<p>ಭದ್ರಾವತಿ: ದಾವಣಗೆರೆ ಪೈಲ್ಸ್ ಕ್ಲಿನಿಕ್ನಲ್ಲಿ ಸಹಾಯಕನಾಗಿದ್ದ ವ್ಯಕ್ತಿ, ಇಂದು ದುಬೈನಲ್ಲಿ ಹೆಸರಾಂತ ವೈದ್ಯನಾಗಿದ್ದಾನೆ.<br /> <br /> -ಹೌದು ಇದು ವಿಚಿತ್ರ ಎನಿಸಿದರೂ ಸತ್ಯ!<br /> ಕುವೆಂಪು ವಿವಿ ನಕಲಿ ಅಂಕಪಟ್ಟಿ, ಪ್ರಮಾಣಪತ್ರ ಕೃಪೆಯಿಂದ ಕಳೆದ 12 ವರ್ಷದಿಂದ ವೈದ್ಯ ವೃತ್ತಿ ನಡೆಸಿರುವ ಡಾ.ಉಮರ್ಪಾಷ ಆ ರಾಷ್ಟ್ರದಲ್ಲಿ ಈಗ ಬಹುಬೇಡಿಕೆಯ ಪೈಲ್ಸ್ ಶಸ್ತ್ರಚಿಕಿತ್ಸಕ.<br /> 1999-2000ನೇ ಸಾಲಿನಲ್ಲಿ ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿ ಪದವಿ ಪಡೆದ ದಾಖಲೆಯನ್ನು ಈತ ಪಡೆದಿದ್ದಾನೆ. ವಿಚಿತ್ರ ಎಂದರೆ ಈತನಿಗೆ ದೊರೆತಿರುವ ನಕಲಿ ಪ್ರಮಾಣಪತ್ರ, ಬಿಡಿಎಸ್ ಪದವಿಗೆ ನೀಡುವ ದಾಖಲೆ.<br /> <br /> ಈತನಷ್ಟೇ ಪ್ರಸಿದ್ಧಿಯಾದ ಮತ್ತೊಬ್ಬ ಭಾರತೀಯ ವೈದ್ಯ, ತನ್ನ ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಈತನ ದಾಖಲೆಯ ಸತ್ಯತೆ ಪ್ರಶ್ನಿಸಿ, ಮಾಹಿತಿ ಹಕ್ಕಿನಡಿ ವಿವಿ ಪರೀಕ್ಷಾಂಗ ಕಚೇರಿಗೆ ಅರ್ಜಿ ಸಲ್ಲಿಸಿದ್ದ ಈ ಕುರಿತಾಗಿ ಸ್ಪಷ್ಟ ಮಾಹಿತಿ ದೊರೆಯದ ಸಂದರ್ಭದಲ್ಲಿ ಆತ ಅನಿವಾರ್ಯವಾಗಿ ಈ ವಿಷಯವನ್ನು ಭಾರತೀಯ ವೈದ್ಯಕೀಯ ಮಂಡಳಿ ಗಮನಕ್ಕೆ ತಂದಿದ್ದ.<br /> <br /> ಮಂಡಳಿ ಈತನ ಪ್ರಮಾಣಪತ್ರ ಕುರಿತಾದ ಸತ್ಯತೆ ಪರೀಕ್ಷಿಸಲು ಫೆಬ್ರುವರಿ 2012ರಲ್ಲಿ ವಿವಿ ಪರೀಕ್ಷಾಂಗ ವಿಭಾಗಕ್ಕೆ ಕಳುಹಿಸಿತ್ತು. ಆಗಲೇ ಈತ ಪಡೆದ ಪ್ರಮಾಣಪತ್ರ ನಕಲಿ ಎಂದು ದೃಢಪಟ್ಟಿದೆ. ಆದರೆ ಈ ಕುರಿತಾದ ಯಾವುದೇ ಕ್ರಮವನ್ನು ವಿವಿ ಆಡಳಿತ ಇಲ್ಲಿಯ ತನಕ ಜರುಗಿಸಿಲ್ಲ, ಬದಲಾಗಿ ಗುರುವಾರ ಸಿಂಡಿಕೇಟ್ ಸಭೆಯಲ್ಲಿ ಇದರ ಕುರಿತು ಸದಸ್ಯರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು.<br /> <strong><br /> ಮೊದಲೇ ತಿಳಿದ ವಿಷಯ</strong><br /> ಹಾಲೇಶಪ್ಪ ಪ್ರಕರಣ ಇಲ್ಲಿನ ಗ್ರಾಮಾಂತರ ಠಾಣೆಗೆ ದಾಖಲಾದ ನಂತರ ತನಿಖೆ ನಡೆಸಿದ್ದ ಪೊಲೀಸರಿಗೆ ನಕಲಿ ವೈದ್ಯ ಪ್ರಮಾಣಪತ್ರ ಪಡೆದ ವ್ಯಕ್ತಿಯೊಬ್ಬ ಹೊರದೇಶದಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಸಂಗತಿ ಅರಿವಿಗೆ ಬಂದಿತ್ತು.