<p><strong>ಹುಬ್ಬಳ್ಳಿ: </strong>ಸಂಚಾರದ ಮಾಹಿತಿ ನೀಡುವ ಎಲ್ಇಡಿ ಫಲಕ, ತಂಗುದಾಣಗಳ ಮಾಹಿತಿ ನೀಡಲು ಸ್ವಯಂಚಾಲಿತ ಉದ್ಘೋಷ, ಬಾಗಿಲು ತೆರೆಯಲು ಮತ್ತು ಮುಚ್ಚಲು ಸ್ವಯಂಚಾಲಿತ ಸೌಲಭ್ಯ ಇತ್ಯಾದಿ ಒಳಗೊಂಡ ಆರು ಹೊಸ ಬಸ್ಗಳನ್ನು ಅವಳಿ ನಗರಕ್ಕೆ ಬುಧವಾರ ಸಮರ್ಪಿಸಲಾಯಿತು.<br /> <br /> ಹಳೆ ಬಸ್್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಮಾಜಿ ಸಚಿವ ಬಸವರಾಜ ಹೊರಟ್ಟಿ ಬಸ್ಗಳಿಗೆ ಹಸಿರು ನಿಶಾನೆ ತೋರಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ ಶೆಟ್ಟರ್ ಈ ಬಸ್ಗಳಿಂದ ನಗರದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.<br /> <br /> ‘ಪ್ರತಿ ತಂಗುದಾಣದ ಮಾಹಿತಿಯನ್ನು ಸ್ವಯಂ ಚಾಲಿತ ವ್ಯವಸ್ಥೆಯನ್ನು ಬಳಸಿರುವುದರಿಂದಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ<br /> ಬಂದು ಪ್ರಯಾಣ ಮಾಡುವವರಿಗೆ ತಂಗುದಾಣಗಳ ಮಾಹಿತಿ ಪಡೆಯಲು ಯಾರನ್ನೂ ಆಶ್ರಯಿಸುವ ಅಗತ್ಯ ಇಲ್ಲ’ ಎಂದು ಅವರು ಹೇಳಿದರು.<br /> <br /> ಬಸವರಾಜ ಹೊರಟ್ಟಿ ಮಾತನಾಡಿ ಬೆಂಗಳೂರಿನಲ್ಲಿ ಇರುವ ಸೌಲಭ್ಯಗಳನ್ನು ಅವಳಿ ನಗರದಲ್ಲಿ ಕಲ್ಪಿಸಿರುವುದು ಖುಷಿಯ ವಿಷಯ ಎಂದು ಹೇಳಿದರು.<br /> <br /> ‘ನಾಲ್ಕು ವಿಭಾಗಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೇ ಹೆಚ್ಚು ಆದಾಯ ಗಳಿಸುತ್ತಿದ್ದು ಈ ಕಾರಣದಿಂದ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.<br /> <br /> ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ ಎಚ್. ಕುಸುಗಲ್ ಬಸ್ಗಳ ಮಾಹಿತಿ ನೀಡಿದರು.<br /> <br /> ಟಾಟಾ ಕಂಪೆನಿಯ ಹೊಸ ತಾಂತ್ರಿ ಸೌಲಭ್ಯಗಳಿರುವ ಯೂರೋ–3 ಮಾದರಿಯ ಈ ಬಸ್ಗಳಲ್ಲಿ ವಿಶೇಷ ನುಡಿಗಟ್ಟುಗಳನ್ನು ಬರೆಯಲಾಗಿದ್ದು ಅಗ್ನಿಶಾಮಕ ವ್ಯವಸ್ಥೆಯೂ ಇದೆ ಎಂದರು.‘ಈ ವರ್ಷ ವಿಭಾಗಕ್ಕೆ ಒಟ್ಟು 750 ಬಸ್ಗಳನ್ನು ಒದಗಿಸಲಾಗಿದ್ದು ನಗರ ಸಾರಿಗೆ ವಿಭಾಗಕ್ಕೆ 60 ಬಸ್ಗಳು ಲಭಿಸಿವೆ’ ಎಂದು ಅವರು ತಿಳಿಸಿದರು.<br /> <br /> ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಸ್.ಆರ್.