<p>ಮಂಗಳೂರು: ಅಂಗವಿಕಲರ ಅಭಿವೃದ್ಧಿಗೆ ಶೇ 3 ನಿಧಿಯ ಅನುದಾನ ಬಳಕೆಯಲ್ಲಿ ನಿರೀಕ್ಷಿತ ಪ್ರಗತಿ ಆಗದ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> ಇಲ್ಲಿನ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.<br /> <br /> ‘ಅಂಗವಿಕಲ ವ್ಯಕ್ತಿಗಳಿಗೆ ಬೇಕಾದ ರೀತಿ ಸವಲತ್ತು ನೀಡುವುದಕ್ಕೆ ಅವಕಾಶವಿದೆ. ಆದರೆ ಅಧಿಕಾರಿಗಳ ಅಸಡ್ಡೆಯಿಂದಾಗಿ ಅಂಗವಿಕಲರು ಸವಲತ್ತಿನಿಂದ ವಂಚಿತರಾಗಬೇಕಾಗಿದೆ’ ಎಂದರು.<br /> <br /> ‘ಉದ್ಯೋಗ ಖಾತರಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ನಿರ್ವಹಣೆಗೆ ಕ್ರಿಯಾಯೋಜನೆ ರೂಪಿಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಜಲಾನಯನ ಅಭಿವೃದ್ಧಿ ಯೋಜನೆಯಡಿ ಬಳಕೆಯಾಗದೆ ಉಳಿದಿರುವ ₨ 1.25 ಕೋಟಿಯನ್ನು ಈ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಉಪಕಾರ್ಯದರ್ಶಿ ಎನ್.ಆರ್.ಉಮೇಶ್ ಸೂಚಿಸಿದರು.<br /> <br /> 2 ವರ್ಷದಿಂದ ಬಳಕೆಯಾಗದ ರಸ್ತೆ: ‘ಬೆಳ್ತಂಗಡಿ ತಾಲ್ಲೂಕಿನ ಚಿಬಿದ್ರಿ– ತೋಟತ್ತಡಿ ರಸ್ತೆಗೆ ಡಾಂಬರೀಕರಣವಾಗಿ ಎರಡು ವರ್ಷವಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ರಸ್ತೆ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಇದ್ದ ಸೇತುವೆಯನ್ನು ಕೆಡವಿದ್ದಾದರೂ ಏಕೆ?’ ಎಂದು ಅಧ್ಯಕ್ಷರು ಪ್ರಶ್ನಿಸಿದರು.<br /> <br /> ‘ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆ ಅಡಿ ₨ 10 ಲಕ್ಷ ಮೊತ್ತಕ್ಕೆ ಸೇತುವೆಗೆ ಅಂದಾಜುಪಟ್ಟಿ ರೂಪಿಸಿದ್ದೆವು. ಬಳಿಕ ₨ 5 ಲಕ್ಷ ಮಾತ್ರ ಮಂಜೂರಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ವಿವರಣೆ ನೀಡಿದರು. ‘ಕಾಮಗಾರಿ ಮುಗಿಸಿದರೆ ಅನುದಾನ ಬಿಡುಗಡೆಯಾಗುತ್ತದೆ. ಈ ಸೇತುವೆಯನ್ನು ತಕ್ಷಣ ಪೂರ್ಣಗೊಳಿಸಬೇಕು’ ಎಂದು ಉಪಕಾರ್ಯದರ್ಶಿ ಹೇಳಿದರು.<br /> <br /> ಅನ್ಯ ಸೇವೆಗೆ ನಿಯೋಜನೆ ಗೊಂಡಿರುವ ಜಿಲ್ಲೆಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳ ಅಡುಗೆ ಸಹಾಯಕರನ್ನು ಸ್ವಸ್ಥಾನಕ್ಕೆ ಕರೆಸುವಂತೆ ಆದೇಶಿಸಿದರೂ, ಅಧಿಕಾರಿಗಳು ಕಿಮ್ಮತ್ತು ನೀಡದ ಬಗ್ಗೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.<br /> ‘ಕೆಲವು ಸಿಬ್ಬಂದಿಯನ್ನು ಮಾತ್ರ ಮೂಲ ಹುದ್ದೆಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ 12 ಮಂದಿ ಇನ್ನೂ ಮೂಲ ಹುದ್ದೆಗೆ ಮರಳಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು.