<p>ಮೂಡಿಗೆರೆ: `ರಾಜ್ಯದ ಅಭಿವೃದ್ಧಿಯಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಮಹತ್ತರವಾಗಿದೆ. ಆದರೆ ಈ ಸಮುದಾಯ ಮಾತ್ರ ಅತ್ಯಂತ ಹಿಂದುಳಿದಿದೆ~ ಎಂದು ತಾಲ್ಲೂಕು ವಿಶ್ವಕರ್ಮ ಸಂಘಟನೆಯ ಅಧ್ಯಕ್ಷ ಘಟ್ಟದಹಳ್ಳಿ ಜಿ.ಡಿ. ಮಂಜುನಾಥ್ ಆಚಾರ್ ಹೇಳಿದರು.<br /> <br /> ಮೈಸೂರಿನಲ್ಲಿ ಇದೇ 8 ರಿಂದ 18 ರವರೆಗೆ ನಡೆಯಲಿರುವ ವಿಶ್ವಕರ್ಮ ಜನಾಂಗದ ರಾಜ್ಯ ಮಟ್ಟದ ಸಮಾವೇಶಕ್ಕೆ ಬೆಂಬಲ ಕೋರಿ ಶುಕ್ರವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ವಿಶ್ವಕರ್ಮರು ಇಂದಿಗೂ ಮರದ ಕೆಲಸ, ಕಮ್ಮಾರಿಕೆ, ಚಿನ್ನದ ಕೆಲಸಗಳಂತಹ ಗುಡಿ ಕೈಗಾರಿಕೆಗಳನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಂದು ಆಧುನಿಕತೆಯ ಭರದಲ್ಲಿ ಗುಡಿಕೈಗಾರಿಕೆಗಳು ನಶಿಸುತ್ತಿದ್ದು, ಸರ್ಕಾರ ಮರದ ಕೆತ್ತನೆ, ಕಮ್ಮಾರಿಕೆ ಗಳಿಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. <br /> <br /> ವಿಶ್ವಕರ್ಮ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ್ ಆಚಾರ್ ಮಾತನಾಡಿ ವಿಶ್ವಕರ್ಮ ಜನಾಂಗವು ಹಿಂದುಳಿದ ವರ್ಗದ 2 ಎ ಗುಂಪಿನಲ್ಲಿದ್ದು, ಈ ಗುಂಪಿಗೆ ನೀಡುವ ಮೀಸಲಾತಿಗಳೆಲ್ಲವನ್ನೂ ಗುಂಪಿನಲ್ಲಿರುವ ಬಲಿಷ್ಠ ಜನಾಂಗಗಳು ಉಪಯೋಗಿಸಿಕೊಳ್ಳುತ್ತಿವೆ. 2 ಎ ಗೆ ನೀಡುವ ಶೇಕಡ 15 ರ ಮೀಸಲಾತಿಯಲ್ಲಿ ಶೇ. 3 ರಷ್ಟನ್ನು ವಿಶ್ವಕರ್ಮ ಜನಾಂಗಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.<br /> <br /> ಸಂಘಟನೆಯ ಗೌರವ ಅಧ್ಯಕ್ಷ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಗಣಪತಿ ಆಚಾರ್ ಮಾತನಾಡಿ, ಜನಾಂಗದ ವಿದ್ಯಾಭ್ಯಾಸಕ್ಕೆ ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸಿ ವಿಶ್ವಕರ್ಮ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದರು.<br /> <br /> ಪ್ರತಿಭಟನೆಯ ನಂತರ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ವಿಠಲಾಚಾರ್, ಪರಮೇಶ್ ಆಚಾರ್, ರಮೇಶ್ ಆಚಾರ್, ಸುಬ್ರಮಣ್ಯಾಚಾರ್, ಶ್ರೀನಿವಾಸಾಚಾರ್, ಮಂಜುನಾಥ್ ಆಚಾರ್, ಚಂದ್ರಾಚಾರ್ ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡಿಗೆರೆ: `ರಾಜ್ಯದ ಅಭಿವೃದ್ಧಿಯಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಮಹತ್ತರವಾಗಿದೆ. ಆದರೆ ಈ ಸಮುದಾಯ ಮಾತ್ರ ಅತ್ಯಂತ ಹಿಂದುಳಿದಿದೆ~ ಎಂದು ತಾಲ್ಲೂಕು ವಿಶ್ವಕರ್ಮ ಸಂಘಟನೆಯ ಅಧ್ಯಕ್ಷ ಘಟ್ಟದಹಳ್ಳಿ ಜಿ.