<p><strong>ಬೆಂಗಳೂರು: </strong>ಕಂಪ್ಯೂಟರ್ ನೀಡುತ್ತಿದ್ದ ಮೌಖಿಕ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿಸುತ್ತಾ ಅಂಧ ವಿದ್ಯಾರ್ಥಿಯೊಬ್ಬರು ಅಷ್ಟೇ ವೇಗವಾಗಿ ಇ– ಮೇಲ್ ಕಳುಹಿಸಿದಾಗ ನೆರೆದಿದ್ದವರಲ್ಲಿ ಆಶ್ಚರ್ಯ ಮತ್ತು ಕುತೂಹಲ; ಬ್ರೈಲ್ ಮುದ್ರ-ಕವು ಕ್ಷಣಾರ್ಧದಲ್ಲಿಯೇ ಮುದ್ರಿಸಿದ ಬ್ರೈಲ್ ಲಿಪಿಯ ಪಠ್ಯಗಳನ್ನು ಓದುತ್ತಾ ಆನಂದಿಸಿದ ಅಂಧರು.<br /> <br /> ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಘವು ಶುಕ್ರವಾರ ಏರ್ಪಡಿಸಿದ್ದ ‘ಗಣಕಯಂತ್ರ ಮತ್ತು ಭಾಷಾ ಕೌಶಲ ತರಬೇತಿ ಘಟಕ’ದ ಉದ್ಘಾಟನಾ ಸಮಾರಂಭವು ಮೇಲಿನ ದೃಶ್ಯಗಳಿಗೆ ಸಾಕ್ಷಿಯಾಯಿತು. ಮಾಜಿ ಅಡ್ವೊಕೇಟ್ ಜನರಲ್ ಎಸ್. ವಿಜಯಶಂಕರ್ ಅವರು ತರಬೇತಿ ಘಟಕವನ್ನು ಉದ್ಘಾಟಿಸಿದರು.<br /> <br /> ಸಂಘದ ಗೌರವ ಕಾರ್ಯದರ್ಶಿ ಎಸ್.ಪರಮಶಿವಮೂರ್ತಿ ಮಾತನಾಡಿ, ‘ಕಂಪ್ಯೂಟರ್ ಮತ್ತು ಅಂತರ್ಜಾಲ ಜಗತ್ತಿನಿಂದ ಅಂಧರು ದೂರ ಉಳಿಯಬಾರದು ಎಂದು ತರಬೇತಿ ಘಟಕವನ್ನು ಆರಂಭಿಸಲಾಗಿದೆ. ಕಂಪ್ಯೂಟರ್ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಬಳಕೆ ಹಾಗೂ ಅಂತರ್ಜಾಲ ಬಳಕೆ ಕುರಿತು ತರಬೇತಿ ನೀಡಲಾಗುವುದು’ ಎಂದರು.<br /> <br /> ‘ಪ್ರತಿ ದಿನ ಬೆಳಿಗ್ಗೆ 8 ರಿಂದ ರಾತ್ರಿ 7.30ರವರೆಗೆ ತರಗತಿಗಳು ನಡೆಯಲಿವೆ. ಅಂಧರು ಮಾತ್ರವಲ್ಲದೆ ಓಡಾಟಕ್ಕೆ ಅನುಕೂಲವಿರುವ ಅಂಗವಿಕಲರೂ ತರಬೇತಿಯಲ್ಲಿ ಭಾಗವಹಿಸಬಹುದು’ ಎಂದರು. ತರಬೇತಿ ಘಟಕವು ಮೌಖಿಕ ಮಾರ್ಗದರ್ಶನ ನೀಡುವ ವಿಶೇಷ ತಂತ್ರಾಂಶ– ‘ಜಾಸ್’ ಅಳವಡಿಸಿರುವ 12 ಕಂಪ್ಯೂಟರ್ಗಳು ಮತ್ತು ಒಂದು ಬ್ರೈಲ್ ಮುದ್ರಕವನ್ನು ಹೊಂದಿದೆ. ಮೇ 15ರಿಂದ ತರಬೇತಿ ಆರಂಭವಾಗಲಿದೆ. ಸಂಘದ ಅಧ್ಯಕ್ಷ ಎನ್.ಎಂ. ಪಾಟೀಲ್, ರೇಣುಕಾ ವಿಜಯಶಂಕರ್ ಇದ್ದರು.<br /> <strong>ಸಂಪರ್ಕಕ್ಕೆ: 97411 22706.