<p>ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಇತ್ತೀಚೆಗೆ ಆಗಿದೆ. ಇದು ಎಂದೋ ಆಗ ಬೇಕಾಗಿದ್ದ ಕೆಲಸ, ತುಂಬ ತಡವಾಗಿ ಆಗಿದೆ. ಇದರಲ್ಲಿ ಕೆಲವರು ಅರ್ಹತೆ ಇದ್ದವರು, ಕೆಲವರು ಇದಕ್ಕೆಂದೇ ಅರ್ಹತೆ ಕಲ್ಪಿಸಿಕೊಂಡವರು ಬಂದಿದ್ದಾರೆ.<br /> <br /> ಅಕಾಡೆಮಿಗಳು ಸುಮಾರು ಎರಡು ವರ್ಷಗಳ ನಂತರ ಮತ್ತೆ ಕೆಲಸ ಶುರು ಮಾಡಲು ಹೊರಟಿರುವುದು ಶುಭಸೂಚನೆ. ಹೊಸ ರೀತಿಯಲ್ಲಿ ಕೆಲಸ ಮಾಡಲು ಇದೊಂದು ಅವಕಾಶ.<br /> <br /> ಕಾಲ ಬದಲಾಗಿದೆ, ಜನಗಳ ಆಶೋತ್ತರಗಳು ಬದಲಾಗಿವೆ. ಒಂದು ಅಕಾಡೆಮಿ ಎಂದರೇನು? ಅದು ಮಾಡಲೇಬೇಕಾದ ಕೆಲಸಗಳು ಏನು? ಪುನರಾವರ್ತನೆ ಆಗದಂತೆ ಹೇಗೆ ಕೆಲಸ ಮಾಡಬಹುದು ಎಂಬ ಬಗ್ಗೆ ಮೊದಲಿಗೆ ಎಲ್ಲ ಅಕಾಡೆಮಿಗಳ ಅಧ್ಯಕ್ಷರ ಮತ್ತು ರಿಜಿಸ್ಟ್ರಾರ್ಗಳ ಸಭೆ ಕರೆದು ಒಂದು ಸಮಗ್ರ ಚಿತ್ರಣ ಪಡೆಯಬೇಕು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉಳಿದ ಅಕಾಡೆಮಿ ಇವು ಪರಸ್ಪರ ಒಟ್ಟಿಗೆ ಕುಳಿತು ಸಮಗ್ರ ಕಾರ್ಯದ ಯೋಜನೆ ಮಾಡಿದರೆ ಲಾಭವಿದೆ. ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಮಗ್ರ ವಚನ ಸಂಪುಟಗಳು, ಸಮಗ್ರ ದಾಸ ಸಾಹಿತ್ಯದ ಸಂಪುಟಗಳನ್ನು ತಂದಂತೆ ‘ಸಮಗ್ರ ಕನ್ನಡ ತತ್ವಪದ ಸಾಹಿತ್ಯ’ದ ಸರಣಿ ತರಬೇಕಿದೆ.<br /> <br /> ಕನ್ನಡದಲ್ಲಿ ಈವರೆಗೆ ಬಂದಿರುವ ಸಮಗ್ರ ಸಾಹಿತ್ಯ ಸಂಪುಟಗಳ ವಿಷಯ ಸಂಗ್ರಹಣೆ ಮತ್ತು ಜೋಡಣೆ, ಪ್ರಸ್ತುತೀಕರಣದಲ್ಲೇ ಒಂದು ಪ್ರಮುಖ ಸಮಸ್ಯೆ ಇದೆ. ಒಬ್ಬ ಸಾಹಿತಿಯ ಸಮಗ್ರ ಸಂಪುಟಗಳನ್ನು ಪ್ರಕಟಿಸುವಾಗ ಮೊದಲು ಅವರ ಎಲ್ಲಾ ಪ್ರಕಟಿತ ಪುಸ್ತಕ ಮತ್ತು ಲೇಖನಗಳ ಪಟ್ಟಿ ಸಿದ್ಧವಾಗಬೇಕು. ನಂತರ ಹೊಸದಾಗಿ ಹುಡುಕಿ ಅದೇ ಸಾಹಿತಿಯ ಅಪ್ರಕಟಿತ ಪುಸ್ತಕ ಮತ್ತು ಲೇಖನಗಳ ಪಟ್ಟಿ ಕೂಡ ಸಿದ್ಧವಾಗಬೇಕು. ನಂತರ ಅದನ್ನು ಒಂದು ಕ್ರಮದಲ್ಲಿ ವ್ಯವಸ್ಥೆಗೊಳಿಸಬೇಕು. ಪ್ರತಿಯೊಂದು ಸಂಪುಟಕ್ಕೂ ಪ್ರತ್ಯೇಕ ಪ್ರಸ್ತಾವನೆ ಬರೆಯಬೇಕು.<br /> <br /> ಕೊನೆಯ ಸಂಪುಟದಲ್ಲಿ ಆ ಸಾಹಿತಿಯ ಎಲ್ಲಾ ಬರಹಗಳ ಸಮಗ್ರ ಸೂಚಿ, ಅವರನ್ನು ಕುರಿತು ಬಂದಿರುವ ಮುಖ್ಯ ಲೇಖನಗಳು/ ಪುಸ್ತಕಗಳ ಪಟ್ಟಿ ಅವಶ್ಯವಾಗಿ ಕೊಡಬೇಕು. ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ದೆಹಲಿ ಇವರು ಪ್ರಕಟಿಸಿರುವ ‘ಆನಂದ ಕುಮಾರಸ್ವಾಮಿ ಸಮಸ್ತ ಬರಹಗಳು’ ಈ ದಿಕ್ಕಿನ ಒಂದು ಉತ್ತಮ ಪ್ರಯತ್ನವಾಗಿದೆ. ಹಿಂದೆ ನಮ್ಮಲ್ಲಿ ಹಾ.ಮಾ.ನಾಯಕರು ಸಂಪಾದಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಡಿವಿಜಿ ಕೃತಿ ಶ್ರೇಣಿಯಲ್ಲಿ ಡಿವಿಜಿ ಅವರ ಎಲ್ಲಾ ಬರಹಗಳು ಸೇರಿಲ್ಲ. ಉದಾಹರಣೆಗೆ ಅದರಲ್ಲಿ ಡಿವಿಜಿ ಅವರು ದಿವಾನ್ ಮಿರ್ಜಾ ಇಸ್ಮಾಯಿಲ್, ಸರ್ಎಂ. ವಿಶ್ವೇಶ್ವರಯ್ಯ, ತಿ.