<p><strong>ಬಸವಕಲ್ಯಾಣ: </strong>ತಾಲ್ಲೂಕಿನ ರೋಳಾ ಹತ್ತಿರದಲ್ಲಿ ಮುಲ್ಲಾಮಾರಿ ನಾಲೆಗೆ ಕಟ್ಟಲಾದ ಬ್ಯಾರೇಜ್ ಪ್ರದೇಶದಲ್ಲಿ ನಾಲಾ ಅಭಿವೃದ್ಧಿ ಮಾಡದ ಕಾರಣ ಅಧಿಕ ನೀರು ಸಂಗ್ರಹಗೊಳ್ಳುತ್ತಿಲ್ಲ.<br /> <br /> ಸಮೀಪದ ನಿರ್ಗುಡಿ ರಸ್ತೆಯಲ್ಲಿ ಜಲಸಂಪನ್ಮೂಲ ಇಲಾಖೆಯಿಂದ 1.30 ಕೋಟಿ ರೂಪಾಯಿ ಖರ್ಚು ಮಾಡಿ ಸೇತುವೆ ಮತ್ತು ಬ್ಯಾರೇಜ್ ನಿರ್ಮಿಸಲಾಗಿದೆ. ಇದರ ಉದ್ದ 39 ಮೀಟರ್ ಮತ್ತು ಎತ್ತರ 3 ಮೀಟರ್ ಇದೆ. ಎರಡು ವರ್ಷಗಳ ಹಿಂದೆ ಕಟ್ಟಿದ ಈ ಬ್ಯಾರೇಜ್ ನಲ್ಲಿ ಈ ಸಲ ನೀರು ಸಂಗ್ರಹಗೊಂಡಿದ್ದು, ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯ ಇಲ್ಲದ ಕಾರಣ ನಿರಂತರವಾಗಿ ನೀರು ಹರಿದು ಹೋಗುತ್ತಿದೆ.<br /> <br /> ಮುಲ್ಲಾಮಾರಿ ಈ ಭಾಗದಲ್ಲಿನ ದೊಡ್ಡ ನಾಲೆಯಾಗಿದ್ದು, ಮಳೆಗಾಲದಲ್ಲಿ ಇದರಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಇದಕ್ಕೆ ಬ್ಯಾರೇಜ್ ನಿರ್ಮಿಸಿದ ಕಾರಣ ಬಾವಿಗಳ ಜಲಮಟ್ಟ ಏರಿದೆ.<br /> <br /> ಆದರೆ ನಾಲೆ ಇಕ್ಕಟ್ಟಾಗಿರುವ ಕಾರಣ ಹೆಚ್ಚಿನ ನೀರು ಸಂಗ್ರಹ ಆಗುತ್ತಿಲ್ಲ. ಸೇತುವೆಯ ಮೇಲಿನಿಂದ ನೀರು ಹರಿಯುತ್ತಿದ್ದು, ರಸ್ತೆ ದಾಟಲು ತೊಂದರೆಯಾಗುತ್ತಿದೆ. ಅಲ್ಲದೆ ಪಕ್ಕದ ಹೊಲಗಳಿಗೂ ನೀರು ನುಗ್ಗುತ್ತಿದೆ. ಹೀಗಾಗಿ ಬ್ಯಾರೇಜ್ನ ಬಾಗಿಲುಗಳನ್ನು ತೆರೆದು ನೀರು ಹೊರ ಬಿಡಬೇಕಾದ ಪರಿಸ್ಥಿತಿ ಇದೆ.<br /> <br /> ನೀರು ಹರಿದು ಬರುವ ಕಡೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ನಾಲೆಯಲ್ಲಿನ ಜಾಲಿ ಗಿಡಗಳನ್ನು ಕಡಿಯಬೇಕು. ನಾಲೆಯನ್ನು ಅಗಲ ಮಾಡುವುದಲ್ಲದೆ ಒಳಗಿನ ಹೂಳು ತೆಗೆಯಬೇಕು ಎಂದು ರೈತರಾದ ಬಂಡೆಪ್ಪ ಮತ್ತು ಅರ್ಜುನರಾವ ನಿರ್ಗುಡಿ ಒತ್ತಾಯಿಸಿದ್ದಾರೆ.<br /> <br /> ಹೂಳು ತುಂಬಿಕೊಂಡಿರುವ ಕಾರಣ ಅಧಿಕ ನೀರು ಸಂಗ್ರಹಗೊಳ್ಳುತ್ತದೆ. ಇದನ್ನು ತಡೆಯಲು ಸಮೀಪದ ಹೊಲಗಳಲ್ಲಿನ ಬೆಳೆಗಳಿಗೆ ಚಿಕ್ಕ ಕಾಲುವೆ ನಿರ್ಮಿಸಿ ನೀರು ಸಾಗಿಸಬೇಕು ಎಂದು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>ತಾಲ್ಲೂಕಿನ ರೋಳಾ ಹತ್ತಿರದಲ್ಲಿ ಮುಲ್ಲಾಮಾರಿ ನಾಲೆಗೆ ಕಟ್ಟಲಾದ ಬ್ಯಾರೇಜ್ ಪ್ರದೇಶದಲ್ಲಿ ನಾಲಾ ಅಭಿವೃದ್ಧಿ ಮಾಡದ ಕಾರಣ ಅಧಿಕ ನೀರು ಸಂಗ್ರಹಗೊಳ್ಳುತ್ತಿಲ್ಲ.