<p><strong>ನವದೆಹಲಿ (ಪಿಟಿಐ):</strong> ~ಚಳವಳಿಯು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಗೊಂದಲಮಯವಾಗಿದೆ~ ಎಂದು ಆಕ್ಷೇಪಿಸಿ ಅಣ್ಣಾ ಹಜಾರೆ ತಂಡದ ಇಬ್ಬರು ಪ್ರಮುಖ ನಾಯಕರಾದ ಪಿ.ವಿ. ರಾಜಗೋಪಾಲ್ ಮತ್ತು ~ಜಲ ಮಾನವ~ ರಾಜೇಂದ್ರ ಸಿಂಗ್ ಅವರು ಮಂಗಳವಾರ ತಂಡದ ಕೋರ್ ಸಮಿತಿಯನ್ನು ಮಂಗಳವಾರ ತ್ಯಜಿಸಿದ್ದಾರೆ.<br /> <br /> ಸಮಿತಿ ತ್ಯಜಿಸದಂತೆ ಅಣ್ಣಾ ತಂಡವು ತಮ್ಮ ಮೇಲೆ ಪ್ರಭಾವ ಬೀರುತ್ತಿದೆ ಎಂದು ರಾಜಗೋಪಾಲ್ ಅವರು ಹೇಳಿದ್ದರೂ, ಹಿಸ್ಸಾರ್ ನಲ್ಲಿ ಕಾಂಗ್ರೆಸ್ ವಿರೋಧಿ ಪ್ರಚಾರ ಅಭಿಯಾನ ಆರಂಭಿಸುವ ನಿರ್ಧಾರವನ್ನು ಕೋರ್ ಸಮಿತಿಯಲ್ಲಿ ಕೈಗೊಳ್ಳದಿದ್ದುದು ಈ ಇಬ್ಬರು ಪ್ರಮುಖರ ಸಮಿತಿ ತ್ಯಾಗಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ.<br /> <br /> ~ನಾನು ತಂಡದಿಂದ ಹೊರಹೋಗುತ್ತಿದ್ದೇನೆ. ತಂಡ ರಾಜಕೀಯಗೊಳ್ಳುತ್ತಿದೆ. ಹಿಸ್ಸಾರ್ ಸೇರಿದಂತೆ ಈ ವಿಚಾರದ ಬಗ್ಗೆ ಸುಳಿವು ನೀಡುವ ಹೇಳಿಕೆಗಳು ಬರುತ್ತಿವೆ ಎಂದು ರಾಜೇಂದ್ರ ಸಿಂಗ್ ಹೇಳಿದ್ದಾರೆ.<br /> <br /> ಭೂಮಿಯ ಹಕ್ಕುಗಳಿಗಾಗಿ ಪ್ರಸ್ತುತ ತಮ್ಮ ಅಖಿಲ ಭಾರತ ಯಾತ್ರೆ ಸಲುವಾಗಿ ಕೇರಳದ ಅಟ್ಟಪ್ಪಾಡಿಗೆ ಬಂದಿರುವ ರಾಜಗೋಪಾಲ್ ಅವರು ತಮ್ಮ ನಿರ್ಧಾರದ ಬಗ್ಗೆ ಕೋರ್ ಸಮಿತಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ.<br /> <br /> ನಾನು ಸದಸ್ಯತ್ವವನ್ನೇ ಕೋರಿಲ್ಲವಾದ್ದರಿಂದ ಪತ್ರ ಬರೆಯುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ರಾಜೇಂದ್ರ ಸಿಂಗ್ ವ್ಯಕ್ತ ಪಡಿಸಿದ್ದಾರೆ.<br /> <br /> ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎಂಬುದಾಗಿ ಹೇಳುವ ಮೂಲಕ ವಿವಾದ ಸೃಷ್ಟಿಸಿದ ಪ್ರಶಾಂತ ಭೂಷಣ್ ಅವರನ್ನು ತಂಡದಲ್ಲಿ ಮುಂದುವರಿಸಬೇಕೆ ಎಂಬ ಬಗ್ಗೆ ಕೋರ್ ಸಮಿತಿ ನಿರ್ಧರಿಸುತ್ತದೆ ಎಂಬುದಾಗಿ ಅಣ್ಣಾ ಹಜಾರೆ ಹೇಳುವುದರೊಂದಿಗೆ ಹೊಸ ಸಮಸ್ಯೆ ಶುರುವಾಗಿತ್ತು.<br /> <br /> ~ತಂಡದಲ್ಲಿ ಮುಂದುವರಿಯಲು ನನಗೆ ಇರುವ ತೊಂದರೆಗಳ ಬಗ್ಗೆ ತಿಳಿಸಿ ನಾನು ಪತ್ರ ಬರೆದಿದ್ದೇನೆ. ಅವರು (ತಂಡ) ಇಂತಹ ಯಾವುದೇ ನಿರ್ಧಾರ ಕೈಗೊಳ್ಳದಂತೆ ನನಗೆ ಹೇಳಿದ್ದಾರೆ. ನಾನು ಅಖಿಲ ಭಾರತ ಯಾತ್ರೆಯಲ್ಲಿ ಮಗ್ನನಾಗಿದ್ದೇನೆ~ ಎಂದು ರಾಜಗೋಪಾಲ್ ಅಟ್ಟಪ್ಪಾಡಿಯಿಂದ ಪಿಟಿಐಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ~ಚಳವಳಿಯು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಗೊಂದಲಮಯವಾಗಿದೆ~ ಎಂದು ಆಕ್ಷೇಪಿಸಿ ಅಣ್ಣಾ ಹಜಾರೆ ತಂಡದ ಇಬ್ಬರು ಪ್ರಮುಖ ನಾಯಕರಾದ ಪಿ.