<p><strong>ಬೆಂಗಳೂರು:</strong> ಖ್ಯಾತ ಕೊಳಲು ವಾದಕರಾದ ಅಂಬಳೆ ಹೇರಂಭ ಮತ್ತು ಹೇಮಂತ ಸೋದರರಿಂದ ಮಲ್ಲೇಶ್ವರದ ಗುರು ರಾಘವೇಂದ್ರ ಮಠದಲ್ಲಿ ರಾಮೋತ್ಸವದ ಪ್ರಯುಕ್ತ ಭಾನುವಾರ ಸಂಜೆ ದ್ವಂದ್ವ ವೇಣುವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.<br /> <br /> ಪಕ್ಕವಾದ್ಯದಲ್ಲಿ ಬಿ ಎಸ್ ಪ್ರಶಾಂತ್ (ಮೃದಂಗ), ನಟರಾಜ್ (ವಯಲಿನ್), ಭಾಸ್ಕರ್ (ಘಟಂ) ಪಾಲ್ಗೊಂಡಿದ್ದರು.<br /> ಅಂಬಳೆ ಸಹೋದರರಿಗೆ `ಯುವ ಕಲಾಶ್ರೀ~ ಪ್ರಶಸ್ತಿ ನೀಡಿ ಗೌರವಿಸಲಾಯಿತು. <br /> <br /> ತಿರುಮಲೆ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಯೋಜನಾ ಘಟಕ, ಸಪ್ತಗಿರಿ ಭಜನಾ ಮಂಡಳಿ, ಶಿವ-ಶ್ರೀಕಾಂತ ಸಂಗೀತ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಿಕ್ಕಿರಿದು ಸೇರಿದ್ದರು. ಇದೇ ಸಂದರ್ಭದಲ್ಲಿ ಹಾಸನದ ಭಾರತೀಯ ಸಂಗೀತ ನೃತ್ಯಕಲಾ ಶಾಲೆ ವತಿಯಿಂದ ಸಂಗೀತ ವಿದ್ವಾನ್ ಡಾ.ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. <br /> <br /> ಭಾರತೀಯ ಸಂಗೀತ ನೃತ್ಯಕಲಾ ಶಾಲೆಯ ನಿರ್ದೇಶಕಿ ರಾಜೇಶ್ವರಿ ಅವರು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಖ್ಯಾತ ಕೊಳಲು ವಾದಕರಾದ ಅಂಬಳೆ ಹೇರಂಭ ಮತ್ತು ಹೇಮಂತ ಸೋದರರಿಂದ ಮಲ್ಲೇಶ್ವರದ ಗುರು ರಾಘವೇಂದ್ರ ಮಠದಲ್ಲಿ ರಾಮೋತ್ಸವದ ಪ್ರಯುಕ್ತ ಭಾನುವಾರ ಸಂಜೆ ದ್ವಂದ್ವ ವೇಣುವಾದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.<br /> <br /> ಪಕ್ಕವಾದ್ಯದಲ್ಲಿ ಬಿ ಎಸ್ ಪ್ರಶಾಂತ್ (ಮೃದಂಗ), ನಟರಾಜ್ (ವಯಲಿನ್), ಭಾಸ್ಕರ್ (ಘಟಂ) ಪಾಲ್ಗೊಂಡಿದ್ದರು.<br /> ಅಂಬಳೆ ಸಹೋದರರಿಗೆ `ಯುವ ಕಲಾಶ್ರೀ~ ಪ್ರಶಸ್ತಿ ನೀಡಿ ಗೌರವಿಸಲಾಯಿತು. <br /> <br /> ತಿರುಮಲೆ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಯೋಜನಾ ಘಟಕ, ಸಪ್ತಗಿರಿ ಭಜನಾ ಮಂಡಳಿ, ಶಿವ-ಶ್ರೀಕಾಂತ ಸಂಗೀತ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಂದಿ ಕಿಕ್ಕಿರಿದು ಸೇರಿದ್ದರು. ಇದೇ ಸಂದರ್ಭದಲ್ಲಿ ಹಾಸನದ ಭಾರತೀಯ ಸಂಗೀತ ನೃತ್ಯಕಲಾ ಶಾಲೆ ವತಿಯಿಂದ ಸಂಗೀತ ವಿದ್ವಾನ್ ಡಾ.ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. <br /> <br /> ಭಾರತೀಯ ಸಂಗೀತ ನೃತ್ಯಕಲಾ ಶಾಲೆಯ ನಿರ್ದೇಶಕಿ ರಾಜೇಶ್ವರಿ ಅವರು ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>