<p>ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ಕಾಯ್ದಿಟ್ಟ ಅರಣ್ಯದ ಸಾವಿರಾರು ಹೆಕ್ಟೇರ್ ಜಮೀನು ಒತ್ತುವರಿ ಮಾಡಿಕೊಂಡು 7/8 ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸುತ್ತಿರುವ ಪ್ರಾದೇಶಿಕ ಅರಣ್ಯ ಇಲಾಖೆಯ ಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾದ ನರಸಿಮಲು ಪೂಜಾರಿ, ವಿಠಲ್ ಕಾರಭಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಒತ್ತುವರಿ ತೆರವು ಗೊಳಿಸಿದರೆ ಜೀವ ಕೊಡಲು ಸಿದ್ಧ ಎಂದರು.<br /> <br /> ಶುಕ್ರವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಭಯ ಸದಸ್ಯರು, ಅರಣ್ಯದಿಂದ ರೈತರನ್ನು ಹೊರ ದಬ್ಬಿದರೆ ಅವರಿಗೆ ಬೇರೆ ಕಡೆ ಭೂಮಿ ಕೊಡಬೇಕು. ಇಲ್ಲದೇ ಹೋದರೆ ನೂರಾರು ವರ್ಷಗಳಿಂದ ಇದೇ ಭೂಮಿ ಅವಲಂಭಿಸಿದ ಸಾವಿರಾರು ಕುಟುಂಬಗಳ ಗತಿ ಏನು ಎಂದು ಪ್ರಶ್ನಿಸಿದರು.<br /> <br /> ಆಗ ಕಾರ್ಯ ನಿರ್ವಹಣಾಧಿಕಾರಿ (ಇಒ) ಜಗದೇವ ಬೈಗೊಂಡ ಸದರಿ ವಿಷಯ ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿದರು.<br /> <br /> ಈಗಾಗಲೇ ನೂರಾರು ರೈತರಿಗೆ ಜಮೀನು ಖಾಲಿ ಮಾಡಲು ನೋಟಿಸ್ ನೀಡಿದ್ದಾರೆ. ಅರಣ್ಯ ಉಳಿಯಲು ನಾವು ಸಹಕರಿಸುತ್ತೇವೆ. ಆದರೆ ನಮಗೆ ಬೇರೆ ಕಡೆ ಜಮೀನು ಕೊಡಿಸಿ ಎಂದರು.<br /> <br /> ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಉದ್ದು ಹೆಸರು ಬೆಳೆ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ ಮಲ್ಲಿಕಾರ್ಜುನ ತಿಳಿಸಿದರು. <br /> <br /> ಪಸ್ತಪೂರ, ಮೋಘಾ, ರುಮ್ಮನಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಬೆಳೆ ಹಾನಿ ಉಂಟಾಗಿದೆ ಹಾಗೂ ಕ್ಷೇತ್ರದ ಉಳಿದ ಕಡೆಗಳಲ್ಲಿ ಉಂಟಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕೆಂದು ಅಧ್ಯಕ್ಷ ರಾಮರಾವ್ ಪಾಟೀಲ್ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಂಚೋಳಿ: ತಾಲ್ಲೂಕಿನ ಕೊಂಚಾವರಂ ಕಾಯ್ದಿಟ್ಟ ಅರಣ್ಯದ ಸಾವಿರಾರು ಹೆಕ್ಟೇರ್ ಜಮೀನು ಒತ್ತುವರಿ ಮಾಡಿಕೊಂಡು 7/8 ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರನ್ನು ತೆರವುಗೊಳಿಸುತ್ತಿರುವ ಪ್ರಾದೇಶಿಕ ಅರಣ್ಯ ಇಲಾಖೆಯ ಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾದ ನರಸಿಮಲು ಪೂಜಾರಿ, ವಿಠಲ್ ಕಾರಭಾರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಒತ್ತುವರಿ ತೆರವು ಗೊಳಿಸಿದರೆ ಜೀವ ಕೊಡಲು ಸಿದ್ಧ ಎಂದರು.<br /> <br /> ಶುಕ್ರವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಉಭಯ ಸದಸ್ಯರು, ಅರಣ್ಯದಿಂದ ರೈತರನ್ನು ಹೊರ ದಬ್ಬಿದರೆ ಅವರಿಗೆ ಬೇರೆ ಕಡೆ ಭೂಮಿ ಕೊಡಬೇಕು. ಇಲ್ಲದೇ ಹೋದರೆ ನೂರಾರು ವರ್ಷಗಳಿಂದ ಇದೇ ಭೂಮಿ ಅವಲಂಭಿಸಿದ ಸಾವಿರಾರು ಕುಟುಂಬಗಳ ಗತಿ ಏನು ಎಂದು ಪ್ರಶ್ನಿಸಿದರು.<br /> <br /> ಆಗ ಕಾರ್ಯ ನಿರ್ವಹಣಾಧಿಕಾರಿ (ಇಒ) ಜಗದೇವ ಬೈಗೊಂಡ ಸದರಿ ವಿಷಯ ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿದರು.<br /> <br /> ಈಗಾಗಲೇ ನೂರಾರು ರೈತರಿಗೆ ಜಮೀನು ಖಾಲಿ ಮಾಡಲು ನೋಟಿಸ್ ನೀಡಿದ್ದಾರೆ. ಅರಣ್ಯ ಉಳಿಯಲು ನಾವು ಸಹಕರಿಸುತ್ತೇವೆ. ಆದರೆ ನಮಗೆ ಬೇರೆ ಕಡೆ ಜಮೀನು ಕೊಡಿಸಿ ಎಂದರು.<br /> <br /> ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ತಾಲ್ಲೂಕಿನಲ್ಲಿ ಉದ್ದು ಹೆಸರು ಬೆಳೆ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ ಮಲ್ಲಿಕಾರ್ಜುನ ತಿಳಿಸಿದರು. <br /> <br /> ಪಸ್ತಪೂರ, ಮೋಘಾ, ರುಮ್ಮನಗೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಬೆಳೆ ಹಾನಿ ಉಂಟಾಗಿದೆ ಹಾಗೂ ಕ್ಷೇತ್ರದ ಉಳಿದ ಕಡೆಗಳಲ್ಲಿ ಉಂಟಾದ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕೆಂದು ಅಧ್ಯಕ್ಷ ರಾಮರಾವ್ ಪಾಟೀಲ್ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>