<p>ನವದೆಹಲಿ (ಐಎಎನ್ಎಸ್): ಅಮೆರಿಕದ ವಿಸ್ಕಾನ್ಸಿನ್ನ ಗುರುದ್ವಾರದಲ್ಲಿ ನಡೆದ ದಾಳಿ ಪ್ರಕರಣವು ಗುರುವಾರ ಲೋಕಸಭೆಯಲ್ಲಿ ಅಕಾಲಿ ದಳ ಮತ್ತು ಕಾಂಗ್ರೆಸ್ ನಡುವೆ ಕಾವೇರಿದ ವಾಗ್ವಾದ ಎಬ್ಬಿಸಿ ಕಲಾಪ ಮುಂದೂಡಿಕೆಗೆ ಕಾರಣವಾಯಿತು.<br /> <br /> ಮೊದಲು, ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಈ ಕುರಿತು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.<br /> <br /> ಇಂತಹ ದಾಳಿ ಮರುಕಳಿಸದಂತೆ ಒತ್ತಡ ಹೇರುವ ಸಲುವಾಗಿ, ಪ್ರಧಾನಿ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವೊಂದನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಬೇಕೆಂದು ಕೌರ್ ಒತ್ತಾಯಿಸಿದರು. ಸದನದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಇದನ್ನು ಬೆಂಬಲಿಸಿದರು.<br /> <br /> ಸಂಸತ್ತಿನ ಕಲಾಪ ಸೋಮವಾರ ಪುನಃ ಆರಂಭವಾಗಲಿದ್ದು, ಅಂದು ಸರ್ಕಾರ ಈ ಸಂಬಂಧ ತಾನು ಕೈಗೊಂಡ ಕ್ರಮಗಳ ವಿವರವನ್ನು ಒದಗಿಸಬೇಕು ಎಂದು ಸುಷ್ಮಾ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ.ಬನ್ಸಲ್, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಇದರಿಂದ ಸಮಾಧಾನವಾಗದ ಅಕಾಲಿ ದಳ ಸದಸ್ಯರು ಕಲಾಪಕ್ಕೆ ತಡೆಯೊಡ್ಡುತ್ತಲೇ ಇದ್ದರು.<br /> <br /> ಈ ಹಂತದಲ್ಲಿ ನಾಯಕಿ ಸೋನಿಯಾ ಗಾಂಧಿ ಅವರ ಬೆಂಬಲದಿಂದ ಪ್ರೇರಿತರಾದ ಬನ್ಸಲ್, ಅಕಾಲಿ ದಳದ ಮೇಲೆ ಟೀಕಾಸ್ತ್ರ ಪ್ರಯೋಗಿಸಿ, `ಸಂತ್ರಸ್ತರ ಸಮಾಧಿಯ ಮೇಲೆ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು~ ಎಂದರು.<br /> <br /> ಅಕಾಲಿ ದಳ ಸದಸ್ಯರು ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವ ಬದಲು, ಈ ಬಗ್ಗೆ ಗಮನ ಸೆಳೆಯುವ ನಿರ್ಣಯವನ್ನು ಮಂಡಿಸಬೇಕಿತ್ತು. ಆಗ ಸರ್ಕಾರವು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುತ್ತಿತ್ತು ಎಂದೂ ಬನ್ಸಲ್ ಹೇಳಿದರು. `ಈ ಪ್ರಕರಣ ನಡೆದ ಬಗ್ಗೆ ನಮಗೂ ವಿಷಾದವಿದೆ. ಇದರಲ್ಲಿ ಏಕೆ ರಾಜಕೀಯ ಮಾಡುತ್ತೀರಿ. <br /> <br /> ಈ ವಿಷಯದಲ್ಲಿ ಪಂಜಾಬಿನಲ್ಲಿರುವ ನಿಮ್ಮ ಶಿರೋಮಣಿ ಅಕಾಲಿ ದಳ ಸರ್ಕಾರ ಏನು ಮಾಡಿದೆ~ ಎಂದು ಬನ್ಸಲ್ ಚುಚ್ಚಿದರು.<br /> <br /> ಅಕಾಲಿ ದಳ ಸದಸ್ಯರು ಸುಮ್ಮನಾಗದೆ ಗದ್ದಲ ಮುಂದುವರಿಸಿದ್ದರಿಂದ ಸ್ಪೀಕರ್ ಸ್ಥಾನದಲ್ಲಿದ್ದ ಎಂ.