<br /> <br /> ಇದರ ಕುರಿತು ಪತ್ತೆ ಕಾರ್ಯ ನಡೆಸಲು ಆರಂಭಿಸಿದ್ದ ಪೊಲೀಸರು, ಆತನ ಕುರಿತಾದ ಎಲ್ಲಾ ಮಾಹಿತಿಯನ್ನು ಕಲೆಹಾಕಿ, ಅದಕ್ಕೆ ಆವಶ್ಯವಿರುವ ದಾಖಲೆಗಳ ಸಂಗ್ರಹಣೆ ಕಡೆಗೆ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಸಿಂಡಿಕೇಟ್ ಸಭೆ ನಿರ್ಣಯ ಕುರಿತಾಗಿ ಪತ್ರಿಕೆ ಡಿವೈಎಸ್ಪಿ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ `ಹಾಲೇಶಪ್ಪ ಪ್ರಕರಣದಲ್ಲಿ ನಕಲಿ ಪ್ರಮಾಣಪತ್ರಗಳ ತನಿಖೆ ನಡೆಯುತ್ತಿದ್ದು, ಅದರ ವ್ಯಾಪ್ತಿಯಲ್ಲೇ ಈ ವಿಷಯವನ್ನು ಗಮನಿಸಿದ್ದೇವೆ. ಹಾಗಾಗಿ ಈ ಕುರಿತಾದ ಪ್ರತ್ಯೇಕ ದೂರಿನ ಅವಶ್ಯವಿಲ್ಲ ಎಂದರು.<br /> <br /> ಆತನ ವಿಚಾರವಾಗಿ ಸಾಕಷ್ಟು ಮಾಹಿತಿ ಇಲಾಖೆಗೆ ಲಭ್ಯವಿದೆ. ಅದರ ಮೇಲೆ ಮುಂದಿನ ಕ್ರಮ ಜರುಗಿಸುವ ಕುರಿತು ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ. ಸಂದರ್ಭ ಬಂದಾಗ ಎಲ್ಲವನ್ನು ಬಹಿರಂಗ ಮಾಡಲಾಗುವುದು ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭದ್ರಾವತಿ: ದಾವಣಗೆರೆ ಪೈಲ್ಸ್ ಕ್ಲಿನಿಕ್ನಲ್ಲಿ ಸಹಾಯಕನಾಗಿದ್ದ ವ್ಯಕ್ತಿ, ಇಂದು ದುಬೈನಲ್ಲಿ ಹೆಸರಾಂತ ವೈದ್ಯನಾಗಿದ್ದಾನೆ.<br /> <br /> -ಹೌದು ಇದು ವಿಚಿತ್ರ ಎನಿಸಿದರೂ ಸತ್ಯ!<br /> ಕುವೆಂಪು ವಿವಿ ನಕಲಿ ಅಂಕಪಟ್ಟಿ, ಪ್ರಮಾಣಪತ್ರ ಕೃಪೆಯಿಂದ ಕಳೆದ 12 ವರ್ಷದಿಂದ ವೈದ್ಯ ವೃತ್ತಿ ನಡೆಸಿರುವ ಡಾ.ಉಮರ್ಪಾಷ ಆ ರಾಷ್ಟ್ರದಲ್ಲಿ ಈಗ ಬಹುಬೇಡಿಕೆಯ ಪೈಲ್ಸ್ ಶಸ್ತ್ರಚಿಕಿತ್ಸಕ.<br /> 1999-2000ನೇ ಸಾಲಿನಲ್ಲಿ ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿ ಪದವಿ ಪಡೆದ ದಾಖಲೆಯನ್ನು ಈತ ಪಡೆದಿದ್ದಾನೆ. ವಿಚಿತ್ರ ಎಂದರೆ ಈತನಿಗೆ ದೊರೆತಿರುವ ನಕಲಿ ಪ್ರಮಾಣಪತ್ರ, ಬಿಡಿಎಸ್ ಪದವಿಗೆ ನೀಡುವ ದಾಖಲೆ.<br /> <br /> ಈತನಷ್ಟೇ ಪ್ರಸಿದ್ಧಿಯಾದ ಮತ್ತೊಬ್ಬ ಭಾರತೀಯ ವೈದ್ಯ, ತನ್ನ ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಈತನ ದಾಖಲೆಯ ಸತ್ಯತೆ ಪ್ರಶ್ನಿಸಿ, ಮಾಹಿತಿ ಹಕ್ಕಿನಡಿ ವಿವಿ ಪರೀಕ್ಷಾಂಗ ಕಚೇರಿಗೆ ಅರ್ಜಿ ಸಲ್ಲಿಸಿದ್ದ ಈ ಕುರಿತಾಗಿ ಸ್ಪಷ್ಟ ಮಾಹಿತಿ ದೊರೆಯದ ಸಂದರ್ಭದಲ್ಲಿ ಆತ ಅನಿವಾರ್ಯವಾಗಿ ಈ ವಿಷಯವನ್ನು ಭಾರತೀಯ ವೈದ್ಯಕೀಯ ಮಂಡಳಿ ಗಮನಕ್ಕೆ ತಂದಿದ್ದ.