<p><strong>ಗಂಗಾವತಿ: </strong>ನಗರಕ್ಕೆ ಮಂಜೂರಾಗಿದ್ದ ₨10.46 ಕೋಟಿ ಮೊತ್ತದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಾಲಗ್ರಹ ಹಿಡಿದಿದ್ದು, ಇದೀಗ ಅನುದಾನ ವಾಪಾಸಾಗುವ ಆತಂಕ ಎದುರಾಗಿದೆ.<br /> <br /> ನಬಾರ್ಡಿನ ಆರ್ಐಡಿಎಫ್ ಯೋಜನೆಯಲ್ಲಿ ಕರ್ನಾಟಕ ಮಾದರಿ ಆರೋಗ್ಯ ಸುಧಾರಣಾ ಅಭಿವೃದ್ಧಿ ಕಾರ್ಯಕ್ರಮದಡಿ (ಕೆಎಚ್ಎಸ್ಆರ್ಡಿಪಿ) 2013ರ ಜೂನ್ ತಿಂಗಳಲ್ಲಿ ರಾಜ್ಯದ 31 ಕೇಂದ್ರಗಳ ಪೈಕಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಗಂಗಾವತಿಗೆ ಯೋಜನೆ ಮಂಜೂರಾಗಿತ್ತು.<br /> <br /> ಯೋಜನೆ ಮಂಜೂರಾಗಿ ಒಂಭತ್ತು ತಿಂಗಳು ಕಳೆದಿದೆ. ಆದರೆ ಆಸ್ಪತ್ರೆಗೆ ಬೇಕಾಗುವ ಐದು ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ.<br /> <br /> <strong>ಯೋಜನೆಯ ವಿವರ:</strong>ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಮಾಸಿಕ 200ರಿಂದ 250, ಗ್ರಾಮೀಣ ಭಾಗದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 600ರಿಂದ 660, ತಾಲ್ಲೂಕಿನಲ್ಲಿ ಒಟ್ಟು ಮಾಸಿಕ ಸರಾಸರಿ 800–880 ಹೆರಿಗೆಯಾಗುತ್ತಿವೆ. <br /> <br /> ಆಯಾ ತಾಲ್ಲೂಕಿನಲ್ಲಾಗುವ ಹೆರಿಗೆ ಪ್ರಮಾಣ, ತಾಯಿ ಮಕ್ಕಳ ಆರೋಗ್ಯ ರಕ್ಷಣೆ ಉದ್ದೇಶದಿಂದ ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 1,25 ಲಕ್ಷ ಮಹಿಳೆ ಮತ್ತು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಪತ್ರೆ ಮಂಜೂರು ಮಾಡಲಾಗಿತ್ತು.<br /> ಸ್ಥಳದ ಕೊರತೆ: ಗಂಗಾವತಿಯಲ್ಲಿ ಒಂದು ಎಕರೆ ಜಮೀನಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ. ಈ ಹಿನ್ನೆಲೆ ಖಾಸಗಿ ಜಮೀನು ಖರೀದಿ ಅಸಾಧ್ಯ. ಹೀಗಾಗಿ ಶಾಸಕರು 2013ರ ಸೆಪ್ಟಂಬರ್ನಲ್ಲಿ ಸರ್ಕಾರಿ ಜಮೀನು ನೀಡುವಂತೆ ತಹಶೀಲ್ದಾರಿಗೆ ಸೂಚನೆ ನೀಡಿದ್ದರು. <br /> <br /> ವಿವಿಧ ಸರ್ವೇ ನಂಬರ್ನಲ್ಲಿ ನಿವೇಶನ ಹುಡುಕಾಡಿದ ತಹಶೀಲ್ದಾರರು ಸರ್ವೇ ನಂಬರ್ 53ರಲ್ಲಿ ಜಮೀನು ತೋರಿಸಿ ಮುಂದಿನ ಆದೇಶಕ್ಕೆ ಉಪವಿಭಾಗಾಧಿಕಾರಿ ಕಚೇರಿಗೆ ಕಡತ ರವಾನಿಸಿದ್ದಾರೆ. ಆದರೆ ಕಡತ ವಿಲೇವಾರಿಯಾಗದೇ ಐದು ತಿಂಗಳು ಕಳೆದಿವೆ.<br /> <br /> ’ನಾವು ಶಾಸಕರನ್ನು ಭೇಟಿಯಾದ ಬಳಿಕ ಈಗಾಗಲೆ ಎರಡು ಬಾರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿವೇಶನ ಮಂಜೂರಾತಿಗೆ ಬೇಡಿಕೆ ಇಟ್ಟಿದ್ದೆವು. ಮುಂದಿನದ್ದು ಹಿರಿಯ ಅಧಿಕಾರಿಗಳಿಗೆ ಬಿಟ್ಟದ್ದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಗೌರಿಶಂಕರ ಹೇಳಿದ್ದಾರೆ.<br /> <br /> 60 ಹಾಸಿಗೆ ಆಸ್ಪತ್ರೆಯ ಕಟ್ಟಡಕ್ಕೆ 24 ತಿಂಗಳ ಸಮಯದ ಗಡುವು ವಿಧಿಸಲಾಗಿದೆ. ಯೋಜನೆ ಜಾರಿಯಾಗಿ ಈಗಾಗಲೆ ಹತ್ತು ತಿಂಗಳು ಕಳೆದಿವೆ. ವಿಳಂಬದ ಕಾರಣ ಅನುದಾನ ವಾಪಾಸಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ನಗರಕ್ಕೆ ಮಂಜೂರಾಗಿದ್ದ ₨10.46 ಕೋಟಿ ಮೊತ್ತದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಾಲಗ್ರಹ ಹಿಡಿದಿದ್ದು, ಇದೀಗ ಅನುದಾನ ವಾಪಾಸಾಗುವ ಆತಂಕ ಎದುರಾಗಿದೆ.