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಕಂಪ್ಯೂಟರ್ ನೀಡುತ್ತಿದ್ದ ಮೌಖಿಕ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿಸುತ್ತಾ ಅಂಧ ವಿದ್ಯಾರ್ಥಿಯೊಬ್ಬರು ಅಷ್ಟೇ ವೇಗವಾಗಿ ಇ– ಮೇಲ್ ಕಳುಹಿಸಿದಾಗ ನೆರೆದಿದ್ದವರಲ್ಲಿ ಆಶ್ಚರ್ಯ ಮತ್ತು ಕುತೂಹಲ; ಬ್ರೈಲ್ ಮುದ್ರ-ಕವು ಕ್ಷಣಾರ್ಧದಲ್ಲಿಯೇ ಮುದ್ರಿಸಿದ ಬ್ರೈಲ್ ಲಿಪಿಯ ಪಠ್ಯಗಳನ್ನು ಓದುತ್ತಾ ಆನಂದಿಸಿದ ಅಂಧರು.<br /> <br /> ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಘವು ಶುಕ್ರವಾರ ಏರ್ಪಡಿಸಿದ್ದ ‘ಗಣಕಯಂತ್ರ ಮತ್ತು ಭಾಷಾ ಕೌಶಲ ತರಬೇತಿ ಘಟಕ’ದ ಉದ್ಘಾಟನಾ ಸಮಾರಂಭವು ಮೇಲಿನ ದೃಶ್ಯಗಳಿಗೆ ಸಾಕ್ಷಿಯಾಯಿತು. ಮಾಜಿ ಅಡ್ವೊಕೇಟ್ ಜನರಲ್ ಎಸ್. ವಿಜಯಶಂಕರ್ ಅವರು ತರಬೇತಿ ಘಟಕವನ್ನು ಉದ್ಘಾಟಿಸಿದರು.<br /> <br /> ಸಂಘದ ಗೌರವ ಕಾರ್ಯದರ್ಶಿ ಎಸ್.ಪರಮಶಿವಮೂರ್ತಿ ಮಾತನಾಡಿ, ‘ಕಂಪ್ಯೂಟರ್ ಮತ್ತು ಅಂತರ್ಜಾಲ ಜಗತ್ತಿನಿಂದ ಅಂಧರು ದೂರ ಉಳಿಯಬಾರದು ಎಂದು ತರಬೇತಿ ಘಟಕವನ್ನು ಆರಂಭಿಸಲಾಗಿದೆ. ಕಂಪ್ಯೂಟರ್ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಬಳಕೆ ಹಾಗೂ ಅಂತರ್ಜಾಲ ಬಳಕೆ ಕುರಿತು ತರಬೇತಿ ನೀಡಲಾಗುವುದು’ ಎಂದರು.<br /> <br /> ‘ಪ್ರತಿ ದಿನ ಬೆಳಿಗ್ಗೆ 8 ರಿಂದ ರಾತ್ರಿ 7.30ರವರೆಗೆ ತರಗತಿಗಳು ನಡೆಯಲಿವೆ. ಅಂಧರು ಮಾತ್ರವಲ್ಲದೆ ಓಡಾಟಕ್ಕೆ ಅನುಕೂಲವಿರುವ ಅಂಗವಿಕಲರೂ ತರಬೇತಿಯಲ್ಲಿ ಭಾಗವಹಿಸಬಹುದು’ ಎಂದರು. ತರಬೇತಿ ಘಟಕವು ಮೌಖಿಕ ಮಾರ್ಗದರ್ಶನ ನೀಡುವ ವಿಶೇಷ ತಂತ್ರಾಂಶ– ‘ಜಾಸ್’ ಅಳವಡಿಸಿರುವ 12 ಕಂಪ್ಯೂಟರ್ಗಳು ಮತ್ತು ಒಂದು ಬ್ರೈಲ್ ಮುದ್ರಕವನ್ನು ಹೊಂದಿದೆ. ಮೇ 15ರಿಂದ ತರಬೇತಿ ಆರಂಭವಾಗಲಿದೆ. ಸಂಘದ ಅಧ್ಯಕ್ಷ ಎನ್.ಎಂ. ಪಾಟೀಲ್, ರೇಣುಕಾ ವಿಜಯಶಂಕರ್ ಇದ್ದರು.<br /> <strong>ಸಂಪರ್ಕಕ್ಕೆ: 97411 22706.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>