ತಾ.ಶರ್ಮ, ರಾಜಾಜಿ, ಎ.ಎನ್.ಮೂರ್ತಿರಾವ್, ದೇವರಾಜ ಅರಸು ಮೊದಲಾದವರಿಗೆ ಬರೆದ ನೂರಾರು ಪತ್ರಗಳು ಸೇರಿಲ್ಲ. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ವಿವಿಧ ವಿದ್ವಾಂಸರು, ಲೇಖಕರಿಗೆ ವಹಿಸಿಕೊಟ್ಟಿರುವ ಪ್ರೊ.ಟಿ.ಎಸ್.ವೆಂಕಣ್ಣಯ್ಯ ಮತ್ತು ಪ್ರೊ.ಎ.ಆರ್.ಕೃಷ್ಣಶಾಸ್ತ್ರಿ ಸಂಪುಟಗಳು ಹೊರಗೆ ಬಂದಿಲ್ಲ.<br /> <br /> ಕನ್ನಡ ನಾಡು, ಭಾಷೆಗೆ ಸಂಬಂಧಿಸಿದ ಸಮಗ್ರಗಳ ಪರಿಕಲ್ಪನೆಯಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಉದಾಹರಣೆಗೆ ರೆವರೆಂಡ್ ಕಿಟೆಲ್, ಬಿ.ಎಲ್.ರೈಸ್, ಆರ್.ನರಸಿಂಹಾಚಾರ್, ಆ.ನೇ.ಉಪಾಧ್ಯೆ, ಡಿವಿಜಿ ಅವರ ಸಾವಿರಾರು ಪುಟಗಳ ಬರಹ ಇಂಗ್ಲಿಷಿನಲ್ಲಿದೆ. ಅದನ್ನು ಯಾರು ಪ್ರಕಟಿಸಬೇಕು? ಕನ್ನಡದ ಪ್ರಸಿದ್ಧ ಪತ್ರಕರ್ತ ತಿ.ತಾ.ಶರ್ಮಾ ಅವರ ‘ವಿಶ್ವಕರ್ಣಾಟಕ’ದ ಸಂಪಾದಕೀಯ ಲೇಖನಗಳಲ್ಲದೆ ಬೇರೆಡೆ ಚದುರಿ ಹೋಗಿರುವ ಅಸಂಖ್ಯಾತ ಬರಹಗಳು ಒಂದು ಕಡೆ ಸಮಗ್ರವಾಗಿ ಸಿಗುತ್ತಿಲ್ಲ. ಇದೇ ಸಾಲಿಗೆ, ಸರಸ್ವತಿಬಾಯಿ ರಾಜವಾಡೆ, ಎನ್.ಅಂತರಂಗಾಚಾರ್ ಬರಹಗಳು ಮತ್ತು ದ.ರಾ.ಬೇಂದ್ರೆಯವರನ್ನು ಪ್ರಭಾವಿಸಿದ ಶಾಂತಕವಿಗಳ ಸಮಗ್ರ ಬರಹಗಳು ಸೇರುತ್ತವೆ.<br /> <br /> ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕನ್ನಡಕ್ಕೆ ಬಂದಿದೆ. ಆದರೆ ಮೊದಲ ಆವೃತ್ತಿಯಲ್ಲಿ ತುಂಬಾ ತಪ್ಪುಗಳು ಇದ್ದವು. ಮಾತ್ರವಲ್ಲ, ಕಾನೂನಿಗೆ ಸಂಬಂಧಿಸಿದಂತೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬರೆದಿರುವ ಮೂಲದ ಕಠಿಣ ಭಾಗಗಳು ಬಿಟ್ಟು ಹೋಗಿದ್ದವು. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಹೊಸ ಮುದ್ರಣದಲ್ಲಿ ಈ ಲೋಪಗಳು ಆದಷ್ಟು ತಿದ್ದುಪಡಿಯಾಗಿವೆ.<br /> <br /> ರಾಮ ಮನೋಹರ ಲೋಹಿಯಾ ಸಮಗ್ರ, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಕೈಗೆತ್ತಿಕೊಂಡಿದ್ದ ಪಂ.ದೀನದಯಾಳು ಉಪಾಧ್ಯಾಯ ಸಮಗ್ರದ ಕೆಲಸಗಳು ಇನ್ನೂ ಪೂರ್ಣವಾಗಿಲ್ಲ. ಅದೇ ರೀತಿ ಮಹಾತ್ಮ ಜ್ಯೋತಿ ಬಾ ಫುಲೆ ಸಮಗ್ರ ಬರಹಗಳು ಕನ್ನಡಕ್ಕೆ ಇನ್ನೂ ಬರಬೇಕಿದೆ.<br /> <br /> ಒಂದೊಂದು ಅಕಾಡೆಮಿ ಮೂಲ ಮಾಹಿತಿ ಸಂಗ್ರಹಣೆಗೆ ಪರಿಣತರ, ಪರಿಶ್ರಮ ಪಡಬಲ್ಲವರ ತಂಡ ಕಟ್ಟಿಕೊಂಡು ಕಾಲ ಮಿತಿಯೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸಬೇಕು. ಪಟ್ಟ ಶ್ರಮ ಸಾರ್ಥಕವಾಗಬೇಕಾದರೆ ಸಿಡಿ ರೂಪದಲ್ಲಿ ಸಂಗ್ರಹಿಸಿ ಪ್ರತಿಯೊಂದು ಅಕಾಡೆಮಿ ತನ್ನ ಅಂತರ್ಜಾಲ ತಾಣದಲ್ಲಿ ಹಾಕಬೇಕು. ಅಂತರ್ಜಾಲ ತಾಣವಿರದಿದ್ದರೆ ಮೊದಲು ಅದನ್ನು ಸೃಷ್ಟಿಸಬೇಕು. ಇಲ್ಲಿ ಪ್ರಾಜೆಕ್ಟ್ ಗುಟೆನ್ಬರ್ಗ್ (project Guttenberg) ಮಾದರಿ ಅನುಸರಿಸಬಹುದು. ಆಗ ಒಂದು ಸಲ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಮುಂದಿನ ಪೀಳಿಗೆಯ ಪಾಲಿಗೆ ದೊಡ್ಡ ಸಂಪತ್ತಾಗುತ್ತದೆ.