<p><strong>ಯಲಹಂಕ: </strong>`ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕೇಂದ್ರ ಮೀಸಲು ಆರಕ್ಷಕ ಪಡೆಯ ತರಬೇತಿ ಸಂಸ್ಥೆಗಳನ್ನು ತೆರೆಯಲಾಗುವುದು. ಅಲ್ಲಿ ಮಹಿಳಾ ಮತ್ತು ಪುರುಷ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುವುದು' ಎಂದು ಕರ್ನಾಟಕ ಮತ್ತು ಕೇರಳ ವಲಯ ಕೇಂದ್ರ ಮೀಸಲು ಆರಕ್ಷಕ ಪಡೆಯ ಮಹಾನಿರೀಕ್ಷಕ ಕೆ.ಅರ್ಕೇಶ್ ತಿಳಿಸಿದರು.<br /> <br /> ಇಲ್ಲಿನ ಕೇಂದ್ರ ಮೀಸಲು ಆರಕ್ಷಕ ಪಡೆ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಮೈಸೂರಿನಲ್ಲಿ 1,000 ಮಹಿಳಾ ಬೆಟಾಲಿಯನ್, ಶಿವಮೊಗ್ಗದಲ್ಲಿ ಮಹಿಳಾ ಹಾಗೂ ಪುರುಷ ಬೆಟಾಲಿಯನ್ಗೆ ಸಾಮೂಹಿಕ ತರಬೇತಿ ಕೇಂದ್ರ ತೆರೆಯಲಾಗುವುದು.<br /> ಯಲಹಂಕ ಕೇಂದ್ರದಲ್ಲಿನ ಹೆಚ್ಚುವರಿ ಸಿಬ್ಬಂದಿಯನ್ನು ಈ ಎರಡೂ ಕೇಂದ್ರಗಳಿಗೆ ಕಳುಹಿಸಲಾಗುವುದು' ಎಂದರು.<br /> <br /> `ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಂಗಲ್ ಕ್ರಾಫ್ಟ್ ಆರಂಭಿಸಿ, ಇಲ್ಲಿ ತರಬೇತಿ ಪಡೆದವನ್ನು ನಕ್ಸಲ್ಪೀಡಿತ ಪ್ರದೇಶ, ಭಯೋತ್ಪಾದನೆ, ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಲಾಗುವುದು. ಅಲ್ಲದೆ ಅವರಿಗೆ ಗೆರಿಲ್ಲಾ ಮಾದರಿಯ ತರಬೇತಿಯನ್ನು ನೀಡಲಾಗುವುದು' ಎಂದು ತಿಳಿಸಿದರು.<br /> <br /> <strong>ನಿವೃತ್ತಿ: </strong>ಅವರು ಸೇವೆಯಿಂದ ಶುಕ್ರವಾರ ನಿವೃತ್ತಿಯಾದರು. `ತಾನು ಮುಂದೆ ಸ್ವಯಂಸೇವಾ ಸಂಸ್ಥೆ ಸ್ಥಾಪನೆ ಮಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಯುವಕರ ಅಂತರ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.<br /> <br /> `ಗ್ರಾಮೀಣ ಭಾಗದ ಯುವಕರು ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಶಿಕ್ಷಣ, ಚಾಲನಾ ಕೌಶಲದಲ್ಲಿ ಹಿಂದುಳಿದಿದ್ದಾರೆ. ತಾನು ಸ್ಥಾಪಿಸಲಿರುವ ಅಕಾಡೆಮಿ ಮೂಲಕ ಗ್ರಾಮೀಣ ಯುವಕರ ಕೌಶಲವನ್ನು ಬಲಪಡಿಸಲು ಪ್ರಯತ್ನಿಸುತ್ತೇನೆ' ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>`ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಕೇಂದ್ರ ಮೀಸಲು ಆರಕ್ಷಕ ಪಡೆಯ ತರಬೇತಿ ಸಂಸ್ಥೆಗಳನ್ನು ತೆರೆಯಲಾಗುವುದು. ಅಲ್ಲಿ ಮಹಿಳಾ ಮತ್ತು ಪುರುಷ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುವುದು' ಎಂದು ಕರ್ನಾಟಕ ಮತ್ತು ಕೇರಳ ವಲಯ ಕೇಂದ್ರ ಮೀಸಲು ಆರಕ್ಷಕ ಪಡೆಯ ಮಹಾನಿರೀಕ್ಷಕ ಕೆ.ಅರ್ಕೇಶ್ ತಿಳಿಸಿದರು.<br /> <br /> ಇಲ್ಲಿನ ಕೇಂದ್ರ ಮೀಸಲು ಆರಕ್ಷಕ ಪಡೆ ಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಮೈಸೂರಿನಲ್ಲಿ 1,000 ಮಹಿಳಾ ಬೆಟಾಲಿಯನ್, ಶಿವಮೊಗ್ಗದಲ್ಲಿ ಮಹಿಳಾ ಹಾಗೂ ಪುರುಷ ಬೆಟಾಲಿಯನ್ಗೆ ಸಾಮೂಹಿಕ ತರಬೇತಿ ಕೇಂದ್ರ ತೆರೆಯಲಾಗುವುದು.<br /> ಯಲಹಂಕ ಕೇಂದ್ರದಲ್ಲಿನ ಹೆಚ್ಚುವರಿ ಸಿಬ್ಬಂದಿಯನ್ನು ಈ ಎರಡೂ ಕೇಂದ್ರಗಳಿಗೆ ಕಳುಹಿಸಲಾಗುವುದು' ಎಂದರು.<br /> <br /> `ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಂಗಲ್ ಕ್ರಾಫ್ಟ್ ಆರಂಭಿಸಿ, ಇಲ್ಲಿ ತರಬೇತಿ ಪಡೆದವನ್ನು ನಕ್ಸಲ್ಪೀಡಿತ ಪ್ರದೇಶ, ಭಯೋತ್ಪಾದನೆ, ಪ್ರಕೃತಿ ವಿಕೋಪದಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಬಳಸಿಕೊಳ್ಳಲಾಗುವುದು. ಅಲ್ಲದೆ ಅವರಿಗೆ ಗೆರಿಲ್ಲಾ ಮಾದರಿಯ ತರಬೇತಿಯನ್ನು ನೀಡಲಾಗುವುದು' ಎಂದು ತಿಳಿಸಿದರು.<br /> <br /> <strong>ನಿವೃತ್ತಿ: </strong>ಅವರು ಸೇವೆಯಿಂದ ಶುಕ್ರವಾರ ನಿವೃತ್ತಿಯಾದರು. `ತಾನು ಮುಂದೆ ಸ್ವಯಂಸೇವಾ ಸಂಸ್ಥೆ ಸ್ಥಾಪನೆ ಮಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಯುವಕರ ಅಂತರ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದರು.<br /> <br /> `ಗ್ರಾಮೀಣ ಭಾಗದ ಯುವಕರು ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಶಿಕ್ಷಣ, ಚಾಲನಾ ಕೌಶಲದಲ್ಲಿ ಹಿಂದುಳಿದಿದ್ದಾರೆ. ತಾನು ಸ್ಥಾಪಿಸಲಿರುವ ಅಕಾಡೆಮಿ ಮೂಲಕ ಗ್ರಾಮೀಣ ಯುವಕರ ಕೌಶಲವನ್ನು ಬಲಪಡಿಸಲು ಪ್ರಯತ್ನಿಸುತ್ತೇನೆ' ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>