<p><strong>ಶಿವಮೊಗ್ಗ: </strong>ಮನುಷ್ಯನ ಅತಿ ಆಸೆಗೆ ಅರಣ್ಯ ಸಂಪತ್ತು ಬಲಿಯಾಗುತ್ತಿದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕರ ಮೇಲಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ.ಶೆಟ್ಟರ್ ಹೇಳಿದರು.<br /> <br /> ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ಅರಣ್ಯ ಇಲಾಖೆ ಸಂಯುಕ್ತವಾಗಿ ಸ್ವಾಮಿ ವಿವೇಕಾನಂದ ಬಡಾವಣೆಯ ನ್ಯಾಯಾಧೀಶರ ವಸತಿ ಸಮುಚ್ಛಯದ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಹೆಚ್ಚು ಹೆಚ್ಚು ಸಸಿಗಳನ್ನು ಜನರು ನೆಡುವುದರ ಮೂಲಕ ಅದರ ಲಾಲನೆ-ಪಾಲನೆ ಮಾಡಬೇಕು. ನೆಟ್ಟ ಸಸಿಗಳನ್ನು ಮಗುವಿನಂತೆ ಪ್ರತಿಯೊಬ್ಬರು ಕಾಪಾಡಬೇಕು ಎಂದರು.<br /> <br /> ಶಿವಮೊಗ್ಗ ವಿಭಾಗದ ಉಪವಲಯ ಅರಣ್ಯಾಧಿಕಾರಿ ಕೆ.ವಿ.ಮಲ್ಲಿಕಾರ್ಜುನ್ ಮಾತನಾಡಿ, ಮರ ಗಿಡಗಳನ್ನು ಬೆಳೆಸಿ, ರಕ್ಷಿಸುವುದು ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಅದರ ಪೋಷಣೆಗೆ ಪ್ರತಿಯೊಬ್ಬರು ಮುಂದೆ ಬರಬೇಕು ಎಂದರು.<br /> <br /> ಪರಿಸರದ ಸಮತೋಲನ ಗಿಡ, ಮರಗಳಿಂದ ಸಾಧ್ಯ. ಮನುಷ್ಯ ಪ್ರಕೃತಿಯ ಕೂಸು. ಪರಿಸರದ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಎ.ಸಿ.ಎಫ್. ಅಬ್ದುಲ್ ರವೂಫ್ ಮಾತನಾಡಿದರು.<br /> <br /> ನ್ಯಾಯಾಧೀಶರಾದ ಸಾವಿತ್ರಿ ಎಸ್. ವಿನಾಯಕ್, ಎಚ್.ಎಂ. ನಂಜುಂಡಸ್ವಾಮಿ, ಜಿ.ಜಿ.ಕುರುವಟ್ಟಿ, ಸಿ.ರಾಜಶೇಖರ್, ಕೆ.ಸುಬ್ರಮಣ್ಯ, ಇಂದಿರಾ ಮೈಲ್ಸ್ವಾಮಿ ಚಟ್ಟಿಯಾರ್, ವಾಣಿ ಎ. ಶೆಟ್ಟಿ, ಬಿ.ವಿಜಯಕುಮಾರ್ ರಾಯ್, ಪೂರ್ಣಿಮಾ ಎನ್. ಪೈ, ಎ.ಅರುಣ್ ಕುಮಾರಿ, ಜಿ.ಎಸ್.ಗುರುರಾಜ್ ಉಪಸ್ಥಿತರಿದ್ದರು.<br /> <br /> ಉಪ ವಲಯ ಅರಣ್ಯಾಧಿಕಾರಿ ಹಾಲೇಶ್ನಾಯ್ಕ ಪ್ರಾರ್ಥಿಸಿದರು. ಶಂಕರ ವಲಯದ ಅರಣ್ಯಾಧಿಕಾರಿ ಆರ್.ಎನ್.ಗೊಂಡಾ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಮನುಷ್ಯನ ಅತಿ ಆಸೆಗೆ ಅರಣ್ಯ ಸಂಪತ್ತು ಬಲಿಯಾಗುತ್ತಿದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕರ ಮೇಲಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ.ಶೆಟ್ಟರ್ ಹೇಳಿದರು.<br /> <br /> ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ಅರಣ್ಯ ಇಲಾಖೆ ಸಂಯುಕ್ತವಾಗಿ ಸ್ವಾಮಿ ವಿವೇಕಾನಂದ ಬಡಾವಣೆಯ ನ್ಯಾಯಾಧೀಶರ ವಸತಿ ಸಮುಚ್ಛಯದ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಹೆಚ್ಚು ಹೆಚ್ಚು ಸಸಿಗಳನ್ನು ಜನರು ನೆಡುವುದರ ಮೂಲಕ ಅದರ ಲಾಲನೆ-ಪಾಲನೆ ಮಾಡಬೇಕು. ನೆಟ್ಟ ಸಸಿಗಳನ್ನು ಮಗುವಿನಂತೆ ಪ್ರತಿಯೊಬ್ಬರು ಕಾಪಾಡಬೇಕು ಎಂದರು.<br /> <br /> ಶಿವಮೊಗ್ಗ ವಿಭಾಗದ ಉಪವಲಯ ಅರಣ್ಯಾಧಿಕಾರಿ ಕೆ.ವಿ.ಮಲ್ಲಿಕಾರ್ಜುನ್ ಮಾತನಾಡಿ, ಮರ ಗಿಡಗಳನ್ನು ಬೆಳೆಸಿ, ರಕ್ಷಿಸುವುದು ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಅದರ ಪೋಷಣೆಗೆ ಪ್ರತಿಯೊಬ್ಬರು ಮುಂದೆ ಬರಬೇಕು ಎಂದರು.<br /> <br /> ಪರಿಸರದ ಸಮತೋಲನ ಗಿಡ, ಮರಗಳಿಂದ ಸಾಧ್ಯ. ಮನುಷ್ಯ ಪ್ರಕೃತಿಯ ಕೂಸು. ಪರಿಸರದ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಎ.ಸಿ.ಎಫ್. ಅಬ್ದುಲ್ ರವೂಫ್ ಮಾತನಾಡಿದರು.<br /> <br /> ನ್ಯಾಯಾಧೀಶರಾದ ಸಾವಿತ್ರಿ ಎಸ್. ವಿನಾಯಕ್, ಎಚ್.ಎಂ. ನಂಜುಂಡಸ್ವಾಮಿ, ಜಿ.ಜಿ.ಕುರುವಟ್ಟಿ, ಸಿ.ರಾಜಶೇಖರ್, ಕೆ.ಸುಬ್ರಮಣ್ಯ, ಇಂದಿರಾ ಮೈಲ್ಸ್ವಾಮಿ ಚಟ್ಟಿಯಾರ್, ವಾಣಿ ಎ. ಶೆಟ್ಟಿ, ಬಿ.ವಿಜಯಕುಮಾರ್ ರಾಯ್, ಪೂರ್ಣಿಮಾ ಎನ್. ಪೈ, ಎ.ಅರುಣ್ ಕುಮಾರಿ, ಜಿ.ಎಸ್.ಗುರುರಾಜ್ ಉಪಸ್ಥಿತರಿದ್ದರು.<br /> <br /> ಉಪ ವಲಯ ಅರಣ್ಯಾಧಿಕಾರಿ ಹಾಲೇಶ್ನಾಯ್ಕ ಪ್ರಾರ್ಥಿಸಿದರು. ಶಂಕರ ವಲಯದ ಅರಣ್ಯಾಧಿಕಾರಿ ಆರ್.ಎನ್.ಗೊಂಡಾ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>