<br /> <br /> ಸಮೀಪದ ನಿರ್ಗುಡಿ ರಸ್ತೆಯಲ್ಲಿ ಜಲಸಂಪನ್ಮೂಲ ಇಲಾಖೆಯಿಂದ 1.30 ಕೋಟಿ ರೂಪಾಯಿ ಖರ್ಚು ಮಾಡಿ ಸೇತುವೆ ಮತ್ತು ಬ್ಯಾರೇಜ್ ನಿರ್ಮಿಸಲಾಗಿದೆ. ಇದರ ಉದ್ದ 39 ಮೀಟರ್ ಮತ್ತು ಎತ್ತರ 3 ಮೀಟರ್ ಇದೆ. ಎರಡು ವರ್ಷಗಳ ಹಿಂದೆ ಕಟ್ಟಿದ ಈ ಬ್ಯಾರೇಜ್ ನಲ್ಲಿ ಈ ಸಲ ನೀರು ಸಂಗ್ರಹಗೊಂಡಿದ್ದು, ಹೆಚ್ಚಿನ ಸಂಗ್ರಹಣಾ ಸಾಮರ್ಥ್ಯ ಇಲ್ಲದ ಕಾರಣ ನಿರಂತರವಾಗಿ ನೀರು ಹರಿದು ಹೋಗುತ್ತಿದೆ.<br /> <br /> ಮುಲ್ಲಾಮಾರಿ ಈ ಭಾಗದಲ್ಲಿನ ದೊಡ್ಡ ನಾಲೆಯಾಗಿದ್ದು, ಮಳೆಗಾಲದಲ್ಲಿ ಇದರಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಇದಕ್ಕೆ ಬ್ಯಾರೇಜ್ ನಿರ್ಮಿಸಿದ ಕಾರಣ ಬಾವಿಗಳ ಜಲಮಟ್ಟ ಏರಿದೆ.<br /> <br /> ಆದರೆ ನಾಲೆ ಇಕ್ಕಟ್ಟಾಗಿರುವ ಕಾರಣ ಹೆಚ್ಚಿನ ನೀರು ಸಂಗ್ರಹ ಆಗುತ್ತಿಲ್ಲ. ಸೇತುವೆಯ ಮೇಲಿನಿಂದ ನೀರು ಹರಿಯುತ್ತಿದ್ದು, ರಸ್ತೆ ದಾಟಲು ತೊಂದರೆಯಾಗುತ್ತಿದೆ. ಅಲ್ಲದೆ ಪಕ್ಕದ ಹೊಲಗಳಿಗೂ ನೀರು ನುಗ್ಗುತ್ತಿದೆ. ಹೀಗಾಗಿ ಬ್ಯಾರೇಜ್ನ ಬಾಗಿಲುಗಳನ್ನು ತೆರೆದು ನೀರು ಹೊರ ಬಿಡಬೇಕಾದ ಪರಿಸ್ಥಿತಿ ಇದೆ.<br /> <br /> ನೀರು ಹರಿದು ಬರುವ ಕಡೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ನಾಲೆಯಲ್ಲಿನ ಜಾಲಿ ಗಿಡಗಳನ್ನು ಕಡಿಯಬೇಕು. ನಾಲೆಯನ್ನು ಅಗಲ ಮಾಡುವುದಲ್ಲದೆ ಒಳಗಿನ ಹೂಳು ತೆಗೆಯಬೇಕು ಎಂದು ರೈತರಾದ ಬಂಡೆಪ್ಪ ಮತ್ತು ಅರ್ಜುನರಾವ ನಿರ್ಗುಡಿ ಒತ್ತಾಯಿಸಿದ್ದಾರೆ.<br /> <br /> ಹೂಳು ತುಂಬಿಕೊಂಡಿರುವ ಕಾರಣ ಅಧಿಕ ನೀರು ಸಂಗ್ರಹಗೊಳ್ಳುತ್ತದೆ. ಇದನ್ನು ತಡೆಯಲು ಸಮೀಪದ ಹೊಲಗಳಲ್ಲಿನ ಬೆಳೆಗಳಿಗೆ ಚಿಕ್ಕ ಕಾಲುವೆ ನಿರ್ಮಿಸಿ ನೀರು ಸಾಗಿಸಬೇಕು ಎಂದು ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>