<br /> <br /> ಬೆಳ್ತಂಗಡಿ ಮಾದರಿ ವಸತಿ ಶಾಲೆಯ ನಿರ್ವಹಣೆಗೆ ₨ 4.30 ಲಕ್ಷ, ಮೂಲಸೌಕರ್ಯ ಕಲ್ಪಿಸಲು ₨ 9.10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಬಟ್ಟೆ ಒಗೆಯುವ ಕಲ್ಲುಗಳನ್ನು ಅಳವಡಿಸಿದ್ದು ಹೊರತಾಗಿ ಬೇರೆ ಮೂಲಸೌಕರ್ಯ ಕಲ್ಪಿಸಿಲ್ಲ. ಅದರ ಮೇಲೆ ಈಗ ಮತ್ತೆ ₨ 18 ಲಕ್ಷ ಹಣ ಬಿಡುಗಡೆಯಾಗಿದೆ. ವಸತಿ ಶಾಲೆಯಲ್ಲಿ 20 ಸೈಕಲ್ಗಳನ್ನು ತಂದಿಡಲಾಗಿದೆ. ಮುಗುಳಿ, ಬದನಾಜೆ, ನಾವೂರು, ಚಾರ್ಮಾಡಿ ಹಾಗೂ ಕರ್ನಾಡು ಶಾಲೆಗಳಿಂದ ಅಕ್ಷರದಾಸೋಹದ ಅಕ್ಕಿಯನ್ನು ಇಲ್ಲಿಗೆ ಪೂರೈಸಲಾಗಿದೆ. ಇಲ್ಲಿ ಇತ್ತೀಚೆಗೆ ಮಕ್ಕಳ ಹಾಸಿಗೆ ಸುಟ್ಟು ಹೋಗಿ ₨ 26 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದ್ದರೂ, ಪೊಲೀಸರಿಗೆ ದೂರು ನೀಡಿಲ್ಲ. ಈ ಶಾಲೆಯ ನಿರ್ವಹಣೆ ಬಗ್ಗೆ ಅನೇಕ ದೂರು ಕೇಳಿ ಬಂದಿದೆ’ ಎಂದು ಕೆ.ಕೊರಗಪ್ಪ ನಾಯಕ ಅವರು ಸಭೆಯ ಗಮನ ಸೆಳೆದರು. ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ಡಿಡಿಪಿಐ ತಿಳಿಸಿದರು.<br /> <br /> ಜಿಲ್ಲೆಯ ಸಹಕಾರಿ ಬ್ಯಾಂಕ್ಗಳಿಗೆ ರೈತರ ಸಾಲ ಮನ್ನಾದ ₨ 169.71 ಕೋಟಿ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಅಂಗವಿಕಲರ ಅಭಿವೃದ್ಧಿಗೆ ಶೇ 3 ನಿಧಿಯ ಅನುದಾನ ಬಳಕೆಯಲ್ಲಿ ನಿರೀಕ್ಷಿತ ಪ್ರಗತಿ ಆಗದ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಕೊರಗಪ್ಪ ನಾಯ್ಕ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.<br /> <br /> ಇಲ್ಲಿನ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿದರು.<br /> <br /> ‘ಅಂಗವಿಕಲ ವ್ಯಕ್ತಿಗಳಿಗೆ ಬೇಕಾದ ರೀತಿ ಸವಲತ್ತು ನೀಡುವುದಕ್ಕೆ ಅವಕಾಶವಿದೆ. ಆದರೆ ಅಧಿಕಾರಿಗಳ ಅಸಡ್ಡೆಯಿಂದಾಗಿ ಅಂಗವಿಕಲರು ಸವಲತ್ತಿನಿಂದ ವಂಚಿತರಾಗಬೇಕಾಗಿದೆ’ ಎಂದರು.<br /> <br /> ‘ಉದ್ಯೋಗ ಖಾತರಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ನಿರ್ವಹಣೆಗೆ ಕ್ರಿಯಾಯೋಜನೆ ರೂಪಿಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ಮುತುವರ್ಜಿ ವಹಿಸಿಲ್ಲ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು. ಜಲಾನಯನ ಅಭಿವೃದ್ಧಿ ಯೋಜನೆಯಡಿ ಬಳಕೆಯಾಗದೆ ಉಳಿದಿರುವ ₨ 1.25 ಕೋಟಿಯನ್ನು ಈ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲು ಉಪಕಾರ್ಯದರ್ಶಿ ಎನ್.ಆರ್.ಉಮೇಶ್ ಸೂಚಿಸಿದರು.<br /> <br /> 2 ವರ್ಷದಿಂದ ಬಳಕೆಯಾಗದ ರಸ್ತೆ: ‘ಬೆಳ್ತಂಗಡಿ ತಾಲ್ಲೂಕಿನ ಚಿಬಿದ್ರಿ– ತೋಟತ್ತಡಿ ರಸ್ತೆಗೆ ಡಾಂಬರೀಕರಣವಾಗಿ ಎರಡು ವರ್ಷವಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ರಸ್ತೆ ಸಾರ್ವಜನಿಕ ಬಳಕೆಗೆ ಲಭ್ಯವಾಗಿಲ್ಲ. ಇದ್ದ ಸೇತುವೆಯನ್ನು ಕೆಡವಿದ್ದಾದರೂ ಏಕೆ?’ ಎಂದು ಅಧ್ಯಕ್ಷರು ಪ್ರಶ್ನಿಸಿದರು.<br /> <br /> ‘ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆ ಅಡಿ ₨ 10 ಲಕ್ಷ ಮೊತ್ತಕ್ಕೆ ಸೇತುವೆಗೆ ಅಂದಾಜುಪಟ್ಟಿ ರೂಪಿಸಿದ್ದೆವು. ಬಳಿಕ ₨ 5 ಲಕ್ಷ ಮಾತ್ರ ಮಂಜೂರಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ವಿವರಣೆ ನೀಡಿದರು. ‘ಕಾಮಗಾರಿ ಮುಗಿಸಿದರೆ ಅನುದಾನ ಬಿಡುಗಡೆಯಾಗುತ್ತದೆ. ಈ ಸೇತುವೆಯನ್ನು ತಕ್ಷಣ ಪೂರ್ಣಗೊಳಿಸಬೇಕು’ ಎಂದು ಉಪಕಾರ್ಯದರ್ಶಿ ಹೇಳಿದರು.<br /> <br /> ಅನ್ಯ ಸೇವೆಗೆ ನಿಯೋಜನೆ ಗೊಂಡಿರುವ ಜಿಲ್ಲೆಯ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳ ಅಡುಗೆ ಸಹಾಯಕರನ್ನು ಸ್ವಸ್ಥಾನಕ್ಕೆ ಕರೆಸುವಂತೆ ಆದೇಶಿಸಿದರೂ, ಅಧಿಕಾರಿಗಳು ಕಿಮ್ಮತ್ತು ನೀಡದ ಬಗ್ಗೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.<br /> ‘ಕೆಲವು ಸಿಬ್ಬಂದಿಯನ್ನು ಮಾತ್ರ ಮೂಲ ಹುದ್ದೆಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದ 12 ಮಂದಿ ಇನ್ನೂ ಮೂಲ ಹುದ್ದೆಗೆ ಮರಳಿಲ್ಲ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದರು.<br /> <br /> ಬೆಳ್ತಂಗಡಿ ಮಾದರಿ ವಸತಿ ಶಾಲೆಯ ನಿರ್ವಹಣೆಗೆ ₨ 4.30 ಲಕ್ಷ, ಮೂಲಸೌಕರ್ಯ ಕಲ್ಪಿಸಲು ₨ 9.10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಬಟ್ಟೆ ಒಗೆಯುವ ಕಲ್ಲುಗಳನ್ನು ಅಳವಡಿಸಿದ್ದು ಹೊರತಾಗಿ ಬೇರೆ ಮೂಲಸೌಕರ್ಯ ಕಲ್ಪಿಸಿಲ್ಲ. ಅದರ ಮೇಲೆ ಈಗ ಮತ್ತೆ ₨ 18 ಲಕ್ಷ ಹಣ ಬಿಡುಗಡೆಯಾಗಿದೆ. ವಸತಿ ಶಾಲೆಯಲ್ಲಿ 20 ಸೈಕಲ್ಗಳನ್ನು ತಂದಿಡಲಾಗಿದೆ. ಮುಗುಳಿ, ಬದನಾಜೆ, ನಾವೂರು, ಚಾರ್ಮಾಡಿ ಹಾಗೂ ಕರ್ನಾಡು ಶಾಲೆಗಳಿಂದ ಅಕ್ಷರದಾಸೋಹದ ಅಕ್ಕಿಯನ್ನು ಇಲ್ಲಿಗೆ ಪೂರೈಸಲಾಗಿದೆ. ಇಲ್ಲಿ ಇತ್ತೀಚೆಗೆ ಮಕ್ಕಳ ಹಾಸಿಗೆ ಸುಟ್ಟು ಹೋಗಿ ₨ 26 ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದ್ದರೂ, ಪೊಲೀಸರಿಗೆ ದೂರು ನೀಡಿಲ್ಲ. ಈ ಶಾಲೆಯ ನಿರ್ವಹಣೆ ಬಗ್ಗೆ ಅನೇಕ ದೂರು ಕೇಳಿ ಬಂದಿದೆ’ ಎಂದು ಕೆ.ಕೊರಗಪ್ಪ ನಾಯಕ ಅವರು ಸಭೆಯ ಗಮನ ಸೆಳೆದರು. ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ಡಿಡಿಪಿಐ ತಿಳಿಸಿದರು.<br /> <br /> ಜಿಲ್ಲೆಯ ಸಹಕಾರಿ ಬ್ಯಾಂಕ್ಗಳಿಗೆ ರೈತರ ಸಾಲ ಮನ್ನಾದ ₨ 169.71 ಕೋಟಿ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>