<p>ಹಾವೇರಿ: ಪ್ರತಿನಿತ್ಯ ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಆಗುತ್ತಿರುವ ಟ್ರಾಫಿಕ್ ಜಾಮ್ಗೆ ಬೇಸತ್ತು ಆಟೊ ಚಾಲಕರು ಹಾಗೂ ಎತ್ತಿನ ಗಾಡಿ ಹಮಾಲರು ರಸ್ತೆಯಲ್ಲಿ ಆಟೋ, ಎತ್ತಿನ ಗಾಡಿ ನಿಲ್ಲಿಸಿ ದೀಢಿರ್ ಪ್ರತಿಭಟನೆ ನಡೆಸಿದ ಘಟನೆ ನಗರದ ಲಾಲ್ಬಹುದ್ದೂರ ಶಾಸ್ತ್ರಿ ಮಾರುಕಟ್ಟೆ ರಸ್ತೆಯಲ್ಲಿ ನಡೆಯಿತು.<br /> <br /> ಆಟೊ ಚಾಲಕರು ಹಾಗೂ ಎತ್ತಿನ ಗಾಡಿ ಹಮಾಲರು ರಸ್ತೆ ಮಧ್ಯದಲ್ಲಿ ಗಾಡಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.<br /> <br /> ನಗರದ ಪ್ರಮುಖ ಕಾಯಿಪಲ್ಲೆ ಹಾಗೂ ಕಿರಾಣಿ ವಸ್ತುಗಳ ಮಾರುಕಟ್ಟೆಯಾಗಿದ್ದರಿಂದ ಪ್ರತಿನಿತ್ಯ ಲಾರಿಗಳು ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಅಷ್ಟೇ ಅಲ್ಲದೇ ಲಾರಿ, ಮಿನಿ ಲಾರಿಗಳು ರಸ್ತೆ ಮೇಲೆ ನಿಂತುಕೊಂಡೆ ತಾಸುಗಟ್ಟಲೆ ಅನ್ ಮಾಡುತ್ತವೆ. <br /> <br /> ಈ ನಡುವೆ ತಳ್ಳುಗಾಡಿ ವ್ಯಾಪಾರಿಗಳು ಸಹ ರಸ್ತೆ ಮೇಲೆ ನಿಲ್ಲುತ್ತಾರೆ. ಇದರಿಂದ ಯಾವಾಗಲೂ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುತ್ತದೆ ಎಂದು ಪ್ರತಿಭಟನಾ ನಿರತ ಆಟೋ ಚಾಲಕರು ಹೇಳಿದರು.<br /> <br /> ನಗರದ ಅಲಂಕಾರ ಸ್ಟೇಶನರಿಯಿಂದ ಕೆ.ಇ.ಬಿ. ವೃತ್ತದವರೆಗಿನ ರಸ್ತೆ ಕೇವಲ ಅರ್ಧ ಕಿಲೋ ಮೀಟರ್ ಅಂತರವಿದೆ. ನಿರಂತರ ಟ್ರಾಫಿಕ್ ಸಮಸ್ಯೆಯಿಂದ ಈ ರಸ್ತೆ ದಾಟಲು ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ.<br /> <br /> ಅನಗತ್ಯ ಸಮಯ ಹಾಳಾಗುವುದಕ್ಕೆ ಬೇಸತ್ತು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ನಡುವೆ ಒಂದಿಲ್ಲ ಒಂದು ಕಡೆ ಜಗಳ ನಡೆಯುತ್ತಲಿವೆ. ಇದು ಕೇವಲ ಒಂದು ದಿನದ ಮಾತಲ್ಲ ದಿನ ನಿತ್ಯದ ಗೋಳಾಗಿದೆ ಎಂದು ಆಟೋ ಚಾಲಕ ದ್ಯಾಮಣ್ಣ ಡೊಳ್ಳಿನ ತಮ್ಮ ಅಳಲು ತೋಡಿಕೊಂಡರು.<br /> <br /> ಟ್ರಾಫಿಕ್ನಲ್ಲಿ ತಾವು ಸಿಕ್ಕಿ ಹಾಕಿಕೊಳ್ಳುವುದರಿಂದ ಗ್ರಾಹಕರು ಆಟೋ ಬಿಟ್ಟು ಇಳಿದುಬಿಡುತ್ತಾರೆ. ಇದರಿಂದ ಪ್ರತಿದಿನ ನೂರು ರೂಪಾಯಿ ದುಡಿಯುವುದೇ ಕಷ್ಟವಾಗಿದೆ. ಕುಟುಂಬ ನಿರ್ವಹಣೆ ಸಾಧ್ಯವಾಗದೇ ಪರಿತಪಿಸಬೇಕಾಗಿದೆ.<br /> <br /> ನಮ್ಮ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲದೇ ನಮ್ಮ ವಾಹನ ಯಾವುದಾದರೂ ಬೇರೆ ವಾಹನಕ್ಕೆ ಟಚ್ ಆದರೆ ಸಾಕು, ವಾಹನ ಚಾಲಕರು ಐದನೂರು, ಸಾವಿರ ರೂಪಾಯಿ ಕೊಡು. ಇಲ್ಲವಾದರೆ, ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಬೆದರಿಕೆ ಹಾಕುತ್ತಾರೆ. ಈ ಎಲ್ಲ ಕಷ್ಟಗಳ ನಡುವೆ ಆಟೋ ಓಡಿಸುವುದೇ ಬೇಡ ಅನಿಸಿಬಿಟ್ಟಿದೆ ಎನ್ನುತ್ತಾರೆ ಆಟೋ ಚಾಲಕರು.