ಡಿ. ಮಂಜುನಾಥ್ ಆಚಾರ್ ಹೇಳಿದರು.<br /> <br /> ಮೈಸೂರಿನಲ್ಲಿ ಇದೇ 8 ರಿಂದ 18 ರವರೆಗೆ ನಡೆಯಲಿರುವ ವಿಶ್ವಕರ್ಮ ಜನಾಂಗದ ರಾಜ್ಯ ಮಟ್ಟದ ಸಮಾವೇಶಕ್ಕೆ ಬೆಂಬಲ ಕೋರಿ ಶುಕ್ರವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ವಿಶ್ವಕರ್ಮರು ಇಂದಿಗೂ ಮರದ ಕೆಲಸ, ಕಮ್ಮಾರಿಕೆ, ಚಿನ್ನದ ಕೆಲಸಗಳಂತಹ ಗುಡಿ ಕೈಗಾರಿಕೆಗಳನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ. ಆದರೆ ಇಂದು ಆಧುನಿಕತೆಯ ಭರದಲ್ಲಿ ಗುಡಿಕೈಗಾರಿಕೆಗಳು ನಶಿಸುತ್ತಿದ್ದು, ಸರ್ಕಾರ ಮರದ ಕೆತ್ತನೆ, ಕಮ್ಮಾರಿಕೆ ಗಳಿಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. <br /> <br /> ವಿಶ್ವಕರ್ಮ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಮಂಜುನಾಥ್ ಆಚಾರ್ ಮಾತನಾಡಿ ವಿಶ್ವಕರ್ಮ ಜನಾಂಗವು ಹಿಂದುಳಿದ ವರ್ಗದ 2 ಎ ಗುಂಪಿನಲ್ಲಿದ್ದು, ಈ ಗುಂಪಿಗೆ ನೀಡುವ ಮೀಸಲಾತಿಗಳೆಲ್ಲವನ್ನೂ ಗುಂಪಿನಲ್ಲಿರುವ ಬಲಿಷ್ಠ ಜನಾಂಗಗಳು ಉಪಯೋಗಿಸಿಕೊಳ್ಳುತ್ತಿವೆ. 2 ಎ ಗೆ ನೀಡುವ ಶೇಕಡ 15 ರ ಮೀಸಲಾತಿಯಲ್ಲಿ ಶೇ. 3 ರಷ್ಟನ್ನು ವಿಶ್ವಕರ್ಮ ಜನಾಂಗಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.<br /> <br /> ಸಂಘಟನೆಯ ಗೌರವ ಅಧ್ಯಕ್ಷ ಹಾಗೂ ನಿವೃತ್ತ ಉಪ ತಹಶೀಲ್ದಾರ್ ಗಣಪತಿ ಆಚಾರ್ ಮಾತನಾಡಿ, ಜನಾಂಗದ ವಿದ್ಯಾಭ್ಯಾಸಕ್ಕೆ ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸಿ ವಿಶ್ವಕರ್ಮ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದರು.<br /> <br /> ಪ್ರತಿಭಟನೆಯ ನಂತರ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ವಿಠಲಾಚಾರ್, ಪರಮೇಶ್ ಆಚಾರ್, ರಮೇಶ್ ಆಚಾರ್, ಸುಬ್ರಮಣ್ಯಾಚಾರ್, ಶ್ರೀನಿವಾಸಾಚಾರ್, ಮಂಜುನಾಥ್ ಆಚಾರ್, ಚಂದ್ರಾಚಾರ್ ಇದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>