<p>ನವದೆಹಲಿ (ಪಿಟಿಐ): ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (ಆರ್ಆರ್ಬಿ) ರೂ 632 ಕೋಟಿಗಳಷ್ಟು ಬಂಡವಾಳ ನೆರವು ಒದಗಿಸಲು ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. <br /> <br /> `ಆರ್ಆರ್ಬಿ~ಗಳಿಗೆ ಅಗತ್ಯವಿರುವಷ್ಟು ಮೂಲಧನ ಒದಗಿಸುವುದು ಮತ್ತು ಬ್ಯಾಂಕುಗಳ ಕೃಷಿ ಸಾಲ ಸಾಮರ್ಥ್ಯ ಹೆಚ್ಚಿಸಲು ಈ ನೆರವು ನೀಡಲಾಗುತ್ತಿದೆ~ ಎಂದು ಸಚಿವರೊಬ್ಬರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. <br /> <br /> ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಅಧ್ಯಕ್ಷತೆಯಲ್ಲಿನ ಸಮಿತಿ ನೀಡಿದ ಶಿಫಾರಸು ಆಧರಿಸಿ ಈ ನೆರವು ನೀಡಲಾಗುತ್ತಿದೆ. <br /> <br /> ಕೇಂದ್ರ ಸರ್ಕಾರ 2009-10ನೇ ಸಾಲಿನಿಂದಲೂ ನಷ್ಟಪೀಡಿತ 40 ಪ್ರಾದೇಶೀಕ ಗ್ರಾಮೀಣ ಬ್ಯಾಂಕುಗಳಿಗೆ ಅಗತ್ಯವಿರುವ ಮೂಲಧನ ಒದಗಿಸುತ್ತಾ ಬಂದಿದೆ. ಈ ಬ್ಯಾಂಕುಗಳು ಮುಖ್ಯವಾಗಿ ಗ್ರಾಮೀಣ ಮತ್ತು ಕೃಷಿ ವಲಯಗಳಿಗೆ ಸಾಲ ನೀಡುತ್ತವೆ. <br /> <br /> ಕಳೆದ ಮಾರ್ಚ್ 2012ರ ವರೆಗೆ ಕೇಂದ್ರ ಸರ್ಕಾರ 16 `ಆರ್ಆರ್ಬಿ~ಗಳಿಗೆ ಬಂಡವಾಳ ನೆರವು ಒದಗಿಸಿದೆ. ಆದರೆ, ರಾಜ್ಯಗಳು ಇದುವರೆಗೆ ತಮ್ಮ ಪಾಲಿನ ಬಂಡವಾಳ ಬಿಡುಗಡೆ ಮಾಡಿಲ್ಲ .ಒಂದು ವೇಳೆ ರಾಜ್ಯಗಳು ಮತ್ತು ಷೇರುದಾರರು ತಮ್ಮ ಪಾಲಿನ ಕೊಡುಗೆ ನೀಡಿದರೆ ಈ ಬ್ಯಾಂಕುಗಳು ಸುಮಾರು ರೂ 1,264 ಕೋಟಿಗಳಷ್ಟು ಬಂಡವಾಳ ನೆರವು ಪಡೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. <br /> <br /> ನಷ್ಟಪೀಡಿತ `ಆರ್ಆರ್ಬಿ~ಗಳಿಗೆ ಮೂಲಧನ ಒದಗಿಸುವಿಕೆಯಲ್ಲಿ ಕೇಂದ್ರದ ಪಾಲು ಶೇ 50ರಷ್ಟಿದ್ದರೆ, ರಾಜ್ಯದ ಪಾಲು ಶೇ 15. ಇನ್ನುಳಿದ ಶೇ 35ರಷ್ಟು ಬಂಡವಾಳವನ್ನು ಪ್ರಾಯೋಜಿತ ಬ್ಯಾಂಕ್ ನೀಡುತ್ತದೆ. ಸದ್ಯ ದೇಶದಲ್ಲಿ 82 `ಆರ್ಆರ್ಬಿ~ಗಳಿದ್ದು, ಹೆಚ್ಚಿನ ಬ್ಯಾಂಕುಗಳು `ಕೋರ್~ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿವೆ. <br /> <br /> ಮೂಲಧನ ಒದಗಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಂಡವಾಳ ನೆರವು ಯೋಜನೆಯನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ (ಆರ್ಆರ್ಬಿ) ರೂ 632 ಕೋಟಿಗಳಷ್ಟು ಬಂಡವಾಳ ನೆರವು ಒದಗಿಸಲು ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. <br /> <br /> `ಆರ್ಆರ್ಬಿ~ಗಳಿಗೆ ಅಗತ್ಯವಿರುವಷ್ಟು ಮೂಲಧನ ಒದಗಿಸುವುದು ಮತ್ತು ಬ್ಯಾಂಕುಗಳ ಕೃಷಿ ಸಾಲ ಸಾಮರ್ಥ್ಯ ಹೆಚ್ಚಿಸಲು ಈ ನೆರವು ನೀಡಲಾಗುತ್ತಿದೆ~ ಎಂದು ಸಚಿವರೊಬ್ಬರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. <br /> <br /> ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಅಧ್ಯಕ್ಷತೆಯಲ್ಲಿನ ಸಮಿತಿ ನೀಡಿದ ಶಿಫಾರಸು ಆಧರಿಸಿ ಈ ನೆರವು ನೀಡಲಾಗುತ್ತಿದೆ. <br /> <br /> ಕೇಂದ್ರ ಸರ್ಕಾರ 2009-10ನೇ ಸಾಲಿನಿಂದಲೂ ನಷ್ಟಪೀಡಿತ 40 ಪ್ರಾದೇಶೀಕ ಗ್ರಾಮೀಣ ಬ್ಯಾಂಕುಗಳಿಗೆ ಅಗತ್ಯವಿರುವ ಮೂಲಧನ ಒದಗಿಸುತ್ತಾ ಬಂದಿದೆ. ಈ ಬ್ಯಾಂಕುಗಳು ಮುಖ್ಯವಾಗಿ ಗ್ರಾಮೀಣ ಮತ್ತು ಕೃಷಿ ವಲಯಗಳಿಗೆ ಸಾಲ ನೀಡುತ್ತವೆ. <br /> <br /> ಕಳೆದ ಮಾರ್ಚ್ 2012ರ ವರೆಗೆ ಕೇಂದ್ರ ಸರ್ಕಾರ 16 `ಆರ್ಆರ್ಬಿ~ಗಳಿಗೆ ಬಂಡವಾಳ ನೆರವು ಒದಗಿಸಿದೆ. ಆದರೆ, ರಾಜ್ಯಗಳು ಇದುವರೆಗೆ ತಮ್ಮ ಪಾಲಿನ ಬಂಡವಾಳ ಬಿಡುಗಡೆ ಮಾಡಿಲ್ಲ .ಒಂದು ವೇಳೆ ರಾಜ್ಯಗಳು ಮತ್ತು ಷೇರುದಾರರು ತಮ್ಮ ಪಾಲಿನ ಕೊಡುಗೆ ನೀಡಿದರೆ ಈ ಬ್ಯಾಂಕುಗಳು ಸುಮಾರು ರೂ 1,264 ಕೋಟಿಗಳಷ್ಟು ಬಂಡವಾಳ ನೆರವು ಪಡೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ. <br /> <br /> ನಷ್ಟಪೀಡಿತ `ಆರ್ಆರ್ಬಿ~ಗಳಿಗೆ ಮೂಲಧನ ಒದಗಿಸುವಿಕೆಯಲ್ಲಿ ಕೇಂದ್ರದ ಪಾಲು ಶೇ 50ರಷ್ಟಿದ್ದರೆ, ರಾಜ್ಯದ ಪಾಲು ಶೇ 15. ಇನ್ನುಳಿದ ಶೇ 35ರಷ್ಟು ಬಂಡವಾಳವನ್ನು ಪ್ರಾಯೋಜಿತ ಬ್ಯಾಂಕ್ ನೀಡುತ್ತದೆ. ಸದ್ಯ ದೇಶದಲ್ಲಿ 82 `ಆರ್ಆರ್ಬಿ~ಗಳಿದ್ದು, ಹೆಚ್ಚಿನ ಬ್ಯಾಂಕುಗಳು `ಕೋರ್~ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿಕೊಂಡಿವೆ. <br /> <br /> ಮೂಲಧನ ಒದಗಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಂಡವಾಳ ನೆರವು ಯೋಜನೆಯನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>