<p><strong>ಬೆಂಗಳೂರು:</strong> ಬಜೆಟ್ ಮಂಡಿಸುವ ಸಂದರ್ಭ ವಚನಗಳು ಮತ್ತು ಕಾವ್ಯದ ಸಾಲುಗಳನ್ನು ಹೇಳುವ ಪರಂಪರೆ ಮುಂದುವರಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, ತಾವು ಹೊಸ ಹಾದಿ ಹಿಡಿಯುವುದಾಗಿ ಹೇಳಿದ್ದು ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯ ಓದುವ ಮೂಲಕ.<br /> <br /> `ಹೊಸ ಹಾದಿಯನು ಹಿಡಿದು ನಡೆಯಣ್ಣ, ಮುಂದೆ! ಹೊಸ ಜೀವ, ಹೊಸ ಭಾವ, ಹೊಸ ವೇಗದಿಂದೆ~ ಎಂದು ಹೇಳುವ ಮೂಲಕ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಹೊಸತನ ತರುವ ಪ್ರಯತ್ನ ಮಾಡಲಾಗುವುದು ಎಂದರು.<br /> <br /> ಯುವ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನ ಕುರಿತು ಹೇಳುವಾಗ ಗೌಡರು ಆಯ್ಕೆ ಮಾಡಿಕೊಂಡಿದ್ದೂ ಅಡಿಗರ ಜನಪ್ರಿಯ ಕಾವ್ಯದ ಸಾಲುಗಳನ್ನು. `ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ...~ ಎಂದ ಮುಖ್ಯಮಂತ್ರಿಗಳು, `ಹೊಸ ನಾಡು ಕಟ್ಟುವ ಕಾಯಕದಲ್ಲಿ ಸರ್ಕಾರ ಯುವ ಶಕ್ತಿಯ ರಚನಾತ್ಮಕ ಬಳಕೆಯ ಸಂಕಲ್ಪ ಮಾಡಿದೆ~ ಎಂದು ಘೋಷಿಸಿದರು.<br /> <br /> ಬಜೆಟ್ ಕುರಿತು ಎದುರಾಗುವ ಟೀಕೆ-ಟಿಪ್ಪಣಿಗಳಿಂದ ವಿಚಲಿತ ಆಗುವುದಿಲ್ಲ ಎಂಬುದನ್ನೂ `ನ್ಯಾಯನಿಷ್ಠುರಿ, ದಾಕ್ಷಿಣ್ಯ ಪರ ನಾನಲ್ಲ; ಲೋಕ ವಿರೋಧಿ, ಶರಣನಾರಿಗೂ ಅಂಜುವವನಲ್ಲ~ ವಚನದ ಮೂಲಕ ಸೂಚ್ಯವಾಗಿ ಹೇಳಿದರು! <br /> <br /> `ಮಂಕುತಿಮ್ಮನ ಕಗ್ಗ~ದ `ಕಳವಳವ ನೀಗಿಬಿಡು, ತಳಮಳ ದೂರವಿಡು; ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ~ ಎಂದು ಬಜೆಟ್ ಮಂಡನೆಯ ಕೊನೆಯಲ್ಲಿ ಹೇಳುವ ಮೂಲಕ ಸ್ಥಿತಪ್ರಜ್ಞ ಮನೋಭಾವ ಬಿಡಲಾರೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಜೆಟ್ ಮಂಡಿಸುವ ಸಂದರ್ಭ ವಚನಗಳು ಮತ್ತು ಕಾವ್ಯದ ಸಾಲುಗಳನ್ನು ಹೇಳುವ ಪರಂಪರೆ ಮುಂದುವರಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು, ತಾವು ಹೊಸ ಹಾದಿ ಹಿಡಿಯುವುದಾಗಿ ಹೇಳಿದ್ದು ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯ ಓದುವ ಮೂಲಕ.<br /> <br /> `ಹೊಸ ಹಾದಿಯನು ಹಿಡಿದು ನಡೆಯಣ್ಣ, ಮುಂದೆ! ಹೊಸ ಜೀವ, ಹೊಸ ಭಾವ, ಹೊಸ ವೇಗದಿಂದೆ~ ಎಂದು ಹೇಳುವ ಮೂಲಕ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಲ್ಲಿ ಹೊಸತನ ತರುವ ಪ್ರಯತ್ನ ಮಾಡಲಾಗುವುದು ಎಂದರು.<br /> <br /> ಯುವ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನ ಕುರಿತು ಹೇಳುವಾಗ ಗೌಡರು ಆಯ್ಕೆ ಮಾಡಿಕೊಂಡಿದ್ದೂ ಅಡಿಗರ ಜನಪ್ರಿಯ ಕಾವ್ಯದ ಸಾಲುಗಳನ್ನು. `ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ...~ ಎಂದ ಮುಖ್ಯಮಂತ್ರಿಗಳು, `ಹೊಸ ನಾಡು ಕಟ್ಟುವ ಕಾಯಕದಲ್ಲಿ ಸರ್ಕಾರ ಯುವ ಶಕ್ತಿಯ ರಚನಾತ್ಮಕ ಬಳಕೆಯ ಸಂಕಲ್ಪ ಮಾಡಿದೆ~ ಎಂದು ಘೋಷಿಸಿದರು.<br /> <br /> ಬಜೆಟ್ ಕುರಿತು ಎದುರಾಗುವ ಟೀಕೆ-ಟಿಪ್ಪಣಿಗಳಿಂದ ವಿಚಲಿತ ಆಗುವುದಿಲ್ಲ ಎಂಬುದನ್ನೂ `ನ್ಯಾಯನಿಷ್ಠುರಿ, ದಾಕ್ಷಿಣ್ಯ ಪರ ನಾನಲ್ಲ; ಲೋಕ ವಿರೋಧಿ, ಶರಣನಾರಿಗೂ ಅಂಜುವವನಲ್ಲ~ ವಚನದ ಮೂಲಕ ಸೂಚ್ಯವಾಗಿ ಹೇಳಿದರು! <br /> <br /> `ಮಂಕುತಿಮ್ಮನ ಕಗ್ಗ~ದ `ಕಳವಳವ ನೀಗಿಬಿಡು, ತಳಮಳ ದೂರವಿಡು; ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ~ ಎಂದು ಬಜೆಟ್ ಮಂಡನೆಯ ಕೊನೆಯಲ್ಲಿ ಹೇಳುವ ಮೂಲಕ ಸ್ಥಿತಪ್ರಜ್ಞ ಮನೋಭಾವ ಬಿಡಲಾರೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>