<p><strong>ಬೆಂಗಳೂರು:</strong> `ಬಡವರಿಗೆ ಎರಡು ಹೊತ್ತಿನ ಊಟ ಸಮರ್ಪಕವಾಗಿ ದೊರೆಯಬೇಕೆಂಬ ಉದ್ದೇಶದಿಂದಲೇ ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಯೋಜನೆಯನ್ನು ಅಧಿಕಾರ ಸ್ವೀಕರಿಸಿದ ದಿನದಂದೇ ಘೋಷಣೆ ಮಾಡಿದೆ ಹೊರತು ಪ್ರಚಾರ ಪಡೆಯಲು ಅಲ್ಲ' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.<br /> <br /> ಕರ್ನಾಟಕ ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೃಷ್ಣಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `98 ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕಾರ್ಡ್ನ ವ್ಯಾಪ್ತಿಗೂ ಬರದ ಅದೆಷ್ಟೋ ಮಂದಿ ಬಡವರು ಇದ್ದಾರೆ. ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಬಹುದು. ಆದರೆ ಬಡವರಿಗೆ ಎರಡು ಹೊತ್ತಿನ ತುತ್ತು ದೊರೆಯಬೇಕು' ಎಂದು ತಿಳಿಸಿದರು.<br /> <br /> `ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ರಾಜ್ಯದ ಅಭಿವೃದ್ಧಿ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ತರುವ ಅಗತ್ಯವಿದೆ. ದಲಿತರ, ಶ್ರಮಿಕರ, ಶೋಷಿತರ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.<br /> <br /> `ತೊಂಬತ್ತರ ದಶಕದಲ್ಲಿ ಬಿ.ಕೃಷ್ಣಪ್ಪ ಅವರ ಪರಿಚಯವಾಗಿತ್ತು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಬಿ.ಕೃಷ್ಣಪ್ಪ ಜೀವಂತವಾಗಿಲ್ಲದೇ ಇರಬಹುದು, ಆದರೆ ಅವರ ವಿಚಾರಧಾರೆಯಿಂದಲೇ ಜನರ ನಡುವೆ ಇದ್ದಾರೆ'ಎಂದರು.<br /> <br /> ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ , `ಅಸ್ತಿತ್ವವನ್ನೇ ಮಾರಿಕೊಂಡು, ವ್ಯವಸ್ಥೆಗೆ ಶರಣೆಂದಿರುವ ಬುದ್ಧಿಜೀವಿಗಳ ನಡುವೆಯೂ ನಿಜವಾದ ಹೋರಾಟಗಾರನಿಗೆ ಬೆಂಬಲ ಸೂಚಿಸಬೇಕು. ಶೋಷಿತರ ಪರವಾಗಿ ಬಾಯಿಚಪಲಕ್ಕೆ ಮಾತನಾಡುವವರನ್ನು ವಿರೋಧಿಸಬೇಕು' ಎಂದು ಕರೆ ನೀಡಿದರು.<br /> <br /> ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, `ಜಾತಿಯೆಂಬುದು ಈ ವ್ಯವಸ್ಥೆಗೆ ಅಂಟಿರುವ ಜಾಡ್ಯ. ಶಿಕ್ಷಣ, ಅಧಿಕಾರ ಪಡೆದರೂ ಈ ವಿಷವರ್ತುಲದಿಂದ ಹೊರಬರಲು ದಲಿತನೊಬ್ಬ ಕಷ್ಟಪಡುತ್ತಾನೆ. ದಲಿತರ ಆತ್ಮಶಕ್ತಿಯಾಗಿರುವ ಅಂಬೇಡ್ಕರ್ ತತ್ವಗಳೇ ಶ್ರೀರಕ್ಷೆ' ಎಂದರು.<br /> <br /> ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ನ ಇಂದಿರಾ ಕೃಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಬಡವರಿಗೆ ಎರಡು ಹೊತ್ತಿನ ಊಟ ಸಮರ್ಪಕವಾಗಿ ದೊರೆಯಬೇಕೆಂಬ ಉದ್ದೇಶದಿಂದಲೇ ಒಂದು ರೂಪಾಯಿಗೆ ಕೆ.