<br /> <br /> ಅದೇ ರೀತಿ ಎತ್ತಿನಗಾಡಿ ಹಮಾಲರ ಪರಿಸ್ಥಿತಿಯೂ ಭಿನ್ನವೇನಿಲ್ಲ. ಅವರು ಸಹ ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಹೋಗಿದ್ದಾರಲ್ಲದೇ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಮಹ್ಮದ್ ಸಾದಿಕ್ ಆರೋಪಿಸುತ್ತಾರೆ.<br /> <br /> ಈ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಬೇಕಾದರೆ, ತಕ್ಷಣವೇ ತಳ್ಳುವ ಗಾಡಿ ವ್ಯಾಪಾರಿಗಳಿಗೆ ರೈತ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಲಾರಿಗಳಿಗೆ ರಸ್ತೆ ಮೇಲೆ ನಿಂತು ಅನ್ಲೋಡ್ ಮಾಡಲು ಸಮಯ ನಿಗದಿ ಮಾಡಬೇಕು. ಇಲ್ಲವಾದರೆ, ಈ ಸಮಸ್ಯೆಗೆ ಕೊನೆ ಎಂಬುದೇ ಇರುವುದಿಲ್ಲ. ತಕ್ಷಣವೇ ನಗರಸಭೆ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಾರೆ.<br /> <br /> ಪ್ರತಿಭಟನೆಯಲ್ಲಿ ಆಟೋ ಚಾಲಕರು, ಎತ್ತಿನ ಗಾಡಿ ಹಮಾಲರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ಪ್ರತಿನಿತ್ಯ ರಸ್ತೆಯಲ್ಲಿ ವಾಹನ ನಿಲ್ಲಿಸುವುದರಿಂದ ಆಗುತ್ತಿರುವ ಟ್ರಾಫಿಕ್ ಜಾಮ್ಗೆ ಬೇಸತ್ತು ಆಟೊ ಚಾಲಕರು ಹಾಗೂ ಎತ್ತಿನ ಗಾಡಿ ಹಮಾಲರು ರಸ್ತೆಯಲ್ಲಿ ಆಟೋ, ಎತ್ತಿನ ಗಾಡಿ ನಿಲ್ಲಿಸಿ ದೀಢಿರ್ ಪ್ರತಿಭಟನೆ ನಡೆಸಿದ ಘಟನೆ ನಗರದ ಲಾಲ್ಬಹುದ್ದೂರ ಶಾಸ್ತ್ರಿ ಮಾರುಕಟ್ಟೆ ರಸ್ತೆಯಲ್ಲಿ ನಡೆಯಿತು.<br /> <br /> ಆಟೊ ಚಾಲಕರು ಹಾಗೂ ಎತ್ತಿನ ಗಾಡಿ ಹಮಾಲರು ರಸ್ತೆ ಮಧ್ಯದಲ್ಲಿ ಗಾಡಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.<br /> <br /> ನಗರದ ಪ್ರಮುಖ ಕಾಯಿಪಲ್ಲೆ ಹಾಗೂ ಕಿರಾಣಿ ವಸ್ತುಗಳ ಮಾರುಕಟ್ಟೆಯಾಗಿದ್ದರಿಂದ ಪ್ರತಿನಿತ್ಯ ಲಾರಿಗಳು ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಅಷ್ಟೇ ಅಲ್ಲದೇ ಲಾರಿ, ಮಿನಿ ಲಾರಿಗಳು ರಸ್ತೆ ಮೇಲೆ ನಿಂತುಕೊಂಡೆ ತಾಸುಗಟ್ಟಲೆ ಅನ್ ಮಾಡುತ್ತವೆ. <br /> <br /> ಈ ನಡುವೆ ತಳ್ಳುಗಾಡಿ ವ್ಯಾಪಾರಿಗಳು ಸಹ ರಸ್ತೆ ಮೇಲೆ ನಿಲ್ಲುತ್ತಾರೆ. ಇದರಿಂದ ಯಾವಾಗಲೂ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇರುತ್ತದೆ ಎಂದು ಪ್ರತಿಭಟನಾ ನಿರತ ಆಟೋ ಚಾಲಕರು ಹೇಳಿದರು.