<br /> <br /> ಅಕಾಡೆಮಿಗಳು ತಮ್ಮ ಹಿಂದಿನ ಎಲ್ಲ ಪ್ರಕಟಣೆಗಳನ್ನು ಮೊದಲು ಅಂತರ್ಜಾಲ ತಾಣದಲ್ಲಿ ಪಿಡಿಎಫ್(pdf) ಡಿಜೆವಿಯು (djvu) ಮತ್ತು ಇನ್ನಿತರ ರೂಪಗಳಲ್ಲಿ ಕಡ್ಡಾಯವಾಗಿ ಹಾಕಬೇಕು. ಆಯಾ ಸಮಿತಿಯ ಕಾಲದಲ್ಲಿ ನಡೆದ ಕೆಲಸಗಳ ಸಂಕ್ಷಿಪ್ತ ವರದಿಗಳನ್ನು, ಪುಸ್ತಕಗಳನ್ನು ಕೆಲಸ ಮಾಡಿದವರ ಹೆಸರಿನ ಸಹಿತ ಹಾಕಬೇಕು. ಇದು ಹಿಂದೆ ಕೆಲಸ ಮಾಡಿದವರನ್ನು ಗೌರವಿಸುವ ಕ್ರಮವೂ ಹೌದು.<br /> <br /> ಈಗ ಎಲ್ಲಾ ವಿಷಯಗಳಲ್ಲೂ ಸರಳವಾದ ಆದರೆ ಅಧಿಕೃತ ವಿವರ, ವಿಶ್ಲೇಷಣೆಯಿರುವ ಸುಮಾರು 100–200 ಪುಟಗಳ ಪುಸ್ತಕಗಳ ಅಗತ್ಯವಿದೆ. ಹಿಂದೆ ಬರಗೂರು ರಾಮಚಂದ್ರಪ್ಪನವರ ಕಾಲದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇಂತಹ ಕೃತಿಗಳನ್ನು ಪ್ರಕಟಿಸಿತ್ತು.<br /> <br /> ಇಂಗ್ಲಿಷಿನಲ್ಲಿ ಇರುವ ನಮ್ಮ ಸಂದರ್ಭಕ್ಕೆ, ಸಮಾಜಕ್ಕೆ ಅತ್ಯಗತ್ಯವಾದ ವಿವಿಧ ಆಕರ ಪುಸ್ತಕಗಳು ನಮಗೆ ಬೇಕಾಗಿದೆ. ಸಾಹಿತ್ಯದ ಅತಿ ಹಳೆಯ ರೂಪಗಳಾದ ಮಹಾಕಾವ್ಯ, ನಾಟಕ, ಈಚಿನ ರೂಪವಾದ ಕಾದಂಬರಿ ಕುರಿತು ಜಗತ್ತಿನ ವಿವಿಧೆಡೆಗಳಲ್ಲಿ ಬಂದಿರುವ ಹೊಸ ನೋಟಗಳು ತುರ್ತಾಗಿ ಕನ್ನಡಕ್ಕೆ ಬೇಕು. ಅದೇ ರೀತಿ ನಮ್ಮ ಪ್ರಮುಖ ಲೇಖಕರ ಬಗ್ಗೆ ಬೇರೆ ಭಾರತೀಯ ಭಾಷೆಗಳಲ್ಲಿ ವ್ಯಕ್ತವಾಗುತ್ತಿರುವ ಹೊಸ ಮಾತುಗಳು ಅಕಾಡೆಮಿಗಳ ಮೂಲಕ ಜನರಿಗೆ ತಲುಪಬೇಕು.<br /> <br /> ಈಗ ಜಾನಪದ ವಿಶ್ವವಿದ್ಯಾಲಯದಲ್ಲಿರುವ ಅನೇಕರು ಜಾನಪದ ಅಕಾಡೆಮಿಯಲ್ಲಿ ಕೆಲಸ ಮಾಡಿರುವವರೇ ಆಗಿದ್ದಾರೆ. ಹಾಗಾಗಿ ಪರಸ್ಪರ ಮಾತನಾಡಿಕೊಂಡು ಜಾನಪದಕ್ಕೆ ಸಂಬಂಧಪಟ್ಟ ಅತ್ಯುತ್ತಮ ಕೆಲಸ ಮಾಡಲು ಬಹಳ ಅವಕಾಶವಿದೆ.<br /> ಕನ್ನಡದ ಬಗ್ಗೆ ಏನೇ ಮಾತನಾಡಿದರೂ ಮೊನ್ನೆ ಮೊನ್ನೆ ರಾಜ್ಯಸರ್ಕಾರದ ಪರ ವಕೀಲರನ್ನು ಸುಪ್ರೀಂಕೋರ್ಟ್ ತಾಯ್ನುಡಿ ಕುರಿತು ಕೇಳಿದ ಪ್ರಶ್ನೆ ಯಾರೂ ಇನ್ನೂ ಮರೆತಿಲ್ಲ. ಕನ್ನಡ ಈಗ ಇನ್ನಷ್ಟು ಬಲವಾಗಬೇಕಿದೆ. ಹಾಗೆ ಇಂಗ್ಲಿಷ್ನಲ್ಲಿರುವ ಜ್ಞಾನ ನಮ್ಮ ಹೊಸ ತಲೆಮಾರನ್ನು ಸೇರಬೇಕಿದೆ.<br /> <br /> ಕವಿ ಸಿದ್ಧಲಿಂಗಯ್ಯನವರು ಒಂದು ಸಲ ಹೇಳಿದ ಸಾಲು ನನಗೆ ಇನ್ನೂ ನೆನಪಿದೆ: ‘ಕನ್ನಡ ನಮ್ಮ ಬೇರು ಇಂಗ್ಲಿಷ್ ಅನ್ನ ಸಾರು’. ವಸಾಹತೋತ್ತರ, ಆಧುನಿಕೋತ್ತರ ಸಂದರ್ಭವು ನಮ್ಮ ಮನೆಗಳಲ್ಲಿ ಕನ್ನಡ ಕಮ್ಮಿಯಾಗುತ್ತಿರುವ ಸಮಯವೂ ಹೌದು. ಜನರ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ, ಗ್ರಾಮೀಣ ಭಾಗಗಳಲ್ಲಿ ಕುಸಿದಿರುವ ಆತ್ಮವಿಶ್ವಾಸ ಚಿಗುರುವಂತೆ ಮಾಡುವ ದಿಕ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.<br /> <br /> ವಿವಿಧ ಅಕಾಡೆಮಿಗಳ ಹಿಂದಿನ ಹಣಕಾಸು ವಹಿವಾಟಿನ ವೈಖರಿ ನೋಡಿದರೆ ಅದು ಆಶಾದಾಯಕವಾಗಿಲ್ಲ. ಜನರಿಂದ ಪಡೆದ 1ರೂಪಾಯಿಯಲ್ಲಿರುವ 100 ಪೈಸೆಗೂ ಲೆಕ್ಕ ಕೊಡಬೇಕೆಂದು ಗೋಪಾಲಕೃಷ್ಣ ಗೋಖಲೆ ಹೇಳಿದ್ದರು. ಇದರ ಅರ್ಥ, ಅಧ್ಯಕ್ಷರು, ಸದಸ್ಯರು ಮಂಜೂರಾಗಿರುವ ಹಣ ವಾಪಸಾಗಲು ಬಿಡದೆ, ಸೂಕ್ತವಾಗಿ ಬಳಸಿಕೊಳ್ಳಬೇಕು. ಇದರಲ್ಲಿ ಬೇಕಿರುವುದು ಯೋಜನೆ ಮತ್ತು ಅನುಷ್ಠಾನವೇ ಹೊರತು ಸಂಕೋಚವಲ್ಲ. ಮಹಾರಾಷ್ಟ್ರ, ಕೇರಳ, ಬಂಗಾಳ, ಒಡಿಶಾಗೆ ಸಾಂಸ್ಕೃತಿಕ ಲಕ್ಷಣವಿರುವಂತೆ ಕನ್ನಡಕ್ಕೂ ಇದೆ. ಕನ್ನಡಕ್ಕೆ ಒಂದು ಕಾಲವಿರುವಂತೆ, ಒಂದು ದೇಶವೂ ಇದೆ.<br /> <br /> ಕೆ.ವಿ.ಸುಬ್ಬಣ್ಣ ಒಂದು ಲೇಖನದಲ್ಲಿ ಹೇಳಿರುವಂತೆ ‘ಭವಕರ್ನಾಟಕ’ವಿರುವಂತೆ ‘ಭಾವಕರ್ನಾಟಕ’ವೂ ಇದೆ. ಕನ್ನಡದ ವ್ಯಕ್ತಿತ್ವದೊಡನೆ ಅದರ ಅಸ್ತಿತ್ವದ ಪ್ರಶ್ನೆಗಳನ್ನು ಎಲ್ಲಾ ಅಕಾಡೆಮಿಗಳು ಮೈಮೇಲೆ ಎಳೆದುಕೊಳ್ಳಬೇಕು. ಯಾವುದೇ ಅನುಮಾನವಿಲ್ಲದೆ ಸದಸ್ಯರು ತಾವು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂಬಂತೆ ತುಂಬ ಎಚ್ಚರದಿಂದ ಅಷ್ಟೇ ಭಯಮುಕ್ತರಾಗಿ ವರ್ತಿಸಬೇಕು. ಹಿಂದೆ ಸರ್ಕಾರ ತಾನೇ ಸಾಂಸ್ಕೃತಿಕ ನೀತಿ ರೂಪಿಸುವ ಮಾತನ್ನು ಆಡಿತ್ತು. ಆದರೆ ಅದು ಸರ್ಕಾರದ ಕೆಲಸವಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಿ, ಕೆಲಸ ಆಗುತ್ತಿದೆಯೇ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಆಗಾಗ ತಿಳಿದುಕೊಳ್ಳುತ್ತಿರಬೇಕು.<br /> <br /> ಕೆಲವು ಅಕಾಡೆಮಿಗಳ ಮಾರಾಟ ಮಳಿಗೆಗಳಿಗೆ ಬೆಂಗಳೂರು ನಗರದೊಳಗೆ ಮಾರಾಟ ಮಳಿಗೆ ವ್ಯವಸ್ಥೆಯಿಲ್ಲ. ಉದಾಹರಣೆಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪುಸ್ತಕಗಳು ಬೇಕಿದ್ದರೆ ಬೆಂಗಳೂರು ವಿ.ವಿ.ಯ ಹಿಂದೆ ಇರುವ ಮಲ್ಲತ್ತಹಳ್ಳಿ ಕಚೇರಿಗೇ ಹೋಗಬೇಕು. ಇದರತ್ತ ಸರ್ಕಾರ ಕೂಡಲೇ ಗಮನ ಕೊಡಬೇಕು.<br /> <br /> ಸರ್ಕಾರ ನಿಗದಿತ ಹಣ ನೀಡಬೇಕು, ಹೊಸ ಅಧ್ಯಕ್ಷರು, ಸದಸ್ಯರು ಚಿಲ್ಲರೆ ರಾಜಕೀಯಗಳಲ್ಲಿ, ಜಾತಿಗದ್ದಲದ ಕ್ಲೇಶದಲ್ಲಿ ಸಿಲುಕಿಕೊಳ್ಳದೆ ಕನ್ನಡ ಮನಸ್ಸಿನ ಆತ್ಮಸಾಕ್ಷಿಗಳಂತೆ ನಡೆದು ಕೊಳ್ಳಬೇಕು. ಜಗತ್ತಿನ ಅತಿ ಪ್ರೌಢ, ಪ್ರಾಚೀನ ಮತ್ತು ಜೀವಂತ ಭಾಷೆ ಕನ್ನಡ ಎಂಬ ಅರಿವೊಂದಿದ್ದರೆ ಅದರ ಬೆಳಕು ತಾನೇ ದಾರಿ ತೋರಿಸುತ್ತದೆ.<br /> <br /> ಕೊನೆಗೂ ಎಲ್ಲವೂ ನಡೆಯುತ್ತಿರುವುದು ಪ್ರಜೆಗಳ ತೆರಿಗೆಯಿಂದ ಎಂಬ ಅರಿವು ಅಕಾಡೆಮಿಗಳನ್ನು ಮುನ್ನಡೆಸಲು ಹೊರಟಿರುವವರಿಗೆ ಇದ್ದರೆ ಸಾಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಇತ್ತೀಚೆಗೆ ಆಗಿದೆ. ಇದು ಎಂದೋ ಆಗ ಬೇಕಾಗಿದ್ದ ಕೆಲಸ, ತುಂಬ ತಡವಾಗಿ ಆಗಿದೆ. ಇದರಲ್ಲಿ ಕೆಲವರು ಅರ್ಹತೆ ಇದ್ದವರು, ಕೆಲವರು ಇದಕ್ಕೆಂದೇ ಅರ್ಹತೆ ಕಲ್ಪಿಸಿಕೊಂಡವರು ಬಂದಿದ್ದಾರೆ.