<p><strong>ಬೆಂಗಳೂರು (ಪಿಟಿಐ): </strong>ಕ್ಯಾನ್ಸರ್ನಿಂದ ಚೇತರಿಸಿಕೊಂಡಿರುವ ಯುವರಾಜ್ ಸಿಂಗ್ ಹಲವು ತಿಂಗಳ ಬಿಡುವಿನ ಬಳಿಕ ಕಣಕ್ಕಿಳಿದಿದ್ದು, ಮೊದಲ ಪಂದ್ಯದಲ್ಲೇ 47 ರನ್ ಗಳಿಸಿದರು.<br /> <br /> ಇಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಭಾರತ 19 ವರ್ಷ ವಯಸ್ಸಿನೊಳಗಿನ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೆಎಸ್ಸಿಎ ಇಲೆವೆನ್ ತಂಡವನ್ನು ಪ್ರತಿನಿಧಿಸಿದರು. `ಯುವಿ~ 70 ಎಸೆತಗಳಲ್ಲಿ 47 ರನ್ ಗಳಿಸಿದರು. ಕೆಲವು ಬೌಂಡರಿಗಳ ಜೊತೆ ಒಂದು ಸಿಕ್ಸರ್ ಈ ಇನಿಂಗ್ಸ್ ಒಳಗೊಂಡಿತ್ತು.<br /> <br /> ನಗರದ ಹೊರವಲಯದ ಮಹದೇವಪುರದಲ್ಲಿ ಈ ಪಂದ್ಯ ನಡೆಯಿತು. ಐದು ಓವರ್ ಬೌಲ್ ಮಾಡಿದ ಯುವರಾಜ್ 30 ಓವರ್ಗಳವರೆಗೆ ಫೀಲ್ಡಿಂಗ್ ಕೂಡಾ ನಡೆಸಿದರು. `ಎಂಟು ತಿಂಗಳ ಬಿಡುವಿನ ಬಳಿಕ ಮೊದಲ ಪಂದ್ಯವನ್ನಾಡಿದೆ. 70 ಎಸೆತಗಳಲ್ಲಿ 47 ರನ್ ಗಳಿಸಿದೆ. 30 ಓವರ್ಗಳವರೆಗೆ ಕ್ಷೇತ್ರರಕ್ಷಣೆ ಮಾಡಿದೆ. ಕೆಟ್ಟ ಆರಂಭ ಅಲ್ಲ!!~ ಎಂದು ಯುವರಾಜ್ `ಟ್ವಿಟರ್~ನಲ್ಲಿ ಬರೆದಿದ್ದಾರೆ. <br /> <br /> ಯುವರಾಜ್ ಸಿಂಗ್ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಿರುವ ಭಾರತ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು (ಪಿಟಿಐ): </strong>ಕ್ಯಾನ್ಸರ್ನಿಂದ ಚೇತರಿಸಿಕೊಂಡಿರುವ ಯುವರಾಜ್ ಸಿಂಗ್ ಹಲವು ತಿಂಗಳ ಬಿಡುವಿನ ಬಳಿಕ ಕಣಕ್ಕಿಳಿದಿದ್ದು, ಮೊದಲ ಪಂದ್ಯದಲ್ಲೇ 47 ರನ್ ಗಳಿಸಿದರು.<br /> <br /> ಇಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ಭಾರತ 19 ವರ್ಷ ವಯಸ್ಸಿನೊಳಗಿನ ತಂಡದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೆಎಸ್ಸಿಎ ಇಲೆವೆನ್ ತಂಡವನ್ನು ಪ್ರತಿನಿಧಿಸಿದರು. `ಯುವಿ~ 70 ಎಸೆತಗಳಲ್ಲಿ 47 ರನ್ ಗಳಿಸಿದರು. ಕೆಲವು ಬೌಂಡರಿಗಳ ಜೊತೆ ಒಂದು ಸಿಕ್ಸರ್ ಈ ಇನಿಂಗ್ಸ್ ಒಳಗೊಂಡಿತ್ತು.<br /> <br /> ನಗರದ ಹೊರವಲಯದ ಮಹದೇವಪುರದಲ್ಲಿ ಈ ಪಂದ್ಯ ನಡೆಯಿತು. ಐದು ಓವರ್ ಬೌಲ್ ಮಾಡಿದ ಯುವರಾಜ್ 30 ಓವರ್ಗಳವರೆಗೆ ಫೀಲ್ಡಿಂಗ್ ಕೂಡಾ ನಡೆಸಿದರು. `ಎಂಟು ತಿಂಗಳ ಬಿಡುವಿನ ಬಳಿಕ ಮೊದಲ ಪಂದ್ಯವನ್ನಾಡಿದೆ. 70 ಎಸೆತಗಳಲ್ಲಿ 47 ರನ್ ಗಳಿಸಿದೆ. 30 ಓವರ್ಗಳವರೆಗೆ ಕ್ಷೇತ್ರರಕ್ಷಣೆ ಮಾಡಿದೆ. ಕೆಟ್ಟ ಆರಂಭ ಅಲ್ಲ!!~ ಎಂದು ಯುವರಾಜ್ `ಟ್ವಿಟರ್~ನಲ್ಲಿ ಬರೆದಿದ್ದಾರೆ. <br /> <br /> ಯುವರಾಜ್ ಸಿಂಗ್ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಪ್ರಕಟಿಸಿರುವ ಭಾರತ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>