ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಸಿದ್ದರಾಮಯ್ಯ ತಲೆ ತಿರುಕನಂತೆ ಮಾತನಾಡುತ್ತಿದ್ದಾನೆ. ಸ್ವಂತ ಜಿಲ್ಲೆಯ ಕ್ಷೇತ್ರ ಬಿಟ್ಟು ಬೇರೆ ಕಡೆಗೆ ಕ್ಷೇತ್ರ ಹುಡುಕುತ್ತಿರುವುದರಿಂದ ಅವನ ಯೋಗ್ಯತೆ ಗೊತ್ತಾಗುತ್ತದೆ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಹದಿನೈದು ವರ್ಷಗಳ ಹಿಂದೆ ದುರ್ಗದ ಬೈಲಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ಗಂಡು ಮಗು ಹುಟ್ಟಿದೆ ಎಂದು ಸಿಹಿ ಹಂಚುತ್ತಿದ್ದರು. ನಾಯಕ ಸಿಕ್ಕಿದ್ದಾನೆಂದು ಸಂಭ್ರಮಿಸುತ್ತಿದ್ದು. ಇದು ಕಾಂಗ್ರೆಸ್ನ ಸ್ಥಿತಿ’ ಎಂದು ವ್ಯಂಗ್ಯವಾಡಿದರು.ಎಂದು ಸಂಸದ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
‘ಬಿಜೆಪಿಯಲ್ಲಿ ನಾಯಕನಾಗಬೇಕಾದರೆ ಎಲ್ಲ ಹಂತಗಳನ್ನು ದಾಟಬೇಕು. ಆದರೆ, ಕಾಂಗ್ರೆಸ್ನಲ್ಲಿ ಇಂದಿರಾ ಗಾಂಧಿ ಕುಟುಂಬದಲ್ಲಿ ಜನಿಸಿದರೆ ಸಾಕು, ಅರ್ಹತೆ ಇರಲಿ, ಇಲ್ಲದಿರಲಿ ನಾಯಕನಾಗಿ ಬಿಡುತ್ತಾರೆ’ ಎಂದರು.