<p>ಧರ್ಮನಿರಪೇಕ್ಷ ಆಶಯದ ಸಂವಿಧಾನವನ್ನು ದೇಶವು ಅಂಗೀಕರಿಸಿರುವುದರಿಂದ ಜನತೆ ತಮಗೆ ಇಷ್ಟವಾದ ಯಾವುದೇ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳನ್ನು ಹೊಂದುವ ಸ್ವಾತಂತ್ರ್ಯ ಪಡೆದಿದ್ದಾರೆ. <br /> <br /> ಶ್ರದ್ಧಾಭಕ್ತಿಯಿಂದ ಅಗೋಚರ ಶಕ್ತಿಯನ್ನು ಆರಾಧಿಸುವ ಭಾರತೀಯ ಮನಸ್ಸು ಸಕಲ ಜೀವರಾಶಿಗಳಲ್ಲಿಯೂ ದೈವಸ್ವರೂಪವನ್ನು ಕಾಣುವ ವೈಶಾಲ್ಯತೆಯನ್ನು ಪಡೆದಿದೆ. ಜನತೆಯ ನಂಬಿಕೆ ಮತ್ತು ಶ್ರದ್ಧೆಯನ್ನು ಆಧರಿಸಿ ದೇಶದಾದ್ಯಂತ ವಿಸ್ತರಿಸಿರುವ ದೇವಾಲಯ ಪರಂಪರೆಯನ್ನು ಸಾಂಸ್ಥಿಕ ಚೌಕಟ್ಟಿಗೆ ತರುವ ಪ್ರಯತ್ನಗಳು ಆಗಾಗ ನಡೆದಿವೆ. `<br /> <br /> ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ~ಗೆ ರಾಜ್ಯ ಸರ್ಕಾರ ಈಚೆಗೆ ತಂದಿರುವ ಕೆಲವು ತಿದ್ದುಪಡಿಗಳು ಸರ್ಕಾರದ ಉಸ್ತುವಾರಿಯಲ್ಲಿರುವ ದೇವಾಲಯಗಳಲ್ಲಿ ಪೂಜಾ ವ್ಯವಸ್ಥೆಯನ್ನು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪುನರ್ರೂಪಿಸಲು ಉದ್ದೇಶಿತವಾಗಿವೆ.<br /> <br /> ಪೂಜಾಕೈಂಕರ್ಯಕ್ಕೆ ವೃತ್ತಿಪರತೆಯನ್ನು ತರುವ ಯತ್ನವೂ ನಡೆದಿದೆ. ಪೂಜಾವೃತ್ತಿಗೆ ಶೈಕ್ಷಣಿಕ ಅಧ್ಯಯನದ ಅರ್ಹತೆಯನ್ನು ನಿಗದಿಪಡಿಸಿದೆ. ಜೊತೆಗೆ ಅರ್ಚಕರ ನೇಮಕಕ್ಕೆ ವೃಂದ ಮತ್ತು ಮೀಸಲಾತಿ ಪ್ರಸ್ತಾಪದ ಜೊತೆಗೆ ಸೇವಾನಿಯಮಗಳನ್ನೂ ರೂಪಿಸಿದೆ. <br /> <br /> ಸರ್ವ ಸಮಾನತೆಯ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಿದ ಈ ತಿದ್ದುಪಡಿಗಳು ಅರ್ಚಕ ವೃತ್ತಿಯನ್ನು ಆಕರ್ಷಕಗೊಳಿಸುವುದಕ್ಕೆ ಪೂರಕವಾಗಿವೆ. ಪ್ರಧಾನ ಅರ್ಚಕ, ಅರ್ಚಕ ಮತ್ತು ಸಹಾಯಕ ಅರ್ಚಕ ಹುದ್ದೆಗಳನ್ನೂ ಅವುಗಳಿಗೆ ವೇತನ ಶ್ರೇಣಿ ನಿಗದಿಪಡಿಸಲು ಅವಕಾಶವನ್ನೂ ಮಾಡಲಾಗಿದೆ. <br /> <br /> ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿಸಿ, ವರ್ಗಾವಣೆಗೂ ಅವಕಾಶ ಕಲ್ಪಿಸಿರುವುದು ಅರ್ಚಕ ವೃತ್ತಿಗೆ ಸರ್ಕಾರಿ ನೌಕರರಿಗೆ ನೀಡಲಾಗುವ ಭದ್ರತೆಯನ್ನೂ ನೀಡಿದಂತಾಗಿದೆ.