<p><strong>ನವದೆಹಲಿ (ಪಿಟಿಐ):</strong> 2 ಜಿ ತರಂಗಾಂತರ ಹಂಚಿಕೆ ಸಂಬಂಧ 2006ರಲ್ಲಿ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿ ರೂಪಿಸಿದ್ದ `ಪರಿಮಿತಿ ನಿಬಂಧನೆ~ಗೆ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಅಂಶ ಇದೀಗ ಹೊರಬಿದ್ದಿದೆ.<br /> <br /> ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸಚಿವರ ಸಮಿತಿಯು ರಕ್ಷಣಾ ಉದ್ದೇಶಕ್ಕೆ ಅಗತ್ಯವಾದ ತರಂಗಾಂತರದ ಬಗ್ಗೆ ಮಾತ್ರ ಕರಾರುಗಳನ್ನು ನಿಗದಿ ಮಾಡಬೇಕು ಎಂಬುದು ಮಾರನ್ ವಾದವಾಗಿತ್ತು. 2006ರ ಫೆ.28ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿದ್ದ ಪತ್ರದಲ್ಲಿ ಮಾರನ್ ಈ ಆಕ್ಷೇಪ ಎತ್ತಿರುವುದು ಸ್ಪಷ್ಟವಾಗಿದೆ. ಸಚಿವರ ಸಮಿತಿ ವಿಧಿಸಿದ್ದ ನಿಬಂಧನೆಗಳು ದೂರಸಂಪರ್ಕ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತವೆ ಎಂದೂ ಅವರು ಭಾವಿಸಿದ್ದರು.<br /> <br /> `ರಕ್ಷಣಾ ಉದ್ದೇಶಕ್ಕೆ ಮೀಸಲಿರಿಸಬೇಕಾದ ತರಂಗಾಂತರಗಳನ್ನು ಗಮನದಲ್ಲಿ ಇರಿಸಿಕೊಂಡು ಸಚಿವರ ಸಮಿತಿ ನಿಬಂಧನೆಗಳನ್ನು ವಿಧಿಸುತ್ತದೆ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ಸಚಿವರ ಸಮಿತಿಯು ಅದಕ್ಕೂ ಮಿಗಿಲಾದ ಕರಾರುಗಳನ್ನು ವಿಧಿಸಿದೆ. ಇದು ಇಲಾಖೆಯ ಸಾಮಾನ್ಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದಂತೆ~ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಾರನ್ ಅಸಮಾಧಾನ ದಾಖಲಿಸಿದ್ದಾರೆ.<br /> <br /> ಏರ್ಸೆಲ್ ಕಂಪೆನಿಯ ಷೇರುಗಳನ್ನು ಮಲೇಷ್ಯಾದ ಮ್ಯಾಕ್ಸಿಮ್ ಗ್ರೂಪ್ಗೆ ಮಾರಾಟ ಮಾಡಲು ಒತ್ತಡ ಹೇರಿರಬಹುದೆಂಬ ಶಂಕೆಗೆ ಒಳಗಾಗಿರುವ ಮಾರನ್ ಇದೀಗ ಈ ಪತ್ರದಿಂದಾಗಿ ಮತ್ತೊಂದು ಅನುಮಾನದಲ್ಲಿ ಸಿಕ್ಕಿಬಿದ್ದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> 2 ಜಿ ತರಂಗಾಂತರ ಹಂಚಿಕೆ ಸಂಬಂಧ 2006ರಲ್ಲಿ ಪ್ರಣವ್ ಮುಖರ್ಜಿ ನೇತೃತ್ವದ ಸಚಿವರ ಸಮಿತಿ ರೂಪಿಸಿದ್ದ `ಪರಿಮಿತಿ ನಿಬಂಧನೆ~ಗೆ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ಅಂಶ ಇದೀಗ ಹೊರಬಿದ್ದಿದೆ.<br /> <br /> ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸಚಿವರ ಸಮಿತಿಯು ರಕ್ಷಣಾ ಉದ್ದೇಶಕ್ಕೆ ಅಗತ್ಯವಾದ ತರಂಗಾಂತರದ ಬಗ್ಗೆ ಮಾತ್ರ ಕರಾರುಗಳನ್ನು ನಿಗದಿ ಮಾಡಬೇಕು ಎಂಬುದು ಮಾರನ್ ವಾದವಾಗಿತ್ತು. 2006ರ ಫೆ.28ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿದ್ದ ಪತ್ರದಲ್ಲಿ ಮಾರನ್ ಈ ಆಕ್ಷೇಪ ಎತ್ತಿರುವುದು ಸ್ಪಷ್ಟವಾಗಿದೆ. ಸಚಿವರ ಸಮಿತಿ ವಿಧಿಸಿದ್ದ ನಿಬಂಧನೆಗಳು ದೂರಸಂಪರ್ಕ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತವೆ ಎಂದೂ ಅವರು ಭಾವಿಸಿದ್ದರು.<br /> <br /> `ರಕ್ಷಣಾ ಉದ್ದೇಶಕ್ಕೆ ಮೀಸಲಿರಿಸಬೇಕಾದ ತರಂಗಾಂತರಗಳನ್ನು ಗಮನದಲ್ಲಿ ಇರಿಸಿಕೊಂಡು ಸಚಿವರ ಸಮಿತಿ ನಿಬಂಧನೆಗಳನ್ನು ವಿಧಿಸುತ್ತದೆ ಎಂದು ನೀವು ಭರವಸೆ ನೀಡಿದ್ದಿರಿ. ಆದರೆ ಸಚಿವರ ಸಮಿತಿಯು ಅದಕ್ಕೂ ಮಿಗಿಲಾದ ಕರಾರುಗಳನ್ನು ವಿಧಿಸಿದೆ. ಇದು ಇಲಾಖೆಯ ಸಾಮಾನ್ಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದಂತೆ~ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಾರನ್ ಅಸಮಾಧಾನ ದಾಖಲಿಸಿದ್ದಾರೆ.<br /> <br /> ಏರ್ಸೆಲ್ ಕಂಪೆನಿಯ ಷೇರುಗಳನ್ನು ಮಲೇಷ್ಯಾದ ಮ್ಯಾಕ್ಸಿಮ್ ಗ್ರೂಪ್ಗೆ ಮಾರಾಟ ಮಾಡಲು ಒತ್ತಡ ಹೇರಿರಬಹುದೆಂಬ ಶಂಕೆಗೆ ಒಳಗಾಗಿರುವ ಮಾರನ್ ಇದೀಗ ಈ ಪತ್ರದಿಂದಾಗಿ ಮತ್ತೊಂದು ಅನುಮಾನದಲ್ಲಿ ಸಿಕ್ಕಿಬಿದ್ದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>