ನಮಾಜಿ, ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಸಂಚಾರದ ಮಾಹಿತಿ ನೀಡುವ ಎಲ್ಇಡಿ ಫಲಕ, ತಂಗುದಾಣಗಳ ಮಾಹಿತಿ ನೀಡಲು ಸ್ವಯಂಚಾಲಿತ ಉದ್ಘೋಷ, ಬಾಗಿಲು ತೆರೆಯಲು ಮತ್ತು ಮುಚ್ಚಲು ಸ್ವಯಂಚಾಲಿತ ಸೌಲಭ್ಯ ಇತ್ಯಾದಿ ಒಳಗೊಂಡ ಆರು ಹೊಸ ಬಸ್ಗಳನ್ನು ಅವಳಿ ನಗರಕ್ಕೆ ಬುಧವಾರ ಸಮರ್ಪಿಸಲಾಯಿತು.<br /> <br /> ಹಳೆ ಬಸ್್ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಮಾಜಿ ಸಚಿವ ಬಸವರಾಜ ಹೊರಟ್ಟಿ ಬಸ್ಗಳಿಗೆ ಹಸಿರು ನಿಶಾನೆ ತೋರಿಸಿದರು.<br /> <br /> ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ ಶೆಟ್ಟರ್ ಈ ಬಸ್ಗಳಿಂದ ನಗರದ ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.<br /> <br /> ‘ಪ್ರತಿ ತಂಗುದಾಣದ ಮಾಹಿತಿಯನ್ನು ಸ್ವಯಂ ಚಾಲಿತ ವ್ಯವಸ್ಥೆಯನ್ನು ಬಳಸಿರುವುದರಿಂದಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ<br /> ಬಂದು ಪ್ರಯಾಣ ಮಾಡುವವರಿಗೆ ತಂಗುದಾಣಗಳ ಮಾಹಿತಿ ಪಡೆಯಲು ಯಾರನ್ನೂ ಆಶ್ರಯಿಸುವ ಅಗತ್ಯ ಇಲ್ಲ’ ಎಂದು ಅವರು ಹೇಳಿದರು.<br /> <br /> ಬಸವರಾಜ ಹೊರಟ್ಟಿ ಮಾತನಾಡಿ ಬೆಂಗಳೂರಿನಲ್ಲಿ ಇರುವ ಸೌಲಭ್ಯಗಳನ್ನು ಅವಳಿ ನಗರದಲ್ಲಿ ಕಲ್ಪಿಸಿರುವುದು ಖುಷಿಯ ವಿಷಯ ಎಂದು ಹೇಳಿದರು.<br /> <br /> ‘ನಾಲ್ಕು ವಿಭಾಗಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೇ ಹೆಚ್ಚು ಆದಾಯ ಗಳಿಸುತ್ತಿದ್ದು ಈ ಕಾರಣದಿಂದ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದರು.<br /> <br /> ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ ಎಚ್. ಕುಸುಗಲ್ ಬಸ್ಗಳ ಮಾಹಿತಿ ನೀಡಿದರು.<br /> <br /> ಟಾಟಾ ಕಂಪೆನಿಯ ಹೊಸ ತಾಂತ್ರಿ ಸೌಲಭ್ಯಗಳಿರುವ ಯೂರೋ–3 ಮಾದರಿಯ ಈ ಬಸ್ಗಳಲ್ಲಿ ವಿಶೇಷ ನುಡಿಗಟ್ಟುಗಳನ್ನು ಬರೆಯಲಾಗಿದ್ದು ಅಗ್ನಿಶಾಮಕ ವ್ಯವಸ್ಥೆಯೂ ಇದೆ ಎಂದರು.‘ಈ ವರ್ಷ ವಿಭಾಗಕ್ಕೆ ಒಟ್ಟು 750 ಬಸ್ಗಳನ್ನು ಒದಗಿಸಲಾಗಿದ್ದು ನಗರ ಸಾರಿಗೆ ವಿಭಾಗಕ್ಕೆ 60 ಬಸ್ಗಳು ಲಭಿಸಿವೆ’ ಎಂದು ಅವರು ತಿಳಿಸಿದರು.<br /> <br /> ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಸ್.ಆರ್.ನಮಾಜಿ, ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>