<br /> ಸರ್ಕಾರದ ಆರ್ಥಿಕ ನೆರವಿನಲ್ಲಿ ನಡೆಯುತ್ತಿರುವ ಸಂಸ್ಕೃತ ವಿದ್ಯಾಲಯಗಳಲ್ಲಿ ಅರ್ಚಕ ವೃತ್ತಿಗೆ ಅವಶ್ಯಕವಾದ ಶಿಕ್ಷಣ ಈಗಾಗಲೇ ಲಭ್ಯವಿದೆ. <br /> <br /> `ಕಾಲೋಚಿತ ನಿರ್ಣಯ~ ತರಬೇತಿಯಲ್ಲದೆ, ಜ್ಯೋತಿಷ, ತರ್ಕ, ಆಗಮ ಮೊದಲಾದ ಜ್ಞಾನಶಿಸ್ತುಗಳಲ್ಲಿ ವಿದ್ವತ್ ಪದವಿಯನ್ನು ಪಡೆದವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿನ ದೇವಾಲಯಗಳಲ್ಲಿಯೂ ಬೇಡಿಕೆ ಇದೆ. <br /> <br /> ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದಕ್ಕೆ ಮಾನವನಿರ್ಮಿತ ಜಾತಿಮತಗಳ ಕಟ್ಟುಪಾಡುಗಳು ಅನಗತ್ಯವೆಂದು ನಾಡಿನ ಅನೇಕ ಸಮಾಜ ಸುಧಾರಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅದರಲ್ಲಿಯೂ ನಾರಾಯಣಗುರುಗಳಂತಹ ಸಂತರು ಹಿಂದುಳಿದ ವರ್ಗಗಳಿಗಾಗಿ ದೇವಾಲಯಗಳನ್ನು ಪ್ರತಿಷ್ಠಾಪಿಸಿ ಆ ವರ್ಗಗಳಿಂದಲೇ ಅರ್ಚಕರನ್ನು ತರಬೇತುಗೊಳಿಸುವ ಗುರುಕುಲಗಳನ್ನು ಆರಂಭಿಸಿದ್ದು ಐತಿಹಾಸಿಕ ಸಂಗತಿಯಾಗಿದೆ.<br /> <br /> ವಿವಿಧ ಜಾತಿ ಸಮುದಾಯಗಳ ದೇವಾಲಯಗಳಲ್ಲಿ ಆಯಾ ಸಮುದಾಯಗಳ ಪುರೋಹಿತರೇ ಪರಂಪರೆಯಿಂದ ಅರ್ಚಕರಾಗಿ ಕೈಂಕರ್ಯ ಮಾಡುತ್ತಿರುವ ನಿದರ್ಶನಗಳು ರಾಜ್ಯದಲ್ಲಿಯೇ ಇವೆ. ಅರ್ಚಕ ವೃತ್ತಿಗೆ ಅವಶ್ಯಕವಾದ ಶಿಕ್ಷಣ ಪಡೆಯುವ ಅವಕಾಶವನ್ನು ಎಲ್ಲ ವರ್ಗಕ್ಕೂ ಮುಕ್ತವಾಗಿ ಒದಗಿಸಿದಾಗ ಅದೊಂದು ವೃತ್ತಿವಿಶೇಷವಾಗಿ ಆಸಕ್ತರನ್ನು ಸೆಳೆಯಬಲ್ಲುದಾಗಿದೆ. <br /> <br /> ಆದ್ದರಿಂದ ದೇವಾಲಯಗಳ ಅರ್ಚಕ ವೃತ್ತಿ ನಿರ್ದಿಷ್ಟ ಸಮುದಾಯದವರಿಗೆ ಮಾತ್ರವೇ ಮೀಸಲಾಗಿಡಬೇಕೆಂಬ ಯಾವುದೇ ಬೇಡಿಕೆಯನ್ನು ಸರ್ಕಾರ ಪುರಸ್ಕರಿಸಲಾಗದು. ದೇವಾಲಯಗಳಲ್ಲಿನ ಪೂಜಾ ಕೈಂಕರ್ಯವನ್ನು ಶೈಕ್ಷಣಿಕ ಅರ್ಹತೆ ಆಧರಿಸಿದ ವೃತ್ತಿಯಾಗಿ ಸರ್ಕಾರ ಪರಿಗಣಿಸಬೇಕು. <br /> <br /> ಅರ್ಚಕವೃತ್ತಿಗೆ ಅರ್ಹತೆ ಪಡೆದವರನ್ನು ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ನೇಮಿಸಿ ಕಾನೂನಿನ ಎದುರು ಮಾತ್ರವಲ್ಲದೆ ದೇವರ ಎದುರ ಕೂಡ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾಕಾರಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧರ್ಮನಿರಪೇಕ್ಷ ಆಶಯದ ಸಂವಿಧಾನವನ್ನು ದೇಶವು ಅಂಗೀಕರಿಸಿರುವುದರಿಂದ ಜನತೆ ತಮಗೆ ಇಷ್ಟವಾದ ಯಾವುದೇ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳನ್ನು ಹೊಂದುವ ಸ್ವಾತಂತ್ರ್ಯ ಪಡೆದಿದ್ದಾರೆ. <br /> <br /> ಶ್ರದ್ಧಾಭಕ್ತಿಯಿಂದ ಅಗೋಚರ ಶಕ್ತಿಯನ್ನು ಆರಾಧಿಸುವ ಭಾರತೀಯ ಮನಸ್ಸು ಸಕಲ ಜೀವರಾಶಿಗಳಲ್ಲಿಯೂ ದೈವಸ್ವರೂಪವನ್ನು ಕಾಣುವ ವೈಶಾಲ್ಯತೆಯನ್ನು ಪಡೆದಿದೆ. ಜನತೆಯ ನಂಬಿಕೆ ಮತ್ತು ಶ್ರದ್ಧೆಯನ್ನು ಆಧರಿಸಿ ದೇಶದಾದ್ಯಂತ ವಿಸ್ತರಿಸಿರುವ ದೇವಾಲಯ ಪರಂಪರೆಯನ್ನು ಸಾಂಸ್ಥಿಕ ಚೌಕಟ್ಟಿಗೆ ತರುವ ಪ್ರಯತ್ನಗಳು ಆಗಾಗ ನಡೆದಿವೆ. `<br /> <br /> ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ~ಗೆ ರಾಜ್ಯ ಸರ್ಕಾರ ಈಚೆಗೆ ತಂದಿರುವ ಕೆಲವು ತಿದ್ದುಪಡಿಗಳು ಸರ್ಕಾರದ ಉಸ್ತುವಾರಿಯಲ್ಲಿರುವ ದೇವಾಲಯಗಳಲ್ಲಿ ಪೂಜಾ ವ್ಯವಸ್ಥೆಯನ್ನು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಪುನರ್ರೂಪಿಸಲು ಉದ್ದೇಶಿತವಾಗಿವೆ.<br /> <br /> ಪೂಜಾಕೈಂಕರ್ಯಕ್ಕೆ ವೃತ್ತಿಪರತೆಯನ್ನು ತರುವ ಯತ್ನವೂ ನಡೆದಿದೆ. ಪೂಜಾವೃತ್ತಿಗೆ ಶೈಕ್ಷಣಿಕ ಅಧ್ಯಯನದ ಅರ್ಹತೆಯನ್ನು ನಿಗದಿಪಡಿಸಿದೆ. ಜೊತೆಗೆ ಅರ್ಚಕರ ನೇಮಕಕ್ಕೆ ವೃಂದ ಮತ್ತು ಮೀಸಲಾತಿ ಪ್ರಸ್ತಾಪದ ಜೊತೆಗೆ ಸೇವಾನಿಯಮಗಳನ್ನೂ ರೂಪಿಸಿದೆ. <br /> <br /> ಸರ್ವ ಸಮಾನತೆಯ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಿದ ಈ ತಿದ್ದುಪಡಿಗಳು ಅರ್ಚಕ ವೃತ್ತಿಯನ್ನು ಆಕರ್ಷಕಗೊಳಿಸುವುದಕ್ಕೆ ಪೂರಕವಾಗಿವೆ. ಪ್ರಧಾನ ಅರ್ಚಕ, ಅರ್ಚಕ ಮತ್ತು ಸಹಾಯಕ ಅರ್ಚಕ ಹುದ್ದೆಗಳನ್ನೂ ಅವುಗಳಿಗೆ ವೇತನ ಶ್ರೇಣಿ ನಿಗದಿಪಡಿಸಲು ಅವಕಾಶವನ್ನೂ ಮಾಡಲಾಗಿದೆ. <br /> <br /> ನಿವೃತ್ತಿ ವಯಸ್ಸನ್ನು 65ಕ್ಕೆ ನಿಗದಿಪಡಿಸಿ, ವರ್ಗಾವಣೆಗೂ ಅವಕಾಶ ಕಲ್ಪಿಸಿರುವುದು ಅರ್ಚಕ ವೃತ್ತಿಗೆ ಸರ್ಕಾರಿ ನೌಕರರಿಗೆ ನೀಡಲಾಗುವ ಭದ್ರತೆಯನ್ನೂ ನೀಡಿದಂತಾಗಿದೆ.