<p><strong>ಬೆಂಗಳೂರು:</strong> ಹಣಕ್ಕಾಗಿ ಪೀಡಿಸಿ ವೃದ್ಧ ಮಹಿಳೆಯೊಬ್ಬರನ್ನು 18 ತಿಂಗಳುಗಳ ಕಾಲ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿರುವ ಆರೋಪ ಹೊತ್ತ ವಕೀಲರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.<br /> <br /> ಕಾನೂನು ಸಲಹೆಗಾರರೂ ಆಗಿರುವ ನಗರದ ಎಸ್.ಕೆ.ಪರಮೇಶ್ ಅವರು, ಸುಮಾರು 55 ವರ್ಷದ ಮೀನಾ ಪೈ ಎನ್ನುವವರನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಹಿಂಸೆ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. <br /> ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೋಗಿದ್ದರು. ಆದರೆ ಜಾಮೀನಿಗೆ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ನಿರಾಕರಿಸಿದರು.<br /> <br /> `ಮೀನಾ ಅವರ ಪತಿ ವಿಜಯ್ ಹಾಗೂ ಪರಮೇಶ್ ಅವರು ಪಾಲುದಾರರಾಗಿ ವ್ಯವಹಾರ ಒಂದರಲ್ಲಿ ತೊಡಗಿದ್ದರು. ಇದರಿಂದ ಮೀನಾ ಅವರ ಮನೆಗೆ ಪರಮೇಶ್ ಅವರು ಹೋಗಿ ಬರುವುದು ಮಾಮೂಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀನಾ ಅವರ ಆಸ್ತಿ, ಹಣ ಇತ್ಯಾದಿಗಳ ಬಗ್ಗೆ ಪರಮೇಶ್ ಅವರಿಗೆ ಅರಿವು ಇತ್ತು. ಮೀನಾ ಅವರ ಪತಿ ಅನಾರೋಗ್ಯದಿಂದ 2009ರ ಅಕ್ಟೋಬರ್ ತಿಂಗಳಿನಲ್ಲಿ ಮರಣ ಹೊಂದಿದರು. <br /> <br /> ಈ ಸಂದರ್ಭವನ್ನೇ ಬಳಸಿಕೊಂಡ ಪರಮೇಶ್, ಮೀನಾರನ್ನು ಬೆದರಿಸಿ ಅವರ ಬಳಿ ಇದ್ದ ಹಣ ಕಿತ್ತುಕೊಂಡಿದ್ದಾರೆ. ಬ್ಯಾಂಕ್ನಲ್ಲಿ ಇರುವ ಹಣಲಪಟಾಯಿಸಲು ಖಾಲಿ ಚೆಕ್ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ವಿಷಯ ಬೇರೆಯವರಿಗೆ ತಿಳಿಸಬಾರದು ಎಂಬ ಕಾರಣಕ್ಕೆ ಅಕ್ರಮ ಬಂಧನದಲ್ಲಿ ಇರಿಸಿ ಹಿಂಸೆ ನೀಡಲಾಗಿದೆ~ ಎನ್ನುವುದು ಆರೋಪ. <br /> <br /> `ಪರಮೇಶ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ಸಾಕ್ಷ್ಯಾಧಾರನಾಶಪಡಿಸುವ ಸಾಧ್ಯತೆ ಇದ್ದು, ಜಾಮೀನು ನೀಡಬಾರದು~ ಎಂಬ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರ ವಾದ ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಜಾಮೀನು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹಣಕ್ಕಾಗಿ ಪೀಡಿಸಿ ವೃದ್ಧ ಮಹಿಳೆಯೊಬ್ಬರನ್ನು 18 ತಿಂಗಳುಗಳ ಕಾಲ ಅಕ್ರಮವಾಗಿ ಬಂಧನದಲ್ಲಿ ಇರಿಸಿಕೊಂಡಿರುವ ಆರೋಪ ಹೊತ್ತ ವಕೀಲರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.<br /> <br /> ಕಾನೂನು ಸಲಹೆಗಾರರೂ ಆಗಿರುವ ನಗರದ ಎಸ್.ಕೆ.ಪರಮೇಶ್ ಅವರು, ಸುಮಾರು 55 ವರ್ಷದ ಮೀನಾ ಪೈ ಎನ್ನುವವರನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಹಿಂಸೆ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. <br /> ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೋಗಿದ್ದರು. ಆದರೆ ಜಾಮೀನಿಗೆ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ನಿರಾಕರಿಸಿದರು.<br /> <br /> `ಮೀನಾ ಅವರ ಪತಿ ವಿಜಯ್ ಹಾಗೂ ಪರಮೇಶ್ ಅವರು ಪಾಲುದಾರರಾಗಿ ವ್ಯವಹಾರ ಒಂದರಲ್ಲಿ ತೊಡಗಿದ್ದರು. ಇದರಿಂದ ಮೀನಾ ಅವರ ಮನೆಗೆ ಪರಮೇಶ್ ಅವರು ಹೋಗಿ ಬರುವುದು ಮಾಮೂಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀನಾ ಅವರ ಆಸ್ತಿ, ಹಣ ಇತ್ಯಾದಿಗಳ ಬಗ್ಗೆ ಪರಮೇಶ್ ಅವರಿಗೆ ಅರಿವು ಇತ್ತು. ಮೀನಾ ಅವರ ಪತಿ ಅನಾರೋಗ್ಯದಿಂದ 2009ರ ಅಕ್ಟೋಬರ್ ತಿಂಗಳಿನಲ್ಲಿ ಮರಣ ಹೊಂದಿದರು. <br /> <br /> ಈ ಸಂದರ್ಭವನ್ನೇ ಬಳಸಿಕೊಂಡ ಪರಮೇಶ್, ಮೀನಾರನ್ನು ಬೆದರಿಸಿ ಅವರ ಬಳಿ ಇದ್ದ ಹಣ ಕಿತ್ತುಕೊಂಡಿದ್ದಾರೆ. ಬ್ಯಾಂಕ್ನಲ್ಲಿ ಇರುವ ಹಣಲಪಟಾಯಿಸಲು ಖಾಲಿ ಚೆಕ್ಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ವಿಷಯ ಬೇರೆಯವರಿಗೆ ತಿಳಿಸಬಾರದು ಎಂಬ ಕಾರಣಕ್ಕೆ ಅಕ್ರಮ ಬಂಧನದಲ್ಲಿ ಇರಿಸಿ ಹಿಂಸೆ ನೀಡಲಾಗಿದೆ~ ಎನ್ನುವುದು ಆರೋಪ. <br /> <br /> `ಪರಮೇಶ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ಸಾಕ್ಷ್ಯಾಧಾರನಾಶಪಡಿಸುವ ಸಾಧ್ಯತೆ ಇದ್ದು, ಜಾಮೀನು ನೀಡಬಾರದು~ ಎಂಬ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್.ಚಂದ್ರಮೌಳಿ ಅವರ ವಾದ ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಜಾಮೀನು ನಿರಾಕರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>