<br /> <br /> ಮಂಡಳಿ ಈತನ ಪ್ರಮಾಣಪತ್ರ ಕುರಿತಾದ ಸತ್ಯತೆ ಪರೀಕ್ಷಿಸಲು ಫೆಬ್ರುವರಿ 2012ರಲ್ಲಿ ವಿವಿ ಪರೀಕ್ಷಾಂಗ ವಿಭಾಗಕ್ಕೆ ಕಳುಹಿಸಿತ್ತು. ಆಗಲೇ ಈತ ಪಡೆದ ಪ್ರಮಾಣಪತ್ರ ನಕಲಿ ಎಂದು ದೃಢಪಟ್ಟಿದೆ. ಆದರೆ ಈ ಕುರಿತಾದ ಯಾವುದೇ ಕ್ರಮವನ್ನು ವಿವಿ ಆಡಳಿತ ಇಲ್ಲಿಯ ತನಕ ಜರುಗಿಸಿಲ್ಲ, ಬದಲಾಗಿ ಗುರುವಾರ ಸಿಂಡಿಕೇಟ್ ಸಭೆಯಲ್ಲಿ ಇದರ ಕುರಿತು ಸದಸ್ಯರಿಂದ ಆಕ್ಷೇಪಣೆ ವ್ಯಕ್ತವಾಗಿತ್ತು.<br /> <strong><br /> ಮೊದಲೇ ತಿಳಿದ ವಿಷಯ</strong><br /> ಹಾಲೇಶಪ್ಪ ಪ್ರಕರಣ ಇಲ್ಲಿನ ಗ್ರಾಮಾಂತರ ಠಾಣೆಗೆ ದಾಖಲಾದ ನಂತರ ತನಿಖೆ ನಡೆಸಿದ್ದ ಪೊಲೀಸರಿಗೆ ನಕಲಿ ವೈದ್ಯ ಪ್ರಮಾಣಪತ್ರ ಪಡೆದ ವ್ಯಕ್ತಿಯೊಬ್ಬ ಹೊರದೇಶದಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಸಂಗತಿ ಅರಿವಿಗೆ ಬಂದಿತ್ತು.<br /> <br /> ಇದರ ಕುರಿತು ಪತ್ತೆ ಕಾರ್ಯ ನಡೆಸಲು ಆರಂಭಿಸಿದ್ದ ಪೊಲೀಸರು, ಆತನ ಕುರಿತಾದ ಎಲ್ಲಾ ಮಾಹಿತಿಯನ್ನು ಕಲೆಹಾಕಿ, ಅದಕ್ಕೆ ಆವಶ್ಯವಿರುವ ದಾಖಲೆಗಳ ಸಂಗ್ರಹಣೆ ಕಡೆಗೆ ಹೆಜ್ಜೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.<br /> <br /> ಸಿಂಡಿಕೇಟ್ ಸಭೆ ನಿರ್ಣಯ ಕುರಿತಾಗಿ ಪತ್ರಿಕೆ ಡಿವೈಎಸ್ಪಿ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ `ಹಾಲೇಶಪ್ಪ ಪ್ರಕರಣದಲ್ಲಿ ನಕಲಿ ಪ್ರಮಾಣಪತ್ರಗಳ ತನಿಖೆ ನಡೆಯುತ್ತಿದ್ದು, ಅದರ ವ್ಯಾಪ್ತಿಯಲ್ಲೇ ಈ ವಿಷಯವನ್ನು ಗಮನಿಸಿದ್ದೇವೆ. ಹಾಗಾಗಿ ಈ ಕುರಿತಾದ ಪ್ರತ್ಯೇಕ ದೂರಿನ ಅವಶ್ಯವಿಲ್ಲ ಎಂದರು.<br /> <br /> ಆತನ ವಿಚಾರವಾಗಿ ಸಾಕಷ್ಟು ಮಾಹಿತಿ ಇಲಾಖೆಗೆ ಲಭ್ಯವಿದೆ. ಅದರ ಮೇಲೆ ಮುಂದಿನ ಕ್ರಮ ಜರುಗಿಸುವ ಕುರಿತು ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆದಿದೆ. ಸಂದರ್ಭ ಬಂದಾಗ ಎಲ್ಲವನ್ನು ಬಹಿರಂಗ ಮಾಡಲಾಗುವುದು ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>