<br /> ಸರ್ಕಾರದ ಆರ್ಥಿಕ ನೆರವಿನಲ್ಲಿ ನಡೆಯುತ್ತಿರುವ ಸಂಸ್ಕೃತ ವಿದ್ಯಾಲಯಗಳಲ್ಲಿ ಅರ್ಚಕ ವೃತ್ತಿಗೆ ಅವಶ್ಯಕವಾದ ಶಿಕ್ಷಣ ಈಗಾಗಲೇ ಲಭ್ಯವಿದೆ. <br /> <br /> `ಕಾಲೋಚಿತ ನಿರ್ಣಯ~ ತರಬೇತಿಯಲ್ಲದೆ, ಜ್ಯೋತಿಷ, ತರ್ಕ, ಆಗಮ ಮೊದಲಾದ ಜ್ಞಾನಶಿಸ್ತುಗಳಲ್ಲಿ ವಿದ್ವತ್ ಪದವಿಯನ್ನು ಪಡೆದವರಿಗೆ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿನ ದೇವಾಲಯಗಳಲ್ಲಿಯೂ ಬೇಡಿಕೆ ಇದೆ. <br /> <br /> ದೇವರನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದಕ್ಕೆ ಮಾನವನಿರ್ಮಿತ ಜಾತಿಮತಗಳ ಕಟ್ಟುಪಾಡುಗಳು ಅನಗತ್ಯವೆಂದು ನಾಡಿನ ಅನೇಕ ಸಮಾಜ ಸುಧಾರಕರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅದರಲ್ಲಿಯೂ ನಾರಾಯಣಗುರುಗಳಂತಹ ಸಂತರು ಹಿಂದುಳಿದ ವರ್ಗಗಳಿಗಾಗಿ ದೇವಾಲಯಗಳನ್ನು ಪ್ರತಿಷ್ಠಾಪಿಸಿ ಆ ವರ್ಗಗಳಿಂದಲೇ ಅರ್ಚಕರನ್ನು ತರಬೇತುಗೊಳಿಸುವ ಗುರುಕುಲಗಳನ್ನು ಆರಂಭಿಸಿದ್ದು ಐತಿಹಾಸಿಕ ಸಂಗತಿಯಾಗಿದೆ.<br /> <br /> ವಿವಿಧ ಜಾತಿ ಸಮುದಾಯಗಳ ದೇವಾಲಯಗಳಲ್ಲಿ ಆಯಾ ಸಮುದಾಯಗಳ ಪುರೋಹಿತರೇ ಪರಂಪರೆಯಿಂದ ಅರ್ಚಕರಾಗಿ ಕೈಂಕರ್ಯ ಮಾಡುತ್ತಿರುವ ನಿದರ್ಶನಗಳು ರಾಜ್ಯದಲ್ಲಿಯೇ ಇವೆ. ಅರ್ಚಕ ವೃತ್ತಿಗೆ ಅವಶ್ಯಕವಾದ ಶಿಕ್ಷಣ ಪಡೆಯುವ ಅವಕಾಶವನ್ನು ಎಲ್ಲ ವರ್ಗಕ್ಕೂ ಮುಕ್ತವಾಗಿ ಒದಗಿಸಿದಾಗ ಅದೊಂದು ವೃತ್ತಿವಿಶೇಷವಾಗಿ ಆಸಕ್ತರನ್ನು ಸೆಳೆಯಬಲ್ಲುದಾಗಿದೆ. <br /> <br /> ಆದ್ದರಿಂದ ದೇವಾಲಯಗಳ ಅರ್ಚಕ ವೃತ್ತಿ ನಿರ್ದಿಷ್ಟ ಸಮುದಾಯದವರಿಗೆ ಮಾತ್ರವೇ ಮೀಸಲಾಗಿಡಬೇಕೆಂಬ ಯಾವುದೇ ಬೇಡಿಕೆಯನ್ನು ಸರ್ಕಾರ ಪುರಸ್ಕರಿಸಲಾಗದು. ದೇವಾಲಯಗಳಲ್ಲಿನ ಪೂಜಾ ಕೈಂಕರ್ಯವನ್ನು ಶೈಕ್ಷಣಿಕ ಅರ್ಹತೆ ಆಧರಿಸಿದ ವೃತ್ತಿಯಾಗಿ ಸರ್ಕಾರ ಪರಿಗಣಿಸಬೇಕು. <br /> <br /> ಅರ್ಚಕವೃತ್ತಿಗೆ ಅರ್ಹತೆ ಪಡೆದವರನ್ನು ಸರ್ಕಾರದ ಮೀಸಲಾತಿಗೆ ಅನುಗುಣವಾಗಿ ನೇಮಿಸಿ ಕಾನೂನಿನ ಎದುರು ಮಾತ್ರವಲ್ಲದೆ ದೇವರ ಎದುರ ಕೂಡ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾಕಾರಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>