<p><strong>ಚೆನ್ನೈ (ಪಿಟಿಐ): </strong>ಶಾಂತಿಯ ಸ್ವರ್ಗ ಹಾಗೂ ಹೊರಗಿನಿಂದ ಬಂದವರಿಗೆ ನೆಮ್ಮದಿಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಮಿಳುನಾಡಿನಿಂದ ಈಶಾನ್ಯ ರಾಜ್ಯಗಳ ಜನ ವಲಸೆ ಹೋಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.<br /> <br /> ಹೊರಗಿನವರಿಗೆ ಇಲ್ಲಿ ಅಸುರಕ್ಷಿತ ಭಾವನೆ ಮೂಡಲು ಕಾರಣ ಏನು ಎನ್ನುವುದು ಸ್ಥಳೀಯರಿಗೆ ಹಾಗೂ ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.<br /> <br /> ಕೈಗಾರಿಕಾ ಘಟಕ, ಮಾಲ್ ಹಾಗೂ ಹೊಟೆಲ್ಗಳಲ್ಲಿ ಈಶಾನ್ಯ ರಾಜ್ಯದವರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರೊಂದಿಗೆ ಸಾಮರಸ್ಯದಿಂದ ಇರುವ ಇವರು ನಿರರ್ಗಳವಾಗಿ ತಮಿಳು ಮಾತನಾಡುತ್ತಾರೆ. <br /> <br /> <strong>ಮಮತಾ ವಿಷಾದ</strong><br /> ಕೋಲ್ಕತ್ತ (ಪಿಟಿಐ): ಅಸ್ಸಾಂ ಹಿಂಸಾಚಾರದ ಪರಿಣಾಮವಾಗಿ ಸಾಮೂಹಿಕವಾಗಿ ತಮ್ಮ ರಾಜ್ಯಗಳಿಗೆ ವಲಸೆಹೋದ ಈಶಾನ್ಯರಾಜ್ಯಗಳ ಜನರು ತೊಂದರೆಯಲ್ಲಿ ಸಿಕ್ಕಿಕೊಂಡಿರುವುದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ವಿಷಾದ ವ್ಯಕ್ತಿಪಡಿಸಿದ್ದಾರೆ.<br /> <br /> `ವದಂತಿಗಳಿಗೆ ಕಿವಿಗೊಡಬೇಡಿ. ದಯವಿಟ್ಟು ಶಾಂತಿ ಹಾಗು ಸಾಮರಸ್ಯವನ್ನು ಕಾಪಾಡಿ~ ಎಂದು ಈದ್ವೇಳೆ ಸೇರಿದ ಸಭೆಯಲ್ಲಿ ಭಾಗವಹಿಸಿ ಮನವಿ ಮಾಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ): </strong>ಶಾಂತಿಯ ಸ್ವರ್ಗ ಹಾಗೂ ಹೊರಗಿನಿಂದ ಬಂದವರಿಗೆ ನೆಮ್ಮದಿಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಮಿಳುನಾಡಿನಿಂದ ಈಶಾನ್ಯ ರಾಜ್ಯಗಳ ಜನ ವಲಸೆ ಹೋಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.<br /> <br /> ಹೊರಗಿನವರಿಗೆ ಇಲ್ಲಿ ಅಸುರಕ್ಷಿತ ಭಾವನೆ ಮೂಡಲು ಕಾರಣ ಏನು ಎನ್ನುವುದು ಸ್ಥಳೀಯರಿಗೆ ಹಾಗೂ ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.<br /> <br /> ಕೈಗಾರಿಕಾ ಘಟಕ, ಮಾಲ್ ಹಾಗೂ ಹೊಟೆಲ್ಗಳಲ್ಲಿ ಈಶಾನ್ಯ ರಾಜ್ಯದವರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರೊಂದಿಗೆ ಸಾಮರಸ್ಯದಿಂದ ಇರುವ ಇವರು ನಿರರ್ಗಳವಾಗಿ ತಮಿಳು ಮಾತನಾಡುತ್ತಾರೆ. <br /> <br /> <strong>ಮಮತಾ ವಿಷಾದ</strong><br /> ಕೋಲ್ಕತ್ತ (ಪಿಟಿಐ): ಅಸ್ಸಾಂ ಹಿಂಸಾಚಾರದ ಪರಿಣಾಮವಾಗಿ ಸಾಮೂಹಿಕವಾಗಿ ತಮ್ಮ ರಾಜ್ಯಗಳಿಗೆ ವಲಸೆಹೋದ ಈಶಾನ್ಯರಾಜ್ಯಗಳ ಜನರು ತೊಂದರೆಯಲ್ಲಿ ಸಿಕ್ಕಿಕೊಂಡಿರುವುದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ವಿಷಾದ ವ್ಯಕ್ತಿಪಡಿಸಿದ್ದಾರೆ.<br /> <br /> `ವದಂತಿಗಳಿಗೆ ಕಿವಿಗೊಡಬೇಡಿ. ದಯವಿಟ್ಟು ಶಾಂತಿ ಹಾಗು ಸಾಮರಸ್ಯವನ್ನು ಕಾಪಾಡಿ~ ಎಂದು ಈದ್ವೇಳೆ ಸೇರಿದ ಸಭೆಯಲ್ಲಿ ಭಾಗವಹಿಸಿ ಮನವಿ ಮಾಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>