<p><strong>ಹುಬ್ಬಳ್ಳಿ:</strong> `ಅನ್ನ ಹಾಗೂ ಜ್ಞಾನದಾನಕ್ಕಿಂತ ಮತ್ತೊಂದು ದಾಸೋಹ ಇಲ್ಲ. ಬದುಕಿನ ಸಾರ್ಥಕತೆ ಇರುವುದೇ ಈ ಎರಡು ಅಂಶಗಳ ಮೇಲೆ~ ಎಂದು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.<br /> ಭಾನುವಾರ ನಡೆದ ನವನಗರದ ರೋಟರಿ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.<br /> <br /> `ಮನುಷ್ಯ ನಡೆಯುವಾಗ ಎಡವುವುದು ಸಹಜ. ಹಿನ್ನಡೆ ಆದಾಗ ನಿರಾಸೆ ಅನುಭವಿಸಬಾರದು. ಗುರಿ ಮುಟ್ಟುವವರೆಗೆ ಸಾಗಬೇಕು. ನೂರು ಸಲ ವಿಫಲವಾದರೂ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂಬ ಭಾವನೆ ಇಟ್ಟುಕೊಳ್ಳಬೇಕು~ ಎಂದು ನುಡಿದರು.<br /> <br /> `ಹಣ, ಪದವಿ, ಪ್ರಶಸ್ತಿಗಳಿಂದ ಮನುಷ್ಯ ದೊಡ್ಡವ ನಾಗಲು ಸಾಧ್ಯವಿಲ್ಲ. ಆತನಲ್ಲಿ ಹೃದಯವಂತಿಕೆ ಇರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಇರಬೇಕು. ಅಂಥ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಹೃದಯವಂತಿಕೆ ಇಲ್ಲದ ವ್ಯಕ್ತಿ ಎಂಥ ಉನ್ನತ ಹುದ್ದೆಗೆ ಏರಿದರೂ ಪ್ರಯೋಜನವಿಲ್ಲ~ ಎಂದರು.<br /> <br /> `ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯವಲ್ಲ. ನಮ್ಮ ದೇಶದಲ್ಲಾಗಲಿ, ಪರದೇಶದಲ್ಲಾಗಲಿ ಉದ್ಯೋಗ ಅರಸಿ ಹೋದರೆ ಅಲ್ಲಿನವರು ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಬೇಕು. ಆಗ ದೇಶ ಹಾಗೂ ಶಿಕ್ಷಣ ನೀಡಿದ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ~ ಎಂದರು. ಅತಿಥಿಯಾಗಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ ದರು.<br /> <br /> ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಮಾಜಿ ಮೇಯರ್ ಅಜ್ಜಪ್ಪಾ ಹೊರಕೇರಿ, ರೋಟರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿ.ಜಿ.ಪೊನ್ಮಪ್ಪ, ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಟಿ.ಪಾಟೀಲ, ಕಾರ್ಯದರ್ಶಿ ಎಂ.ಎಫ್.ಮನಗುಂಡಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಗಿರೀಶ್ ಬೊಮ್ಮನಗೌಡರ, ಎಸ್.ವಿ.ಶಿರಗುಪ್ಪಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> `ಅನ್ನ ಹಾಗೂ ಜ್ಞಾನದಾನಕ್ಕಿಂತ ಮತ್ತೊಂದು ದಾಸೋಹ ಇಲ್ಲ. ಬದುಕಿನ ಸಾರ್ಥಕತೆ ಇರುವುದೇ ಈ ಎರಡು ಅಂಶಗಳ ಮೇಲೆ~ ಎಂದು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.<br /> ಭಾನುವಾರ ನಡೆದ ನವನಗರದ ರೋಟರಿ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.<br /> <br /> `ಮನುಷ್ಯ ನಡೆಯುವಾಗ ಎಡವುವುದು ಸಹಜ. ಹಿನ್ನಡೆ ಆದಾಗ ನಿರಾಸೆ ಅನುಭವಿಸಬಾರದು. ಗುರಿ ಮುಟ್ಟುವವರೆಗೆ ಸಾಗಬೇಕು. ನೂರು ಸಲ ವಿಫಲವಾದರೂ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂಬ ಭಾವನೆ ಇಟ್ಟುಕೊಳ್ಳಬೇಕು~ ಎಂದು ನುಡಿದರು.<br /> <br /> `ಹಣ, ಪದವಿ, ಪ್ರಶಸ್ತಿಗಳಿಂದ ಮನುಷ್ಯ ದೊಡ್ಡವ ನಾಗಲು ಸಾಧ್ಯವಿಲ್ಲ. ಆತನಲ್ಲಿ ಹೃದಯವಂತಿಕೆ ಇರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಇರಬೇಕು. ಅಂಥ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಹೃದಯವಂತಿಕೆ ಇಲ್ಲದ ವ್ಯಕ್ತಿ ಎಂಥ ಉನ್ನತ ಹುದ್ದೆಗೆ ಏರಿದರೂ ಪ್ರಯೋಜನವಿಲ್ಲ~ ಎಂದರು.<br /> <br /> `ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯವಲ್ಲ. ನಮ್ಮ ದೇಶದಲ್ಲಾಗಲಿ, ಪರದೇಶದಲ್ಲಾಗಲಿ ಉದ್ಯೋಗ ಅರಸಿ ಹೋದರೆ ಅಲ್ಲಿನವರು ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಬೇಕು. ಆಗ ದೇಶ ಹಾಗೂ ಶಿಕ್ಷಣ ನೀಡಿದ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ~ ಎಂದರು. ಅತಿಥಿಯಾಗಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ ದರು.<br /> <br /> ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಮಾಜಿ ಮೇಯರ್ ಅಜ್ಜಪ್ಪಾ ಹೊರಕೇರಿ, ರೋಟರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿ.ಜಿ.ಪೊನ್ಮಪ್ಪ, ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಟಿ.ಪಾಟೀಲ, ಕಾರ್ಯದರ್ಶಿ ಎಂ.ಎಫ್.ಮನಗುಂಡಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಗಿರೀಶ್ ಬೊಮ್ಮನಗೌಡರ, ಎಸ್.ವಿ.ಶಿರಗುಪ್ಪಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>