<p>ಕುಂದಾಪುರ: `ರಾಜ್ಯದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಮುಳುಗಿದ್ದು ಆಡಳಿತ ನಡೆಸಲು ವಿಫಲವಾಗಿದೆ. ಇದನ್ನು ಸಮರ್ಥ ಬಿಂಬಿಸಿ ಆಡಳಿತ ಪಕ್ಷಕ್ಕೆ ನೀತಿ ಪಾಠವನ್ನು ಹೇಳಬೇಕಾದ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿಯೂ ವೈಫಲ್ಯ ಕಂಡಿದೆ~ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್ ಭೋಜೆ ಗೌಡ ಆರೋಪಿಸಿದರು.<br /> <br /> ನಗರದ ಹೋಟೇಲ್ ಹರಿಪ್ರಸಾದ್ನ ಅಕ್ಷತಾ ಸಭಾಂಗಣದಲ್ಲಿ ಗುರುವಾರನಡೆದ ಜೆಡಿಎಸ್ ಪಕ್ಷದ ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.<br /> <br /> `ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಜವಾಬ್ದಾರಿಯ ವಿಫಲತೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಲೋಕಸಭಾ ಕ್ಷೇತ್ರದ ಉಪಚುನಾವಣೆ ರಾಜ್ಯದ ರಾಜಕೀಯಕ್ಕೆ ಹೊಸ ದಿಕ್ಸೂಚಿಯಾಗಿ ಪರಿಣಮಿಸಲಿದೆ ರಾಜ್ಯದಲ್ಲಿನ ಜ್ಯಾತ್ಯಾತೀತ ಮತಗಳ ಧ್ರುವೀಕರಣಕ್ಕೆ ಇದು ವೇದಿಕೆಯಾಗಲಿದೆ.<br /> <br /> ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ರೈತರು, ಮೀನುಗಾರರು, ಬಡವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ನೀಡಿರುವ ಯೋಜನೆಗಳೆ ತನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ~ ಎಂದರು.<br /> <br /> ಮುಖಂಡರಾದ ಮಹೇಂದ್ರ ಕುಮಾರ, ದೇವಿಪ್ರಸಾದ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್, ಎನ್.ಸಬ್ಲಾಡಿ ಮಂಜಯ್ಯ ಶೆಟ್ಟಿ, ಅಂಪಾರು ಬಾಲಕೃಷ್ಣ ಶೆಟ್ಟಿ, ಶ್ರೀಕಾಂತ ಅಡಿಗ, ರಂಜಿತ್ ಕುಮಾರ ಶೆಟ್ಟಿ, ಜಗದೀಶ್ ಯಡಿಯಾಳ, ಕಿಶೋರ , ಅಲೆಕ್ಸಾಂಡರ್, ರುಕ್ಕು ಪೂಜಾರ್ತಿ, ರಾಧಾದಾಸ್, ಸಂದೇಶ್ ಭಟ್, ಮನ್ಸೂರ್ ಹಾಗೂ ಇಬ್ರಾಹಿಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಂದಾಪುರ: `ರಾಜ್ಯದಲ್ಲಿ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಮುಳುಗಿದ್ದು ಆಡಳಿತ ನಡೆಸಲು ವಿಫಲವಾಗಿದೆ. ಇದನ್ನು ಸಮರ್ಥ ಬಿಂಬಿಸಿ ಆಡಳಿತ ಪಕ್ಷಕ್ಕೆ ನೀತಿ ಪಾಠವನ್ನು ಹೇಳಬೇಕಾದ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುವಲ್ಲಿಯೂ ವೈಫಲ್ಯ ಕಂಡಿದೆ~ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್ ಭೋಜೆ ಗೌಡ ಆರೋಪಿಸಿದರು.<br /> <br /> ನಗರದ ಹೋಟೇಲ್ ಹರಿಪ್ರಸಾದ್ನ ಅಕ್ಷತಾ ಸಭಾಂಗಣದಲ್ಲಿ ಗುರುವಾರನಡೆದ ಜೆಡಿಎಸ್ ಪಕ್ಷದ ಕುಂದಾಪುರ ಕ್ಷೇತ್ರ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.<br /> <br /> `ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳ ಜವಾಬ್ದಾರಿಯ ವಿಫಲತೆಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ಲೋಕಸಭಾ ಕ್ಷೇತ್ರದ ಉಪಚುನಾವಣೆ ರಾಜ್ಯದ ರಾಜಕೀಯಕ್ಕೆ ಹೊಸ ದಿಕ್ಸೂಚಿಯಾಗಿ ಪರಿಣಮಿಸಲಿದೆ ರಾಜ್ಯದಲ್ಲಿನ ಜ್ಯಾತ್ಯಾತೀತ ಮತಗಳ ಧ್ರುವೀಕರಣಕ್ಕೆ ಇದು ವೇದಿಕೆಯಾಗಲಿದೆ.<br /> <br /> ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ರೈತರು, ಮೀನುಗಾರರು, ಬಡವರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ನೀಡಿರುವ ಯೋಜನೆಗಳೆ ತನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ~ ಎಂದರು.<br /> <br /> ಮುಖಂಡರಾದ ಮಹೇಂದ್ರ ಕುಮಾರ, ದೇವಿಪ್ರಸಾದ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್, ಎನ್.ಸಬ್ಲಾಡಿ ಮಂಜಯ್ಯ ಶೆಟ್ಟಿ, ಅಂಪಾರು ಬಾಲಕೃಷ್ಣ ಶೆಟ್ಟಿ, ಶ್ರೀಕಾಂತ ಅಡಿಗ, ರಂಜಿತ್ ಕುಮಾರ ಶೆಟ್ಟಿ, ಜಗದೀಶ್ ಯಡಿಯಾಳ, ಕಿಶೋರ , ಅಲೆಕ್ಸಾಂಡರ್, ರುಕ್ಕು ಪೂಜಾರ್ತಿ, ರಾಧಾದಾಸ್, ಸಂದೇಶ್ ಭಟ್, ಮನ್ಸೂರ್ ಹಾಗೂ ಇಬ್ರಾಹಿಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>