<br /> <br /> ನಗರದ ಅಲಂಕಾರ ಸ್ಟೇಶನರಿಯಿಂದ ಕೆ.ಇ.ಬಿ. ವೃತ್ತದವರೆಗಿನ ರಸ್ತೆ ಕೇವಲ ಅರ್ಧ ಕಿಲೋ ಮೀಟರ್ ಅಂತರವಿದೆ. ನಿರಂತರ ಟ್ರಾಫಿಕ್ ಸಮಸ್ಯೆಯಿಂದ ಈ ರಸ್ತೆ ದಾಟಲು ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ.<br /> <br /> ಅನಗತ್ಯ ಸಮಯ ಹಾಳಾಗುವುದಕ್ಕೆ ಬೇಸತ್ತು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ನಡುವೆ ಒಂದಿಲ್ಲ ಒಂದು ಕಡೆ ಜಗಳ ನಡೆಯುತ್ತಲಿವೆ. ಇದು ಕೇವಲ ಒಂದು ದಿನದ ಮಾತಲ್ಲ ದಿನ ನಿತ್ಯದ ಗೋಳಾಗಿದೆ ಎಂದು ಆಟೋ ಚಾಲಕ ದ್ಯಾಮಣ್ಣ ಡೊಳ್ಳಿನ ತಮ್ಮ ಅಳಲು ತೋಡಿಕೊಂಡರು.<br /> <br /> ಟ್ರಾಫಿಕ್ನಲ್ಲಿ ತಾವು ಸಿಕ್ಕಿ ಹಾಕಿಕೊಳ್ಳುವುದರಿಂದ ಗ್ರಾಹಕರು ಆಟೋ ಬಿಟ್ಟು ಇಳಿದುಬಿಡುತ್ತಾರೆ. ಇದರಿಂದ ಪ್ರತಿದಿನ ನೂರು ರೂಪಾಯಿ ದುಡಿಯುವುದೇ ಕಷ್ಟವಾಗಿದೆ. ಕುಟುಂಬ ನಿರ್ವಹಣೆ ಸಾಧ್ಯವಾಗದೇ ಪರಿತಪಿಸಬೇಕಾಗಿದೆ.<br /> <br /> ನಮ್ಮ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲದೇ ನಮ್ಮ ವಾಹನ ಯಾವುದಾದರೂ ಬೇರೆ ವಾಹನಕ್ಕೆ ಟಚ್ ಆದರೆ ಸಾಕು, ವಾಹನ ಚಾಲಕರು ಐದನೂರು, ಸಾವಿರ ರೂಪಾಯಿ ಕೊಡು. ಇಲ್ಲವಾದರೆ, ಪೊಲೀಸ್ ಠಾಣೆಗೆ ದೂರು ಕೊಡುವುದಾಗಿ ಬೆದರಿಕೆ ಹಾಕುತ್ತಾರೆ. ಈ ಎಲ್ಲ ಕಷ್ಟಗಳ ನಡುವೆ ಆಟೋ ಓಡಿಸುವುದೇ ಬೇಡ ಅನಿಸಿಬಿಟ್ಟಿದೆ ಎನ್ನುತ್ತಾರೆ ಆಟೋ ಚಾಲಕರು.<br /> <br /> ಅದೇ ರೀತಿ ಎತ್ತಿನಗಾಡಿ ಹಮಾಲರ ಪರಿಸ್ಥಿತಿಯೂ ಭಿನ್ನವೇನಿಲ್ಲ. ಅವರು ಸಹ ಟ್ರಾಫಿಕ್ ಕಿರಿಕಿರಿಗೆ ಬೇಸತ್ತು ಹೋಗಿದ್ದಾರಲ್ಲದೇ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಲ್ಲಿ ನಗರಸಭೆ ವಿಫಲವಾಗಿದೆ ಎಂದು ಮಹ್ಮದ್ ಸಾದಿಕ್ ಆರೋಪಿಸುತ್ತಾರೆ.<br /> <br /> ಈ ಟ್ರಾಫಿಕ್ ಸಮಸ್ಯೆ ನಿವಾರಣೆ ಆಗಬೇಕಾದರೆ, ತಕ್ಷಣವೇ ತಳ್ಳುವ ಗಾಡಿ ವ್ಯಾಪಾರಿಗಳಿಗೆ ರೈತ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಲಾರಿಗಳಿಗೆ ರಸ್ತೆ ಮೇಲೆ ನಿಂತು ಅನ್ಲೋಡ್ ಮಾಡಲು ಸಮಯ ನಿಗದಿ ಮಾಡಬೇಕು. ಇಲ್ಲವಾದರೆ, ಈ ಸಮಸ್ಯೆಗೆ ಕೊನೆ ಎಂಬುದೇ ಇರುವುದಿಲ್ಲ. ತಕ್ಷಣವೇ ನಗರಸಭೆ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಾರೆ.<br /> <br /> ಪ್ರತಿಭಟನೆಯಲ್ಲಿ ಆಟೋ ಚಾಲಕರು, ಎತ್ತಿನ ಗಾಡಿ ಹಮಾಲರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>