ವಿ. ರಾಜಗೋಪಾಲ್ ಮತ್ತು ~ಜಲ ಮಾನವ~ ರಾಜೇಂದ್ರ ಸಿಂಗ್ ಅವರು ಮಂಗಳವಾರ ತಂಡದ ಕೋರ್ ಸಮಿತಿಯನ್ನು ಮಂಗಳವಾರ ತ್ಯಜಿಸಿದ್ದಾರೆ.<br /> <br /> ಸಮಿತಿ ತ್ಯಜಿಸದಂತೆ ಅಣ್ಣಾ ತಂಡವು ತಮ್ಮ ಮೇಲೆ ಪ್ರಭಾವ ಬೀರುತ್ತಿದೆ ಎಂದು ರಾಜಗೋಪಾಲ್ ಅವರು ಹೇಳಿದ್ದರೂ, ಹಿಸ್ಸಾರ್ ನಲ್ಲಿ ಕಾಂಗ್ರೆಸ್ ವಿರೋಧಿ ಪ್ರಚಾರ ಅಭಿಯಾನ ಆರಂಭಿಸುವ ನಿರ್ಧಾರವನ್ನು ಕೋರ್ ಸಮಿತಿಯಲ್ಲಿ ಕೈಗೊಳ್ಳದಿದ್ದುದು ಈ ಇಬ್ಬರು ಪ್ರಮುಖರ ಸಮಿತಿ ತ್ಯಾಗಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗಿದೆ.<br /> <br /> ~ನಾನು ತಂಡದಿಂದ ಹೊರಹೋಗುತ್ತಿದ್ದೇನೆ. ತಂಡ ರಾಜಕೀಯಗೊಳ್ಳುತ್ತಿದೆ. ಹಿಸ್ಸಾರ್ ಸೇರಿದಂತೆ ಈ ವಿಚಾರದ ಬಗ್ಗೆ ಸುಳಿವು ನೀಡುವ ಹೇಳಿಕೆಗಳು ಬರುತ್ತಿವೆ ಎಂದು ರಾಜೇಂದ್ರ ಸಿಂಗ್ ಹೇಳಿದ್ದಾರೆ.<br /> <br /> ಭೂಮಿಯ ಹಕ್ಕುಗಳಿಗಾಗಿ ಪ್ರಸ್ತುತ ತಮ್ಮ ಅಖಿಲ ಭಾರತ ಯಾತ್ರೆ ಸಲುವಾಗಿ ಕೇರಳದ ಅಟ್ಟಪ್ಪಾಡಿಗೆ ಬಂದಿರುವ ರಾಜಗೋಪಾಲ್ ಅವರು ತಮ್ಮ ನಿರ್ಧಾರದ ಬಗ್ಗೆ ಕೋರ್ ಸಮಿತಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ.<br /> <br /> ನಾನು ಸದಸ್ಯತ್ವವನ್ನೇ ಕೋರಿಲ್ಲವಾದ್ದರಿಂದ ಪತ್ರ ಬರೆಯುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ರಾಜೇಂದ್ರ ಸಿಂಗ್ ವ್ಯಕ್ತ ಪಡಿಸಿದ್ದಾರೆ.<br /> <br /> ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತಗಣನೆ ನಡೆಯಬೇಕು ಎಂಬುದಾಗಿ ಹೇಳುವ ಮೂಲಕ ವಿವಾದ ಸೃಷ್ಟಿಸಿದ ಪ್ರಶಾಂತ ಭೂಷಣ್ ಅವರನ್ನು ತಂಡದಲ್ಲಿ ಮುಂದುವರಿಸಬೇಕೆ ಎಂಬ ಬಗ್ಗೆ ಕೋರ್ ಸಮಿತಿ ನಿರ್ಧರಿಸುತ್ತದೆ ಎಂಬುದಾಗಿ ಅಣ್ಣಾ ಹಜಾರೆ ಹೇಳುವುದರೊಂದಿಗೆ ಹೊಸ ಸಮಸ್ಯೆ ಶುರುವಾಗಿತ್ತು.<br /> <br /> ~ತಂಡದಲ್ಲಿ ಮುಂದುವರಿಯಲು ನನಗೆ ಇರುವ ತೊಂದರೆಗಳ ಬಗ್ಗೆ ತಿಳಿಸಿ ನಾನು ಪತ್ರ ಬರೆದಿದ್ದೇನೆ. ಅವರು (ತಂಡ) ಇಂತಹ ಯಾವುದೇ ನಿರ್ಧಾರ ಕೈಗೊಳ್ಳದಂತೆ ನನಗೆ ಹೇಳಿದ್ದಾರೆ. ನಾನು ಅಖಿಲ ಭಾರತ ಯಾತ್ರೆಯಲ್ಲಿ ಮಗ್ನನಾಗಿದ್ದೇನೆ~ ಎಂದು ರಾಜಗೋಪಾಲ್ ಅಟ್ಟಪ್ಪಾಡಿಯಿಂದ ಪಿಟಿಐಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>