<p><strong>ಪಾವಗಡ:</strong> ತೆಲಾಂಗಣ ರಾಜ್ಯ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ತಾಲ್ಲೂಕನ್ನು ಆವರಿಸಿರುವ ಆಂಧ್ರದ ವಿಭಿನ್ನ ಪ್ರಾಂತ್ಯಗಳಾದ ಮಡಕಶಿರಾ, ಹಿಂದೂಪುರ, ಪೆನುಗೊಂಡ, ಕಂಬದೂರಿನಲ್ಲಿ ವಿಶಾಲಾಂಧ್ರ ಪರಿರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಂದ್ ನಡೆಸಲಾಯಿತು.</p>.<p>ಸೀಮಾಂಧ್ರ ಬಂದ್ನ ಬಿಸಿ ತಾಲ್ಲೂಕಿನ ಜನತೆಗೂ ತಟ್ಟಿತು. ಆಟೊ ದರ ದುಪ್ಪಟ್ಟಾಯಿತು. ವಾಹನಗಳು ಚಂದ್ರಬಾವಿ ಬಳಿಯೇ ಸ್ಥಗಿತಗೊಂಡವು. ಅಲ್ಲಿಂದ ಪಟ್ಟಣಕ್ಕೆ ತಲುಪಲು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು.<br /> <br /> ಪದವಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಆಂಧ್ರದ ಮೂಲಕ ಪಟ್ಟಣದ ಪದವಿ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳ ಪಾಡು ಹೇಳ ತೀರದ್ದಾಗಿತ್ತು. ಅಷ್ಟೇ ಅಲ್ಲದೆ ತಾಲ್ಲೂಕಿನ ಪದವಿ ಕಾಲೇಜುಗಳ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯುಲು ಆಗಮಿಸಿದ್ದ ಜಾಗೃತ ದಳದವರು ಬಂದ್ನಿಂದ ಸಮಸ್ಯೆ ಎದುರಿಸಿದರು. ಶನಿವಾರವೂ ಬಂದ್ ಮುಂದುವರೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ:</strong> ತೆಲಾಂಗಣ ರಾಜ್ಯ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಶುಕ್ರವಾರ ತಾಲ್ಲೂಕನ್ನು ಆವರಿಸಿರುವ ಆಂಧ್ರದ ವಿಭಿನ್ನ ಪ್ರಾಂತ್ಯಗಳಾದ ಮಡಕಶಿರಾ, ಹಿಂದೂಪುರ, ಪೆನುಗೊಂಡ, ಕಂಬದೂರಿನಲ್ಲಿ ವಿಶಾಲಾಂಧ್ರ ಪರಿರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬಂದ್ ನಡೆಸಲಾಯಿತು.</p>.<p>ಸೀಮಾಂಧ್ರ ಬಂದ್ನ ಬಿಸಿ ತಾಲ್ಲೂಕಿನ ಜನತೆಗೂ ತಟ್ಟಿತು. ಆಟೊ ದರ ದುಪ್ಪಟ್ಟಾಯಿತು. ವಾಹನಗಳು ಚಂದ್ರಬಾವಿ ಬಳಿಯೇ ಸ್ಥಗಿತಗೊಂಡವು. ಅಲ್ಲಿಂದ ಪಟ್ಟಣಕ್ಕೆ ತಲುಪಲು ಪ್ರಯಾಣಿಕರು ಹರಸಾಹಸ ಪಡಬೇಕಾಯಿತು.<br /> <br /> ಪದವಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಆಂಧ್ರದ ಮೂಲಕ ಪಟ್ಟಣದ ಪದವಿ ಪರೀಕ್ಷಾ ಕೇಂದ್ರಕ್ಕೆ ಬಂದು ಹೋಗುವ ವಿದ್ಯಾರ್ಥಿಗಳ ಪಾಡು ಹೇಳ ತೀರದ್ದಾಗಿತ್ತು. ಅಷ್ಟೇ ಅಲ್ಲದೆ ತಾಲ್ಲೂಕಿನ ಪದವಿ ಕಾಲೇಜುಗಳ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯುಲು ಆಗಮಿಸಿದ್ದ ಜಾಗೃತ ದಳದವರು ಬಂದ್ನಿಂದ ಸಮಸ್ಯೆ ಎದುರಿಸಿದರು. ಶನಿವಾರವೂ ಬಂದ್ ಮುಂದುವರೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>