<br /> <br /> ಅಕಾಡೆಮಿಗಳು ಸುಮಾರು ಎರಡು ವರ್ಷಗಳ ನಂತರ ಮತ್ತೆ ಕೆಲಸ ಶುರು ಮಾಡಲು ಹೊರಟಿರುವುದು ಶುಭಸೂಚನೆ. ಹೊಸ ರೀತಿಯಲ್ಲಿ ಕೆಲಸ ಮಾಡಲು ಇದೊಂದು ಅವಕಾಶ.<br /> <br /> ಕಾಲ ಬದಲಾಗಿದೆ, ಜನಗಳ ಆಶೋತ್ತರಗಳು ಬದಲಾಗಿವೆ. ಒಂದು ಅಕಾಡೆಮಿ ಎಂದರೇನು? ಅದು ಮಾಡಲೇಬೇಕಾದ ಕೆಲಸಗಳು ಏನು? ಪುನರಾವರ್ತನೆ ಆಗದಂತೆ ಹೇಗೆ ಕೆಲಸ ಮಾಡಬಹುದು ಎಂಬ ಬಗ್ಗೆ ಮೊದಲಿಗೆ ಎಲ್ಲ ಅಕಾಡೆಮಿಗಳ ಅಧ್ಯಕ್ಷರ ಮತ್ತು ರಿಜಿಸ್ಟ್ರಾರ್ಗಳ ಸಭೆ ಕರೆದು ಒಂದು ಸಮಗ್ರ ಚಿತ್ರಣ ಪಡೆಯಬೇಕು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಉಳಿದ ಅಕಾಡೆಮಿ ಇವು ಪರಸ್ಪರ ಒಟ್ಟಿಗೆ ಕುಳಿತು ಸಮಗ್ರ ಕಾರ್ಯದ ಯೋಜನೆ ಮಾಡಿದರೆ ಲಾಭವಿದೆ. ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಮಗ್ರ ವಚನ ಸಂಪುಟಗಳು, ಸಮಗ್ರ ದಾಸ ಸಾಹಿತ್ಯದ ಸಂಪುಟಗಳನ್ನು ತಂದಂತೆ ‘ಸಮಗ್ರ ಕನ್ನಡ ತತ್ವಪದ ಸಾಹಿತ್ಯ’ದ ಸರಣಿ ತರಬೇಕಿದೆ.<br /> <br /> ಕನ್ನಡದಲ್ಲಿ ಈವರೆಗೆ ಬಂದಿರುವ ಸಮಗ್ರ ಸಾಹಿತ್ಯ ಸಂಪುಟಗಳ ವಿಷಯ ಸಂಗ್ರಹಣೆ ಮತ್ತು ಜೋಡಣೆ, ಪ್ರಸ್ತುತೀಕರಣದಲ್ಲೇ ಒಂದು ಪ್ರಮುಖ ಸಮಸ್ಯೆ ಇದೆ. ಒಬ್ಬ ಸಾಹಿತಿಯ ಸಮಗ್ರ ಸಂಪುಟಗಳನ್ನು ಪ್ರಕಟಿಸುವಾಗ ಮೊದಲು ಅವರ ಎಲ್ಲಾ ಪ್ರಕಟಿತ ಪುಸ್ತಕ ಮತ್ತು ಲೇಖನಗಳ ಪಟ್ಟಿ ಸಿದ್ಧವಾಗಬೇಕು. ನಂತರ ಹೊಸದಾಗಿ ಹುಡುಕಿ ಅದೇ ಸಾಹಿತಿಯ ಅಪ್ರಕಟಿತ ಪುಸ್ತಕ ಮತ್ತು ಲೇಖನಗಳ ಪಟ್ಟಿ ಕೂಡ ಸಿದ್ಧವಾಗಬೇಕು. ನಂತರ ಅದನ್ನು ಒಂದು ಕ್ರಮದಲ್ಲಿ ವ್ಯವಸ್ಥೆಗೊಳಿಸಬೇಕು. ಪ್ರತಿಯೊಂದು ಸಂಪುಟಕ್ಕೂ ಪ್ರತ್ಯೇಕ ಪ್ರಸ್ತಾವನೆ ಬರೆಯಬೇಕು.<br /> <br /> ಕೊನೆಯ ಸಂಪುಟದಲ್ಲಿ ಆ ಸಾಹಿತಿಯ ಎಲ್ಲಾ ಬರಹಗಳ ಸಮಗ್ರ ಸೂಚಿ, ಅವರನ್ನು ಕುರಿತು ಬಂದಿರುವ ಮುಖ್ಯ ಲೇಖನಗಳು/ ಪುಸ್ತಕಗಳ ಪಟ್ಟಿ ಅವಶ್ಯವಾಗಿ ಕೊಡಬೇಕು. ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ದೆಹಲಿ ಇವರು ಪ್ರಕಟಿಸಿರುವ ‘ಆನಂದ ಕುಮಾರಸ್ವಾಮಿ ಸಮಸ್ತ ಬರಹಗಳು’ ಈ ದಿಕ್ಕಿನ ಒಂದು ಉತ್ತಮ ಪ್ರಯತ್ನವಾಗಿದೆ. ಹಿಂದೆ ನಮ್ಮಲ್ಲಿ ಹಾ.ಮಾ.ನಾಯಕರು ಸಂಪಾದಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿರುವ ಡಿವಿಜಿ ಕೃತಿ ಶ್ರೇಣಿಯಲ್ಲಿ ಡಿವಿಜಿ ಅವರ ಎಲ್ಲಾ ಬರಹಗಳು ಸೇರಿಲ್ಲ. ಉದಾಹರಣೆಗೆ ಅದರಲ್ಲಿ ಡಿವಿಜಿ ಅವರು ದಿವಾನ್ ಮಿರ್ಜಾ ಇಸ್ಮಾಯಿಲ್, ಸರ್ಎಂ. ವಿಶ್ವೇಶ್ವರಯ್ಯ, ತಿ.ತಾ.ಶರ್ಮ, ರಾಜಾಜಿ, ಎ.