<br /> <br /> ನಬಾರ್ಡಿನ ಆರ್ಐಡಿಎಫ್ ಯೋಜನೆಯಲ್ಲಿ ಕರ್ನಾಟಕ ಮಾದರಿ ಆರೋಗ್ಯ ಸುಧಾರಣಾ ಅಭಿವೃದ್ಧಿ ಕಾರ್ಯಕ್ರಮದಡಿ (ಕೆಎಚ್ಎಸ್ಆರ್ಡಿಪಿ) 2013ರ ಜೂನ್ ತಿಂಗಳಲ್ಲಿ ರಾಜ್ಯದ 31 ಕೇಂದ್ರಗಳ ಪೈಕಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಗಂಗಾವತಿಗೆ ಯೋಜನೆ ಮಂಜೂರಾಗಿತ್ತು.<br /> <br /> ಯೋಜನೆ ಮಂಜೂರಾಗಿ ಒಂಭತ್ತು ತಿಂಗಳು ಕಳೆದಿದೆ. ಆದರೆ ಆಸ್ಪತ್ರೆಗೆ ಬೇಕಾಗುವ ಐದು ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಇದುವರೆಗೂ ಸಾಧ್ಯವಾಗಿಲ್ಲ.<br /> <br /> <strong>ಯೋಜನೆಯ ವಿವರ:</strong>ನಗರದ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಮಾಸಿಕ 200ರಿಂದ 250, ಗ್ರಾಮೀಣ ಭಾಗದ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 600ರಿಂದ 660, ತಾಲ್ಲೂಕಿನಲ್ಲಿ ಒಟ್ಟು ಮಾಸಿಕ ಸರಾಸರಿ 800–880 ಹೆರಿಗೆಯಾಗುತ್ತಿವೆ. <br /> <br /> ಆಯಾ ತಾಲ್ಲೂಕಿನಲ್ಲಾಗುವ ಹೆರಿಗೆ ಪ್ರಮಾಣ, ತಾಯಿ ಮಕ್ಕಳ ಆರೋಗ್ಯ ರಕ್ಷಣೆ ಉದ್ದೇಶದಿಂದ ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 1,25 ಲಕ್ಷ ಮಹಿಳೆ ಮತ್ತು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಪತ್ರೆ ಮಂಜೂರು ಮಾಡಲಾಗಿತ್ತು.<br /> ಸ್ಥಳದ ಕೊರತೆ: ಗಂಗಾವತಿಯಲ್ಲಿ ಒಂದು ಎಕರೆ ಜಮೀನಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ. ಈ ಹಿನ್ನೆಲೆ ಖಾಸಗಿ ಜಮೀನು ಖರೀದಿ ಅಸಾಧ್ಯ. ಹೀಗಾಗಿ ಶಾಸಕರು 2013ರ ಸೆಪ್ಟಂಬರ್ನಲ್ಲಿ ಸರ್ಕಾರಿ ಜಮೀನು ನೀಡುವಂತೆ ತಹಶೀಲ್ದಾರಿಗೆ ಸೂಚನೆ ನೀಡಿದ್ದರು. <br /> <br /> ವಿವಿಧ ಸರ್ವೇ ನಂಬರ್ನಲ್ಲಿ ನಿವೇಶನ ಹುಡುಕಾಡಿದ ತಹಶೀಲ್ದಾರರು ಸರ್ವೇ ನಂಬರ್ 53ರಲ್ಲಿ ಜಮೀನು ತೋರಿಸಿ ಮುಂದಿನ ಆದೇಶಕ್ಕೆ ಉಪವಿಭಾಗಾಧಿಕಾರಿ ಕಚೇರಿಗೆ ಕಡತ ರವಾನಿಸಿದ್ದಾರೆ. ಆದರೆ ಕಡತ ವಿಲೇವಾರಿಯಾಗದೇ ಐದು ತಿಂಗಳು ಕಳೆದಿವೆ.<br /> <br /> ’ನಾವು ಶಾಸಕರನ್ನು ಭೇಟಿಯಾದ ಬಳಿಕ ಈಗಾಗಲೆ ಎರಡು ಬಾರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿವೇಶನ ಮಂಜೂರಾತಿಗೆ ಬೇಡಿಕೆ ಇಟ್ಟಿದ್ದೆವು. ಮುಂದಿನದ್ದು ಹಿರಿಯ ಅಧಿಕಾರಿಗಳಿಗೆ ಬಿಟ್ಟದ್ದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಗೌರಿಶಂಕರ ಹೇಳಿದ್ದಾರೆ.<br /> <br /> 60 ಹಾಸಿಗೆ ಆಸ್ಪತ್ರೆಯ ಕಟ್ಟಡಕ್ಕೆ 24 ತಿಂಗಳ ಸಮಯದ ಗಡುವು ವಿಧಿಸಲಾಗಿದೆ. ಯೋಜನೆ ಜಾರಿಯಾಗಿ ಈಗಾಗಲೆ ಹತ್ತು ತಿಂಗಳು ಕಳೆದಿವೆ. ವಿಳಂಬದ ಕಾರಣ ಅನುದಾನ ವಾಪಾಸಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>