ಜಿ ಅಕ್ಕಿ ಯೋಜನೆಯನ್ನು ಅಧಿಕಾರ ಸ್ವೀಕರಿಸಿದ ದಿನದಂದೇ ಘೋಷಣೆ ಮಾಡಿದೆ ಹೊರತು ಪ್ರಚಾರ ಪಡೆಯಲು ಅಲ್ಲ' ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.<br /> <br /> ಕರ್ನಾಟಕ ದಲಿತ ಸಂಘರ್ಷ ಸಮಿತಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕೃಷ್ಣಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `98 ಲಕ್ಷಕ್ಕೂ ಅಧಿಕ ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಕಾರ್ಡ್ನ ವ್ಯಾಪ್ತಿಗೂ ಬರದ ಅದೆಷ್ಟೋ ಮಂದಿ ಬಡವರು ಇದ್ದಾರೆ. ಒಂದು ರೂಪಾಯಿಗೆ ಕೆ.ಜಿ. ಅಕ್ಕಿ ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಬಹುದು. ಆದರೆ ಬಡವರಿಗೆ ಎರಡು ಹೊತ್ತಿನ ತುತ್ತು ದೊರೆಯಬೇಕು' ಎಂದು ತಿಳಿಸಿದರು.<br /> <br /> `ಅಧಿಕಾರ ವಹಿಸಿಕೊಂಡು ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ರಾಜ್ಯದ ಅಭಿವೃದ್ಧಿ ಮಾಡಲು ವಿವಿಧ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ತರುವ ಅಗತ್ಯವಿದೆ. ದಲಿತರ, ಶ್ರಮಿಕರ, ಶೋಷಿತರ ಹಾಗೂ ಮಹಿಳೆಯರ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.<br /> <br /> `ತೊಂಬತ್ತರ ದಶಕದಲ್ಲಿ ಬಿ.ಕೃಷ್ಣಪ್ಪ ಅವರ ಪರಿಚಯವಾಗಿತ್ತು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಬಿ.ಕೃಷ್ಣಪ್ಪ ಜೀವಂತವಾಗಿಲ್ಲದೇ ಇರಬಹುದು, ಆದರೆ ಅವರ ವಿಚಾರಧಾರೆಯಿಂದಲೇ ಜನರ ನಡುವೆ ಇದ್ದಾರೆ'ಎಂದರು.<br /> <br /> ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ , `ಅಸ್ತಿತ್ವವನ್ನೇ ಮಾರಿಕೊಂಡು, ವ್ಯವಸ್ಥೆಗೆ ಶರಣೆಂದಿರುವ ಬುದ್ಧಿಜೀವಿಗಳ ನಡುವೆಯೂ ನಿಜವಾದ ಹೋರಾಟಗಾರನಿಗೆ ಬೆಂಬಲ ಸೂಚಿಸಬೇಕು. ಶೋಷಿತರ ಪರವಾಗಿ ಬಾಯಿಚಪಲಕ್ಕೆ ಮಾತನಾಡುವವರನ್ನು ವಿರೋಧಿಸಬೇಕು' ಎಂದು ಕರೆ ನೀಡಿದರು.<br /> <br /> ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, `ಜಾತಿಯೆಂಬುದು ಈ ವ್ಯವಸ್ಥೆಗೆ ಅಂಟಿರುವ ಜಾಡ್ಯ. ಶಿಕ್ಷಣ, ಅಧಿಕಾರ ಪಡೆದರೂ ಈ ವಿಷವರ್ತುಲದಿಂದ ಹೊರಬರಲು ದಲಿತನೊಬ್ಬ ಕಷ್ಟಪಡುತ್ತಾನೆ. ದಲಿತರ ಆತ್ಮಶಕ್ತಿಯಾಗಿರುವ ಅಂಬೇಡ್ಕರ್ ತತ್ವಗಳೇ ಶ್ರೀರಕ್ಷೆ' ಎಂದರು.<br /> <br /> ಪ್ರೊ. ಬಿ.ಕೃಷ್ಣಪ್ಪ ಟ್ರಸ್ಟ್ನ ಇಂದಿರಾ ಕೃಷ್ಣಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>