ಎನ್.ಮೂರ್ತಿರಾವ್, ದೇವರಾಜ ಅರಸು ಮೊದಲಾದವರಿಗೆ ಬರೆದ ನೂರಾರು ಪತ್ರಗಳು ಸೇರಿಲ್ಲ. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ವಿವಿಧ ವಿದ್ವಾಂಸರು, ಲೇಖಕರಿಗೆ ವಹಿಸಿಕೊಟ್ಟಿರುವ ಪ್ರೊ.ಟಿ.ಎಸ್.ವೆಂಕಣ್ಣಯ್ಯ ಮತ್ತು ಪ್ರೊ.ಎ.ಆರ್.ಕೃಷ್ಣಶಾಸ್ತ್ರಿ ಸಂಪುಟಗಳು ಹೊರಗೆ ಬಂದಿಲ್ಲ.<br /> <br /> ಕನ್ನಡ ನಾಡು, ಭಾಷೆಗೆ ಸಂಬಂಧಿಸಿದ ಸಮಗ್ರಗಳ ಪರಿಕಲ್ಪನೆಯಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಉದಾಹರಣೆಗೆ ರೆವರೆಂಡ್ ಕಿಟೆಲ್, ಬಿ.ಎಲ್.ರೈಸ್, ಆರ್.ನರಸಿಂಹಾಚಾರ್, ಆ.ನೇ.ಉಪಾಧ್ಯೆ, ಡಿವಿಜಿ ಅವರ ಸಾವಿರಾರು ಪುಟಗಳ ಬರಹ ಇಂಗ್ಲಿಷಿನಲ್ಲಿದೆ. ಅದನ್ನು ಯಾರು ಪ್ರಕಟಿಸಬೇಕು? ಕನ್ನಡದ ಪ್ರಸಿದ್ಧ ಪತ್ರಕರ್ತ ತಿ.ತಾ.ಶರ್ಮಾ ಅವರ ‘ವಿಶ್ವಕರ್ಣಾಟಕ’ದ ಸಂಪಾದಕೀಯ ಲೇಖನಗಳಲ್ಲದೆ ಬೇರೆಡೆ ಚದುರಿ ಹೋಗಿರುವ ಅಸಂಖ್ಯಾತ ಬರಹಗಳು ಒಂದು ಕಡೆ ಸಮಗ್ರವಾಗಿ ಸಿಗುತ್ತಿಲ್ಲ. ಇದೇ ಸಾಲಿಗೆ, ಸರಸ್ವತಿಬಾಯಿ ರಾಜವಾಡೆ, ಎನ್.ಅಂತರಂಗಾಚಾರ್ ಬರಹಗಳು ಮತ್ತು ದ.ರಾ.ಬೇಂದ್ರೆಯವರನ್ನು ಪ್ರಭಾವಿಸಿದ ಶಾಂತಕವಿಗಳ ಸಮಗ್ರ ಬರಹಗಳು ಸೇರುತ್ತವೆ.<br /> <br /> ‘ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆ’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕನ್ನಡಕ್ಕೆ ಬಂದಿದೆ. ಆದರೆ ಮೊದಲ ಆವೃತ್ತಿಯಲ್ಲಿ ತುಂಬಾ ತಪ್ಪುಗಳು ಇದ್ದವು. ಮಾತ್ರವಲ್ಲ, ಕಾನೂನಿಗೆ ಸಂಬಂಧಿಸಿದಂತೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬರೆದಿರುವ ಮೂಲದ ಕಠಿಣ ಭಾಗಗಳು ಬಿಟ್ಟು ಹೋಗಿದ್ದವು. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಹೊಸ ಮುದ್ರಣದಲ್ಲಿ ಈ ಲೋಪಗಳು ಆದಷ್ಟು ತಿದ್ದುಪಡಿಯಾಗಿವೆ.<br /> <br /> ರಾಮ ಮನೋಹರ ಲೋಹಿಯಾ ಸಮಗ್ರ, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಕೈಗೆತ್ತಿಕೊಂಡಿದ್ದ ಪಂ.ದೀನದಯಾಳು ಉಪಾಧ್ಯಾಯ ಸಮಗ್ರದ ಕೆಲಸಗಳು ಇನ್ನೂ ಪೂರ್ಣವಾಗಿಲ್ಲ. ಅದೇ ರೀತಿ ಮಹಾತ್ಮ ಜ್ಯೋತಿ ಬಾ ಫುಲೆ ಸಮಗ್ರ ಬರಹಗಳು ಕನ್ನಡಕ್ಕೆ ಇನ್ನೂ ಬರಬೇಕಿದೆ.<br /> <br /> ಒಂದೊಂದು ಅಕಾಡೆಮಿ ಮೂಲ ಮಾಹಿತಿ ಸಂಗ್ರಹಣೆಗೆ ಪರಿಣತರ, ಪರಿಶ್ರಮ ಪಡಬಲ್ಲವರ ತಂಡ ಕಟ್ಟಿಕೊಂಡು ಕಾಲ ಮಿತಿಯೊಳಗೆ ಈ ಕೆಲಸಗಳನ್ನು ಮಾಡಿ ಮುಗಿಸಬೇಕು. ಪಟ್ಟ ಶ್ರಮ ಸಾರ್ಥಕವಾಗಬೇಕಾದರೆ ಸಿಡಿ ರೂಪದಲ್ಲಿ ಸಂಗ್ರಹಿಸಿ ಪ್ರತಿಯೊಂದು ಅಕಾಡೆಮಿ ತನ್ನ ಅಂತರ್ಜಾಲ ತಾಣದಲ್ಲಿ ಹಾಕಬೇಕು. ಅಂತರ್ಜಾಲ ತಾಣವಿರದಿದ್ದರೆ ಮೊದಲು ಅದನ್ನು ಸೃಷ್ಟಿಸಬೇಕು. ಇಲ್ಲಿ ಪ್ರಾಜೆಕ್ಟ್ ಗುಟೆನ್ಬರ್ಗ್ (project Guttenberg) ಮಾದರಿ ಅನುಸರಿಸಬಹುದು. ಆಗ ಒಂದು ಸಲ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಮುಂದಿನ ಪೀಳಿಗೆಯ ಪಾಲಿಗೆ ದೊಡ್ಡ ಸಂಪತ್ತಾಗುತ್ತದೆ.