<p><strong>ಹುಬ್ಬಳ್ಳಿ:</strong> ಇಲ್ಲಿಯ ಎಸ್.ಎಸ್. ಕೃಷ್ಣನಗರದಲ್ಲಿ ನಿರ್ಮಿಸಲಾದ ಆಶ್ರಯ ಮನೆಗಳಲ್ಲಿ ವಾಸವಾಗಿರುವ ಜನರನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರು ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಸಭೆ ಪಾಲಿಕೆಯನ್ನು ಆಗ್ರಹಿಸಿತು.<br /> <br /> ಯಾವುದೇ ಸೌಲಭ್ಯಗಳು ಇಲ್ಲವೆಂದು ಮುಂಚಿನ ಫಲಾನುಭವಿಗಳು ಇಲ್ಲಿಯ ಮನೆಗಳನ್ನು ತೊರೆದು ಹೋಗಿದ್ದರು. ಯಾವುದೇ ಸೂರು ಇಲ್ಲದವರು 8-10 ವರ್ಷಗಳಿಂದ ಈ ಮನೆಗಳಲ್ಲಿ ವಾಸವಾಗಿದ್ದು, ಪಾಲಿಕೆ ಕಚೇರಿಯಲ್ಲಿ ತಮ್ಮ ಹೆಸರನ್ನೇ ದಾಖಲಿಸಿ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಕಿತ್ತೂರು ಹೇಳಿದರು.</p>.<p><br /> ಇಲ್ಲಿಯ ಆಶ್ರಯ ಬಡಾವಣೆಗಳಲ್ಲಿ 1,600 ಮನೆಗಳಿದ್ದು, 700 ಮನೆಗಳ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಆ ನೋಟಿಸ್ ಹಿಂಪಡೆದು, ಹಾಲಿ ವಾಸವಾಗಿರುವ ಜನಕ್ಕೆ ಆ ಮನೆಗಳನ್ನು ಬಿಟ್ಟು ಕೊಡಬೇಕು ಎಂದು ಅವರು ಒತ್ತಾಯಿಸಿದರು. ಗೌಸುಸಾಬ್ ಕಾರಡಗಿ, ದೇವೇಂದ್ರಪ್ಪ ಇಟಗಿ, ಶಬ್ಬೀರ್ ನದಾಫ್, ರಾಜು ಮುಕ್ತಿಯಾರ್ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇಲ್ಲಿಯ ಎಸ್.ಎಸ್. ಕೃಷ್ಣನಗರದಲ್ಲಿ ನಿರ್ಮಿಸಲಾದ ಆಶ್ರಯ ಮನೆಗಳಲ್ಲಿ ವಾಸವಾಗಿರುವ ಜನರನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರು ನೇತೃತ್ವದಲ್ಲಿ ನಡೆದ ಸಾರ್ವಜನಿಕರ ಸಭೆ ಪಾಲಿಕೆಯನ್ನು ಆಗ್ರಹಿಸಿತು.<br /> <br /> ಯಾವುದೇ ಸೌಲಭ್ಯಗಳು ಇಲ್ಲವೆಂದು ಮುಂಚಿನ ಫಲಾನುಭವಿಗಳು ಇಲ್ಲಿಯ ಮನೆಗಳನ್ನು ತೊರೆದು ಹೋಗಿದ್ದರು. ಯಾವುದೇ ಸೂರು ಇಲ್ಲದವರು 8-10 ವರ್ಷಗಳಿಂದ ಈ ಮನೆಗಳಲ್ಲಿ ವಾಸವಾಗಿದ್ದು, ಪಾಲಿಕೆ ಕಚೇರಿಯಲ್ಲಿ ತಮ್ಮ ಹೆಸರನ್ನೇ ದಾಖಲಿಸಿ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು ಕಿತ್ತೂರು ಹೇಳಿದರು.</p>.<p><br /> ಇಲ್ಲಿಯ ಆಶ್ರಯ ಬಡಾವಣೆಗಳಲ್ಲಿ 1,600 ಮನೆಗಳಿದ್ದು, 700 ಮನೆಗಳ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪಾಲಿಕೆ ಅಧಿಕಾರಿಗಳು ಆ ನೋಟಿಸ್ ಹಿಂಪಡೆದು, ಹಾಲಿ ವಾಸವಾಗಿರುವ ಜನಕ್ಕೆ ಆ ಮನೆಗಳನ್ನು ಬಿಟ್ಟು ಕೊಡಬೇಕು ಎಂದು ಅವರು ಒತ್ತಾಯಿಸಿದರು. ಗೌಸುಸಾಬ್ ಕಾರಡಗಿ, ದೇವೇಂದ್ರಪ್ಪ ಇಟಗಿ, ಶಬ್ಬೀರ್ ನದಾಫ್, ರಾಜು ಮುಕ್ತಿಯಾರ್ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>