ತಂಬಿದೊರೈ ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ಅಮೆರಿಕದ ವಿಸ್ಕಾನ್ಸಿನ್ನ ಗುರುದ್ವಾರದಲ್ಲಿ ನಡೆದ ದಾಳಿ ಪ್ರಕರಣವು ಗುರುವಾರ ಲೋಕಸಭೆಯಲ್ಲಿ ಅಕಾಲಿ ದಳ ಮತ್ತು ಕಾಂಗ್ರೆಸ್ ನಡುವೆ ಕಾವೇರಿದ ವಾಗ್ವಾದ ಎಬ್ಬಿಸಿ ಕಲಾಪ ಮುಂದೂಡಿಕೆಗೆ ಕಾರಣವಾಯಿತು.<br /> <br /> ಮೊದಲು, ಅಕಾಲಿ ದಳದ ಸದಸ್ಯೆ ಹರ್ಸಿಮ್ರತ್ ಕೌರ್ ಈ ಕುರಿತು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ಆರೋಪಿಸಿದರು.<br /> <br /> ಇಂತಹ ದಾಳಿ ಮರುಕಳಿಸದಂತೆ ಒತ್ತಡ ಹೇರುವ ಸಲುವಾಗಿ, ಪ್ರಧಾನಿ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗವೊಂದನ್ನು ಅಮೆರಿಕಕ್ಕೆ ಕರೆದುಕೊಂಡು ಹೋಗಬೇಕೆಂದು ಕೌರ್ ಒತ್ತಾಯಿಸಿದರು. ಸದನದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಇದನ್ನು ಬೆಂಬಲಿಸಿದರು.<br /> <br /> ಸಂಸತ್ತಿನ ಕಲಾಪ ಸೋಮವಾರ ಪುನಃ ಆರಂಭವಾಗಲಿದ್ದು, ಅಂದು ಸರ್ಕಾರ ಈ ಸಂಬಂಧ ತಾನು ಕೈಗೊಂಡ ಕ್ರಮಗಳ ವಿವರವನ್ನು ಒದಗಿಸಬೇಕು ಎಂದು ಸುಷ್ಮಾ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ.ಬನ್ಸಲ್, ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಇದರಿಂದ ಸಮಾಧಾನವಾಗದ ಅಕಾಲಿ ದಳ ಸದಸ್ಯರು ಕಲಾಪಕ್ಕೆ ತಡೆಯೊಡ್ಡುತ್ತಲೇ ಇದ್ದರು.<br /> <br /> ಈ ಹಂತದಲ್ಲಿ ನಾಯಕಿ ಸೋನಿಯಾ ಗಾಂಧಿ ಅವರ ಬೆಂಬಲದಿಂದ ಪ್ರೇರಿತರಾದ ಬನ್ಸಲ್, ಅಕಾಲಿ ದಳದ ಮೇಲೆ ಟೀಕಾಸ್ತ್ರ ಪ್ರಯೋಗಿಸಿ, `ಸಂತ್ರಸ್ತರ ಸಮಾಧಿಯ ಮೇಲೆ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು~ ಎಂದರು.<br /> <br /> ಅಕಾಲಿ ದಳ ಸದಸ್ಯರು ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸುವ ಬದಲು, ಈ ಬಗ್ಗೆ ಗಮನ ಸೆಳೆಯುವ ನಿರ್ಣಯವನ್ನು ಮಂಡಿಸಬೇಕಿತ್ತು. ಆಗ ಸರ್ಕಾರವು ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗುತ್ತಿತ್ತು ಎಂದೂ ಬನ್ಸಲ್ ಹೇಳಿದರು. `ಈ ಪ್ರಕರಣ ನಡೆದ ಬಗ್ಗೆ ನಮಗೂ ವಿಷಾದವಿದೆ. ಇದರಲ್ಲಿ ಏಕೆ ರಾಜಕೀಯ ಮಾಡುತ್ತೀರಿ. <br /> <br /> ಈ ವಿಷಯದಲ್ಲಿ ಪಂಜಾಬಿನಲ್ಲಿರುವ ನಿಮ್ಮ ಶಿರೋಮಣಿ ಅಕಾಲಿ ದಳ ಸರ್ಕಾರ ಏನು ಮಾಡಿದೆ~ ಎಂದು ಬನ್ಸಲ್ ಚುಚ್ಚಿದರು.<br /> <br /> ಅಕಾಲಿ ದಳ ಸದಸ್ಯರು ಸುಮ್ಮನಾಗದೆ ಗದ್ದಲ ಮುಂದುವರಿಸಿದ್ದರಿಂದ ಸ್ಪೀಕರ್ ಸ್ಥಾನದಲ್ಲಿದ್ದ ಎಂ.ತಂಬಿದೊರೈ ಕಲಾಪವನ್ನು ಮಧ್ಯಾಹ್ನ 2ರವರೆಗೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>