<br /> <br /> ಅಕಾಡೆಮಿಗಳು ತಮ್ಮ ಹಿಂದಿನ ಎಲ್ಲ ಪ್ರಕಟಣೆಗಳನ್ನು ಮೊದಲು ಅಂತರ್ಜಾಲ ತಾಣದಲ್ಲಿ ಪಿಡಿಎಫ್(pdf) ಡಿಜೆವಿಯು (djvu) ಮತ್ತು ಇನ್ನಿತರ ರೂಪಗಳಲ್ಲಿ ಕಡ್ಡಾಯವಾಗಿ ಹಾಕಬೇಕು. ಆಯಾ ಸಮಿತಿಯ ಕಾಲದಲ್ಲಿ ನಡೆದ ಕೆಲಸಗಳ ಸಂಕ್ಷಿಪ್ತ ವರದಿಗಳನ್ನು, ಪುಸ್ತಕಗಳನ್ನು ಕೆಲಸ ಮಾಡಿದವರ ಹೆಸರಿನ ಸಹಿತ ಹಾಕಬೇಕು. ಇದು ಹಿಂದೆ ಕೆಲಸ ಮಾಡಿದವರನ್ನು ಗೌರವಿಸುವ ಕ್ರಮವೂ ಹೌದು.<br /> <br /> ಈಗ ಎಲ್ಲಾ ವಿಷಯಗಳಲ್ಲೂ ಸರಳವಾದ ಆದರೆ ಅಧಿಕೃತ ವಿವರ, ವಿಶ್ಲೇಷಣೆಯಿರುವ ಸುಮಾರು 100–200 ಪುಟಗಳ ಪುಸ್ತಕಗಳ ಅಗತ್ಯವಿದೆ. ಹಿಂದೆ ಬರಗೂರು ರಾಮಚಂದ್ರಪ್ಪನವರ ಕಾಲದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇಂತಹ ಕೃತಿಗಳನ್ನು ಪ್ರಕಟಿಸಿತ್ತು.<br /> <br /> ಇಂಗ್ಲಿಷಿನಲ್ಲಿ ಇರುವ ನಮ್ಮ ಸಂದರ್ಭಕ್ಕೆ, ಸಮಾಜಕ್ಕೆ ಅತ್ಯಗತ್ಯವಾದ ವಿವಿಧ ಆಕರ ಪುಸ್ತಕಗಳು ನಮಗೆ ಬೇಕಾಗಿದೆ. ಸಾಹಿತ್ಯದ ಅತಿ ಹಳೆಯ ರೂಪಗಳಾದ ಮಹಾಕಾವ್ಯ, ನಾಟಕ, ಈಚಿನ ರೂಪವಾದ ಕಾದಂಬರಿ ಕುರಿತು ಜಗತ್ತಿನ ವಿವಿಧೆಡೆಗಳಲ್ಲಿ ಬಂದಿರುವ ಹೊಸ ನೋಟಗಳು ತುರ್ತಾಗಿ ಕನ್ನಡಕ್ಕೆ ಬೇಕು. ಅದೇ ರೀತಿ ನಮ್ಮ ಪ್ರಮುಖ ಲೇಖಕರ ಬಗ್ಗೆ ಬೇರೆ ಭಾರತೀಯ ಭಾಷೆಗಳಲ್ಲಿ ವ್ಯಕ್ತವಾಗುತ್ತಿರುವ ಹೊಸ ಮಾತುಗಳು ಅಕಾಡೆಮಿಗಳ ಮೂಲಕ ಜನರಿಗೆ ತಲುಪಬೇಕು.<br /> <br /> ಈಗ ಜಾನಪದ ವಿಶ್ವವಿದ್ಯಾಲಯದಲ್ಲಿರುವ ಅನೇಕರು ಜಾನಪದ ಅಕಾಡೆಮಿಯಲ್ಲಿ ಕೆಲಸ ಮಾಡಿರುವವರೇ ಆಗಿದ್ದಾರೆ. ಹಾಗಾಗಿ ಪರಸ್ಪರ ಮಾತನಾಡಿಕೊಂಡು ಜಾನಪದಕ್ಕೆ ಸಂಬಂಧಪಟ್ಟ ಅತ್ಯುತ್ತಮ ಕೆಲಸ ಮಾಡಲು ಬಹಳ ಅವಕಾಶವಿದೆ.<br /> ಕನ್ನಡದ ಬಗ್ಗೆ ಏನೇ ಮಾತನಾಡಿದರೂ ಮೊನ್ನೆ ಮೊನ್ನೆ ರಾಜ್ಯಸರ್ಕಾರದ ಪರ ವಕೀಲರನ್ನು ಸುಪ್ರೀಂಕೋರ್ಟ್ ತಾಯ್ನುಡಿ ಕುರಿತು ಕೇಳಿದ ಪ್ರಶ್ನೆ ಯಾರೂ ಇನ್ನೂ ಮರೆತಿಲ್ಲ. ಕನ್ನಡ ಈಗ ಇನ್ನಷ್ಟು ಬಲವಾಗಬೇಕಿದೆ. ಹಾಗೆ ಇಂಗ್ಲಿಷ್ನಲ್ಲಿರುವ ಜ್ಞಾನ ನಮ್ಮ ಹೊಸ ತಲೆಮಾರನ್ನು ಸೇರಬೇಕಿದೆ.<br /> <br /> ಕವಿ ಸಿದ್ಧಲಿಂಗಯ್ಯನವರು ಒಂದು ಸಲ ಹೇಳಿದ ಸಾಲು ನನಗೆ ಇನ್ನೂ ನೆನಪಿದೆ: ‘ಕನ್ನಡ ನಮ್ಮ ಬೇರು ಇಂಗ್ಲಿಷ್ ಅನ್ನ ಸಾರು’. ವಸಾಹತೋತ್ತರ, ಆಧುನಿಕೋತ್ತರ ಸಂದರ್ಭವು ನಮ್ಮ ಮನೆಗಳಲ್ಲಿ ಕನ್ನಡ ಕಮ್ಮಿಯಾಗುತ್ತಿರುವ ಸಮಯವೂ ಹೌದು. ಜನರ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ, ಗ್ರಾಮೀಣ ಭಾಗಗಳಲ್ಲಿ ಕುಸಿದಿರುವ ಆತ್ಮವಿಶ್ವಾಸ ಚಿಗುರುವಂತೆ ಮಾಡುವ ದಿಕ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.