಚಿದ<br />ವೃದ್ಧ ಮುತ್ಸದ್ದಿಗೆ-<br />ನಮಸ್ಕಾರ ಶ್ರೀಕೃಷ್ಣನಿಗೆ.</p>.<p>ಎಲ್ಲರಿಗೂ ಸಲ್ಲಬಲ್ಲ,<br />ಎಲ್ಲರ ಮನ ಗೆಲ್ಲಬಲ್ಲ,<br />ಎಲ್ಲರಲ್ಲೂ ಕೊಂಚ ಉಳ್ಳ<br />ವಿಶ್ವರೂಪಿಗೆ-<br />ನಮಸ್ಕಾರ ನರೋತ್ತಮನಿಗೆ.<br /></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>