<p><strong>ಬೆಂಗಳೂರು:</strong> `ಈಶಾನ್ಯ ರಾಜ್ಯದ ಜನರಿಗೆ ಬೆಂಗಳೂರು ಸುರಕ್ಷಿತವಾಗಿದೆ. ಅಸ್ಸಾಂ ಜನರು ನಗರ ಬಿಡುವ ಅಗತ್ಯವಿಲ್ಲ~ ಎಂದು ಬೆಂಗಳೂರು ಅಸ್ಸಾಂ ಸೊಸೈಟಿ ಪ್ರಧಾನ ಕಾರ್ಯದರ್ಶಿ ಪ್ರಂಜಲ್ ಮೇಧಿ ಹೇಳಿದರು.<br /> <br /> `ಬೆಂಗಳೂರು ನಗರದಲ್ಲಿಯೇ 40 ಸಾವಿರ ಅಸ್ಸಾಂ ಮೂಲದ ಜನ ನೆಲೆಸಿದ್ದಾರೆ. ಹಿಂದಿನಿಂದಲೂ ರಾಜ್ಯದಲ್ಲಿ ಅಸ್ಸಾಂ ಜನರು ಸುರಕ್ಷಿತವಾಗಿದ್ದಾರೆ. ಸೊಸೈಟಿಯು 1998ರಿಂದ ಅಸ್ಸಾಂ ವಲಸಿಗರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸೊಸೈಟಿಗೆ 7 ಸಾವಿರ ಜನ ಸದಸ್ಯರಿದ್ದಾರೆ~ ಎಂದು ತಿಳಿಸಿದರು.<br /> <br /> `ಅಸ್ಸಾಂನಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಒಂದು ಸಮುದಾಯದ ಮೇಲೆ ಸಂಶಯಪಟ್ಟು ಬೆಂಗಳೂರು ತೊರೆಯುವ ಯಾವುದೇ ಘಟನೆಗಳು ನಡೆದಿಲ್ಲ~ ಎಂದು ಅಭಿಪ್ರಾಯಪಟ್ಟರು.<br /> <br /> `ಹೆಚ್ಚಿನ ಸಂಖ್ಯೆ ಜನರು ಮಾಲ್ಗಳಲ್ಲಿ, ಹೋಟೆಲ್, ಸೆಕ್ಯುರಿಟಿ ಗಾರ್ಡ್ಗಳಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ, ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಹೇಳಿದರು.<br /> <br /> `ಜನರು ಸರ್ಕಾರದ ಮೇಲೆ ನಂಬಿಕೆಯನ್ನಿಡಬೇಕು. ಅವರಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲು ಸಿದ್ಧವಿದೆ. ವದಂತಿಗಳನ್ನು ನಂಬಿ ಅವಸರವಾಗಿ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ. ಯಾರಿಗಾದರೂ ತೊಂದರೆಯಾಗಿದ್ದರೆ, ಅವರು ಪೊಲೀಸರ ಅಥವಾ ಸೊಸೈಟಿ ಸಹಾಯ ಪಡೆಯಬಹುದು~ ಎಂದರು. <br /> <br /> `ರಂಜಾನ್ ನಂತರ ಅಸ್ಸಾಂ ಜನರ ಮೇಲೆ ದಾಳಿಗಳು ನಡೆಯಲಿವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹರಡುತ್ತಿದೆ. ಅಲ್ಲದೇ, ಟಿವಿ ಚಾನೆಲ್ಗಳು ಕೂಡ ಬಿಟ್ಟು ಬಿಡದೆ ಪ್ರಸಾರ ಮಾಡಿ ಈ ವದಂತಿಗಳು ದಟ್ಟವಾಗಿ ಹಬ್ಬಲು ಕಾರಣವಾಗಿವೆ~ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಈಶಾನ್ಯ ರಾಜ್ಯದ ಜನರಿಗೆ ಬೆಂಗಳೂರು ಸುರಕ್ಷಿತವಾಗಿದೆ. ಅಸ್ಸಾಂ ಜನರು ನಗರ ಬಿಡುವ ಅಗತ್ಯವಿಲ್ಲ~ ಎಂದು ಬೆಂಗಳೂರು ಅಸ್ಸಾಂ ಸೊಸೈಟಿ ಪ್ರಧಾನ ಕಾರ್ಯದರ್ಶಿ ಪ್ರಂಜಲ್ ಮೇಧಿ ಹೇಳಿದರು.<br /> <br /> `ಬೆಂಗಳೂರು ನಗರದಲ್ಲಿಯೇ 40 ಸಾವಿರ ಅಸ್ಸಾಂ ಮೂಲದ ಜನ ನೆಲೆಸಿದ್ದಾರೆ. ಹಿಂದಿನಿಂದಲೂ ರಾಜ್ಯದಲ್ಲಿ ಅಸ್ಸಾಂ ಜನರು ಸುರಕ್ಷಿತವಾಗಿದ್ದಾರೆ. ಸೊಸೈಟಿಯು 1998ರಿಂದ ಅಸ್ಸಾಂ ವಲಸಿಗರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸೊಸೈಟಿಗೆ 7 ಸಾವಿರ ಜನ ಸದಸ್ಯರಿದ್ದಾರೆ~ ಎಂದು ತಿಳಿಸಿದರು.<br /> <br /> `ಅಸ್ಸಾಂನಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಒಂದು ಸಮುದಾಯದ ಮೇಲೆ ಸಂಶಯಪಟ್ಟು ಬೆಂಗಳೂರು ತೊರೆಯುವ ಯಾವುದೇ ಘಟನೆಗಳು ನಡೆದಿಲ್ಲ~ ಎಂದು ಅಭಿಪ್ರಾಯಪಟ್ಟರು.<br /> <br /> `ಹೆಚ್ಚಿನ ಸಂಖ್ಯೆ ಜನರು ಮಾಲ್ಗಳಲ್ಲಿ, ಹೋಟೆಲ್, ಸೆಕ್ಯುರಿಟಿ ಗಾರ್ಡ್ಗಳಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ, ಸಾಕಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಹೇಳಿದರು.<br /> <br /> `ಜನರು ಸರ್ಕಾರದ ಮೇಲೆ ನಂಬಿಕೆಯನ್ನಿಡಬೇಕು. ಅವರಿಗೆ ಅಗತ್ಯ ನೆರವನ್ನು ಸರ್ಕಾರ ನೀಡಲು ಸಿದ್ಧವಿದೆ. ವದಂತಿಗಳನ್ನು ನಂಬಿ ಅವಸರವಾಗಿ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿಲ್ಲ. ಯಾರಿಗಾದರೂ ತೊಂದರೆಯಾಗಿದ್ದರೆ, ಅವರು ಪೊಲೀಸರ ಅಥವಾ ಸೊಸೈಟಿ ಸಹಾಯ ಪಡೆಯಬಹುದು~ ಎಂದರು. <br /> <br /> `ರಂಜಾನ್ ನಂತರ ಅಸ್ಸಾಂ ಜನರ ಮೇಲೆ ದಾಳಿಗಳು ನಡೆಯಲಿವೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ವದಂತಿ ಹರಡುತ್ತಿದೆ. ಅಲ್ಲದೇ, ಟಿವಿ ಚಾನೆಲ್ಗಳು ಕೂಡ ಬಿಟ್ಟು ಬಿಡದೆ ಪ್ರಸಾರ ಮಾಡಿ ಈ ವದಂತಿಗಳು ದಟ್ಟವಾಗಿ ಹಬ್ಬಲು ಕಾರಣವಾಗಿವೆ~ ಎಂದು ಆರೋಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>