<br /> <br /> ವಿವಿಧ ಅಕಾಡೆಮಿಗಳ ಹಿಂದಿನ ಹಣಕಾಸು ವಹಿವಾಟಿನ ವೈಖರಿ ನೋಡಿದರೆ ಅದು ಆಶಾದಾಯಕವಾಗಿಲ್ಲ. ಜನರಿಂದ ಪಡೆದ 1ರೂಪಾಯಿಯಲ್ಲಿರುವ 100 ಪೈಸೆಗೂ ಲೆಕ್ಕ ಕೊಡಬೇಕೆಂದು ಗೋಪಾಲಕೃಷ್ಣ ಗೋಖಲೆ ಹೇಳಿದ್ದರು. ಇದರ ಅರ್ಥ, ಅಧ್ಯಕ್ಷರು, ಸದಸ್ಯರು ಮಂಜೂರಾಗಿರುವ ಹಣ ವಾಪಸಾಗಲು ಬಿಡದೆ, ಸೂಕ್ತವಾಗಿ ಬಳಸಿಕೊಳ್ಳಬೇಕು. ಇದರಲ್ಲಿ ಬೇಕಿರುವುದು ಯೋಜನೆ ಮತ್ತು ಅನುಷ್ಠಾನವೇ ಹೊರತು ಸಂಕೋಚವಲ್ಲ. ಮಹಾರಾಷ್ಟ್ರ, ಕೇರಳ, ಬಂಗಾಳ, ಒಡಿಶಾಗೆ ಸಾಂಸ್ಕೃತಿಕ ಲಕ್ಷಣವಿರುವಂತೆ ಕನ್ನಡಕ್ಕೂ ಇದೆ. ಕನ್ನಡಕ್ಕೆ ಒಂದು ಕಾಲವಿರುವಂತೆ, ಒಂದು ದೇಶವೂ ಇದೆ.<br /> <br /> ಕೆ.ವಿ.ಸುಬ್ಬಣ್ಣ ಒಂದು ಲೇಖನದಲ್ಲಿ ಹೇಳಿರುವಂತೆ ‘ಭವಕರ್ನಾಟಕ’ವಿರುವಂತೆ ‘ಭಾವಕರ್ನಾಟಕ’ವೂ ಇದೆ. ಕನ್ನಡದ ವ್ಯಕ್ತಿತ್ವದೊಡನೆ ಅದರ ಅಸ್ತಿತ್ವದ ಪ್ರಶ್ನೆಗಳನ್ನು ಎಲ್ಲಾ ಅಕಾಡೆಮಿಗಳು ಮೈಮೇಲೆ ಎಳೆದುಕೊಳ್ಳಬೇಕು. ಯಾವುದೇ ಅನುಮಾನವಿಲ್ಲದೆ ಸದಸ್ಯರು ತಾವು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂಬಂತೆ ತುಂಬ ಎಚ್ಚರದಿಂದ ಅಷ್ಟೇ ಭಯಮುಕ್ತರಾಗಿ ವರ್ತಿಸಬೇಕು. ಹಿಂದೆ ಸರ್ಕಾರ ತಾನೇ ಸಾಂಸ್ಕೃತಿಕ ನೀತಿ ರೂಪಿಸುವ ಮಾತನ್ನು ಆಡಿತ್ತು. ಆದರೆ ಅದು ಸರ್ಕಾರದ ಕೆಲಸವಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಿ, ಕೆಲಸ ಆಗುತ್ತಿದೆಯೇ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಆಗಾಗ ತಿಳಿದುಕೊಳ್ಳುತ್ತಿರಬೇಕು.<br /> <br /> ಕೆಲವು ಅಕಾಡೆಮಿಗಳ ಮಾರಾಟ ಮಳಿಗೆಗಳಿಗೆ ಬೆಂಗಳೂರು ನಗರದೊಳಗೆ ಮಾರಾಟ ಮಳಿಗೆ ವ್ಯವಸ್ಥೆಯಿಲ್ಲ. ಉದಾಹರಣೆಗೆ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪುಸ್ತಕಗಳು ಬೇಕಿದ್ದರೆ ಬೆಂಗಳೂರು ವಿ.ವಿ.ಯ ಹಿಂದೆ ಇರುವ ಮಲ್ಲತ್ತಹಳ್ಳಿ ಕಚೇರಿಗೇ ಹೋಗಬೇಕು. ಇದರತ್ತ ಸರ್ಕಾರ ಕೂಡಲೇ ಗಮನ ಕೊಡಬೇಕು.<br /> <br /> ಸರ್ಕಾರ ನಿಗದಿತ ಹಣ ನೀಡಬೇಕು, ಹೊಸ ಅಧ್ಯಕ್ಷರು, ಸದಸ್ಯರು ಚಿಲ್ಲರೆ ರಾಜಕೀಯಗಳಲ್ಲಿ, ಜಾತಿಗದ್ದಲದ ಕ್ಲೇಶದಲ್ಲಿ ಸಿಲುಕಿಕೊಳ್ಳದೆ ಕನ್ನಡ ಮನಸ್ಸಿನ ಆತ್ಮಸಾಕ್ಷಿಗಳಂತೆ ನಡೆದು ಕೊಳ್ಳಬೇಕು. ಜಗತ್ತಿನ ಅತಿ ಪ್ರೌಢ, ಪ್ರಾಚೀನ ಮತ್ತು ಜೀವಂತ ಭಾಷೆ ಕನ್ನಡ ಎಂಬ ಅರಿವೊಂದಿದ್ದರೆ ಅದರ ಬೆಳಕು ತಾನೇ ದಾರಿ ತೋರಿಸುತ್ತದೆ.<br /> <br /> ಕೊನೆಗೂ ಎಲ್ಲವೂ ನಡೆಯುತ್ತಿರುವುದು ಪ್ರಜೆಗಳ ತೆರಿಗೆಯಿಂದ ಎಂಬ ಅರಿವು ಅಕಾಡೆಮಿಗಳನ್ನು ಮುನ್ನಡೆಸಲು ಹೊರಟಿರುವವರಿಗೆ ಇದ್ದರೆ ಸಾಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>