<p>ಕಾರವಾರ: `ಅಂಗವಿಕಲ ಮಕ್ಕಳಲ್ಲೂ ಪ್ರತಿಭೆ ಇದ್ದಾರೆ. ಪ್ರೋತ್ಸಾಹದ ಕೊರತೆಯಿಂದಾಗಿ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ನಗರಸಭೆ ಅಧಕ್ಷ ಗಣಪತಿ ಉಳ್ವೇಕರ ಹೇಳಿದರು.<br /> <br /> ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರ್ವಶಿಕ್ಷಣ ಅಭಿಯಾನ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಬುಧವಾರ ನಡೆದ `ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ~ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಎಲ್ಲರೂ ಅಂಗವಿಕಲರನ್ನು ಸಮಾನ ಭಾವನೆಯಿಂದ ಕಾಣಬೇಕು. ತಾವು ವಿಕಲಚೇತನರು ಎನ್ನುವ ಕೀಳರಿಮೆ ಬೇಡ. ಧೈರ್ಯವಾಗಿ ಮುಂದೆ ಹೋಗಿ ಎಲ್ಲ ಕ್ಷೇತ್ರದಲ್ಲು ಸಾಧನೆ ಮಾಡಬೇಕು~ ಎಂದರು.<br /> <br /> `ಅಂಗವಿಕಲ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಲಾಭ ಪಡೆದು ಜೀವನದಲ್ಲಿ ಮುಂದೆ ಬರಬೇಕು~ ಎಂದು ಉಳ್ವೇಕರ್ ನುಡಿದರು.<br /> <br /> ಡಿವೈಪಿಸಿ ಡಿ.ಎಂ. ಬಸವರಾಜಪ್ಪ ಮಾತನಾಡಿ, ಕಾಣದ ದೇವರಿಗಾಗಿ ಸೇವೆ ಮಾಡಿ ಹಣ ವ್ಯಯ ಮಾಡುವುದಕ್ಕಿಂತ ವಿಕಲಚೇತನರ ಸೇವೆ ಮಾಡಿ ಅವರ ಪಾಲಿಗೆ ದೇವರಾಗಿ ಎಂದರು. <br /> <br /> ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿ ರಾಮಕೃಷ್ಣ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಗೌಡ, ಡಾ. ಚಂದ್ರಕಾಂತ ಬೆಲ್ಲದ, ಡಾ. ಕಿರಣಕುಮಾರ, ಬಿ.ಟಿ. ನಾಯಕ, ಡಿ.ಎಚ್. ನಾಯಕ, ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರವಾರ: `ಅಂಗವಿಕಲ ಮಕ್ಕಳಲ್ಲೂ ಪ್ರತಿಭೆ ಇದ್ದಾರೆ. ಪ್ರೋತ್ಸಾಹದ ಕೊರತೆಯಿಂದಾಗಿ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ನಗರಸಭೆ ಅಧಕ್ಷ ಗಣಪತಿ ಉಳ್ವೇಕರ ಹೇಳಿದರು.<br /> <br /> ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರ್ವಶಿಕ್ಷಣ ಅಭಿಯಾನ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಬುಧವಾರ ನಡೆದ `ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ~ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಎಲ್ಲರೂ ಅಂಗವಿಕಲರನ್ನು ಸಮಾನ ಭಾವನೆಯಿಂದ ಕಾಣಬೇಕು. ತಾವು ವಿಕಲಚೇತನರು ಎನ್ನುವ ಕೀಳರಿಮೆ ಬೇಡ. ಧೈರ್ಯವಾಗಿ ಮುಂದೆ ಹೋಗಿ ಎಲ್ಲ ಕ್ಷೇತ್ರದಲ್ಲು ಸಾಧನೆ ಮಾಡಬೇಕು~ ಎಂದರು.<br /> <br /> `ಅಂಗವಿಕಲ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಲಾಭ ಪಡೆದು ಜೀವನದಲ್ಲಿ ಮುಂದೆ ಬರಬೇಕು~ ಎಂದು ಉಳ್ವೇಕರ್ ನುಡಿದರು.<br /> <br /> ಡಿವೈಪಿಸಿ ಡಿ.ಎಂ. ಬಸವರಾಜಪ್ಪ ಮಾತನಾಡಿ, ಕಾಣದ ದೇವರಿಗಾಗಿ ಸೇವೆ ಮಾಡಿ ಹಣ ವ್ಯಯ ಮಾಡುವುದಕ್ಕಿಂತ ವಿಕಲಚೇತನರ ಸೇವೆ ಮಾಡಿ ಅವರ ಪಾಲಿಗೆ ದೇವರಾಗಿ ಎಂದರು. <br /> <br /> ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿ ರಾಮಕೃಷ್ಣ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಗೌಡ, ಡಾ. ಚಂದ್ರಕಾಂತ ಬೆಲ್ಲದ, ಡಾ. ಕಿರಣಕುಮಾರ, ಬಿ.ಟಿ. ನಾಯಕ, ಡಿ.ಎಚ್. ನಾಯಕ, ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>