<p><strong>ಹುಬ್ಬಳ್ಳಿ:</strong> ನಗರದ ಇಂದಿರಾ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಇದೇ ಒಂದರಿಂದ ಮೂರರವರೆಗೆ ನಡೆಯಲಿದೆ. <br /> <br /> ಐದು ಸಾವಿರಕ್ಕೂ ಮಿಕ್ಕಿ ಹೂವಿನ ಕುಂಡಗಳು ಪ್ರದರ್ಶನದಲ್ಲಿರುತ್ತವೆ. ಧಾರವಾಡ ಪಾಲಿಕೆಯಿಂದ 900, ಧಾರವಾಡದ ಟೈವಾಕ್ ಕಂಪೆನಿಯಿಂದ 500, ಧಾರವಾಡದ ಸುಮಾರು 100ಕ್ಕೂ ಅಧಿಕ ಮನೆಗಳ ಹೂವಿನ ಕುಂಡಗಳು ಪ್ರದರ್ಶನದಲ್ಲಿರುತ್ತವೆ.<br /> <br /> ಎಸ್ಡಿಎಂ ಕಾಲೇಜಿನಿಂದ 500 ಕುಂಡಗಳಲ್ಲದೇ ಹುಬ್ಬಳ್ಳಿಯ ಪಾಲಿಕೆ ವತಿಯಿಂದ 1500, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಿಂದ 300, ನಗರದ ಕಾಡಸಿದ್ಧೇಶ್ವರ ಕಾಲೇಜಿನಿಂದ 150, ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಿಂದ 150, ಹುಬ್ಬಳ್ಳಿಯ 20ಕ್ಕೂ ಅಧಿಕ ಮನೆಗಳವರು ಕುಂಡಗಳ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. <br /> <br /> `ಇದು ಕೇವಲ ಪ್ರದರ್ಶನವಲ್ಲ. ಸ್ಪರ್ಧೆ ಕೂಡಾ. ಹೀಗಾಗಿ ಈ ಬಾರಿ 5600ಕ್ಕಿಂತ ಹೆಚ್ಚು ಕುಂಡಗಳು ಬಂದಿವೆ. ಇದರಲ್ಲಿ ಹೂಗಿಡಗಳು, ಅಲಂಕಾರಿಕ ಗಿಡಗಳು, ಅಂದವಾದ ಜೋಡಣೆ ಹಾಗೂ ವಿವಿಧ ಜಾತಿಯ ಕೊಯ್ದಿಟ್ಟ ಹೂಗಳ ವಿಭಾಗಗಳಿರುತ್ತವೆ. ತರಕಾರಿ ವಿಭಾಗದಲ್ಲಿ ವಿವಿಧ ತರಕಾರಿ ಹಾಗೂ ಗೆಡ್ಡೆ ತರಕಾರಿ ಇರುತ್ತದೆ~ ಎಂದು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಕಾರ್ಯದರ್ಶಿ ಎ.ಎಸ್. ಕವಿತಾ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಹಾಪ್ಕಾಮ್ಸ ವತಿಯಿಂದ ತರಕಾರಿ ಹಾಗೂ ಹಣ್ಣುಗಳ ಮೂಲಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಜೊತೆಗೆ ರೈತರು ಬೆಳೆದ ಹೂವು, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ ಕೂಡಾ ಏರ್ಪಡಿಸಲಾಗಿದೆ.<br /> <br /> ಈ ವರ್ಷ ಹೂಗುಚ್ಛ ತಯಾರಿಕೆ ಸ್ಪರ್ಧೆ ಕೂಡಾ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಮಧ್ಯಾಹ್ನ 12 ಗಂಟೆಯಿಂದ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಶನಿವಾರ ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ~ ಎಂದು ಅವರು ವಿವರಿಸಿದರು. <br /> <br /> `ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ಪಾಲಿಕೆ, ಕೃಷಿ ಇಲಾಖೆ, ಹಾಪ್ಕಾಮ್ಸ ಮತ್ತು ಖಾದಿ ಗ್ರಾಮೋದ್ಯೋಗ ಸಂಸ್ಥೆ ಆಶ್ರಯದಲ್ಲಿ ಈ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಅಧ್ಯಕ್ಷ ಎ.ಜಿ. ದೇಶಪಾಂಡೆ ಹೇಳಿದರು.