<p><strong>ಹೈದರಾಬಾದ್ (ಐಎಎನ್ಎಸ್): </strong>ಆಂಧ್ರ ಪ್ರದೇಶದ ಉತ್ತರ ಭಾಗದ ಕೃಷ್ಣಾ ಮತ್ತು ಗುಂಟೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಗೂ ತೆಲಂಗಾಣ ವ್ಯಾಪ್ತಿಯ ಖಮ್ಮಮ್ ಜಿಲ್ಲೆಯಲ್ಲಿ ಗುರುವಾರ ಲಘು ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಯಾಗಿಲ್ಲ.<br /> <br /> ಭೂಮಿ ಕೆಲವು ಸೆಕೆಂಡುಗಳ ಕಾಲ ಕಂಪಿಸಿದ ಪರಿಣಾಮವಾಗಿ ಭಯಗೊಂಡ ಜನ ಮನೆಗಳಿಂದ ಹೊರಗೋಡಿ ಬಂದರು. ಕೆಲವೆಡೆ 12.25ರಿಂದ 12.30ರವರೆಗಿನ ಅವಧಿಯಲ್ಲಿ ಭೂಮಿ ಐದು ಬಾರಿ ಕಂಪಿಸಿತು. ಇದರಿಂದ ಜನ ಮನೆಗಳಿಗೆ ತೆರಳಲು ಹಿಂಜರಿದರು ಎನ್ನಲಾಗಿದೆ.<br /> <br /> ಲಘು ಭೂಕಂಪನ ಆಗಿರುವುದರಿಂದ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಐಎಎನ್ಎಸ್): </strong>ಆಂಧ್ರ ಪ್ರದೇಶದ ಉತ್ತರ ಭಾಗದ ಕೃಷ್ಣಾ ಮತ್ತು ಗುಂಟೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾಗೂ ತೆಲಂಗಾಣ ವ್ಯಾಪ್ತಿಯ ಖಮ್ಮಮ್ ಜಿಲ್ಲೆಯಲ್ಲಿ ಗುರುವಾರ ಲಘು ಭೂಕಂಪನ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಯಾಗಿಲ್ಲ.<br /> <br /> ಭೂಮಿ ಕೆಲವು ಸೆಕೆಂಡುಗಳ ಕಾಲ ಕಂಪಿಸಿದ ಪರಿಣಾಮವಾಗಿ ಭಯಗೊಂಡ ಜನ ಮನೆಗಳಿಂದ ಹೊರಗೋಡಿ ಬಂದರು. ಕೆಲವೆಡೆ 12.25ರಿಂದ 12.30ರವರೆಗಿನ ಅವಧಿಯಲ್ಲಿ ಭೂಮಿ ಐದು ಬಾರಿ ಕಂಪಿಸಿತು. ಇದರಿಂದ ಜನ ಮನೆಗಳಿಗೆ ತೆರಳಲು ಹಿಂಜರಿದರು ಎನ್ನಲಾಗಿದೆ.<br /> <br /> ಲಘು ಭೂಕಂಪನ ಆಗಿರುವುದರಿಂದ ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>