<br /> <br /> `10 ಅಡಿ ಎತ್ತರ ಹಾಗೂ ಐದಡಿ ಅಗಲದ ಹೂದಾನಿಯನ್ನು ತಯಾರಿಸಲಾಗುತ್ತಿದೆ. ಇದನ್ನು ಗುಲಾಬಿ, ಡೇರೆ, ಜರ್ಬೆರಾ, ಚೆಂಡು ಹೂವು, ಚಿಂತಾಮಣಿ ಚೆಂಡು ಹೂವು, ಸೇವಂತಿಗೆ ಮೊದಲಾದ ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದರ ಮುಂದೆ ಮಹಾತ್ಮಾ ಗಾಂಧೀಜಿಯ ಪುಟ್ಟ ಮೂರ್ತಿ ಇಟ್ಟು ಹೂವಿನಿಂದ ಅಲಂಕರಿಸಲಾಗುತ್ತದೆ. ಇದು ಈ ಬಾರಿಯ ವಿಶೇಷ~ ಎಂದು ದೇಶಪಾಂಡೆ ಹೆಮ್ಮೆಯಿಂದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದ ಇಂದಿರಾ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಇದೇ ಒಂದರಿಂದ ಮೂರರವರೆಗೆ ನಡೆಯಲಿದೆ. <br /> <br /> ಐದು ಸಾವಿರಕ್ಕೂ ಮಿಕ್ಕಿ ಹೂವಿನ ಕುಂಡಗಳು ಪ್ರದರ್ಶನದಲ್ಲಿರುತ್ತವೆ. ಧಾರವಾಡ ಪಾಲಿಕೆಯಿಂದ 900, ಧಾರವಾಡದ ಟೈವಾಕ್ ಕಂಪೆನಿಯಿಂದ 500, ಧಾರವಾಡದ ಸುಮಾರು 100ಕ್ಕೂ ಅಧಿಕ ಮನೆಗಳ ಹೂವಿನ ಕುಂಡಗಳು ಪ್ರದರ್ಶನದಲ್ಲಿರುತ್ತವೆ.<br /> <br /> ಎಸ್ಡಿಎಂ ಕಾಲೇಜಿನಿಂದ 500 ಕುಂಡಗಳಲ್ಲದೇ ಹುಬ್ಬಳ್ಳಿಯ ಪಾಲಿಕೆ ವತಿಯಿಂದ 1500, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಿಂದ 300, ನಗರದ ಕಾಡಸಿದ್ಧೇಶ್ವರ ಕಾಲೇಜಿನಿಂದ 150, ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಿಂದ 150, ಹುಬ್ಬಳ್ಳಿಯ 20ಕ್ಕೂ ಅಧಿಕ ಮನೆಗಳವರು ಕುಂಡಗಳ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. <br /> <br /> `ಇದು ಕೇವಲ ಪ್ರದರ್ಶನವಲ್ಲ. ಸ್ಪರ್ಧೆ ಕೂಡಾ. ಹೀಗಾಗಿ ಈ ಬಾರಿ 5600ಕ್ಕಿಂತ ಹೆಚ್ಚು ಕುಂಡಗಳು ಬಂದಿವೆ. ಇದರಲ್ಲಿ ಹೂಗಿಡಗಳು, ಅಲಂಕಾರಿಕ ಗಿಡಗಳು, ಅಂದವಾದ ಜೋಡಣೆ ಹಾಗೂ ವಿವಿಧ ಜಾತಿಯ ಕೊಯ್ದಿಟ್ಟ ಹೂಗಳ ವಿಭಾಗಗಳಿರುತ್ತವೆ. ತರಕಾರಿ ವಿಭಾಗದಲ್ಲಿ ವಿವಿಧ ತರಕಾರಿ ಹಾಗೂ ಗೆಡ್ಡೆ ತರಕಾರಿ ಇರುತ್ತದೆ~ ಎಂದು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಕಾರ್ಯದರ್ಶಿ ಎ.ಎಸ್. ಕವಿತಾ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> `ಹಾಪ್ಕಾಮ್ಸ ವತಿಯಿಂದ ತರಕಾರಿ ಹಾಗೂ ಹಣ್ಣುಗಳ ಮೂಲಕ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಜೊತೆಗೆ ರೈತರು ಬೆಳೆದ ಹೂವು, ಹಣ್ಣು ಹಾಗೂ ತರಕಾರಿಗಳ ಪ್ರದರ್ಶನ ಕೂಡಾ ಏರ್ಪಡಿಸಲಾಗಿದೆ.<br /> <br /> ಈ ವರ್ಷ ಹೂಗುಚ್ಛ ತಯಾರಿಕೆ ಸ್ಪರ್ಧೆ ಕೂಡಾ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಮಧ್ಯಾಹ್ನ 12 ಗಂಟೆಯಿಂದ ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಶನಿವಾರ ಸಂಜೆ ನಾಲ್ಕು ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ~ ಎಂದು ಅವರು ವಿವರಿಸಿದರು. <br /> <br /> `ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ಪಾಲಿಕೆ, ಕೃಷಿ ಇಲಾಖೆ, ಹಾಪ್ಕಾಮ್ಸ ಮತ್ತು ಖಾದಿ ಗ್ರಾಮೋದ್ಯೋಗ ಸಂಸ್ಥೆ ಆಶ್ರಯದಲ್ಲಿ ಈ ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಅಧ್ಯಕ್ಷ ಎ.ಜಿ. ದೇಶಪಾಂಡೆ ಹೇಳಿದರು.<br /> <br /> `10 ಅಡಿ ಎತ್ತರ ಹಾಗೂ ಐದಡಿ ಅಗಲದ ಹೂದಾನಿಯನ್ನು ತಯಾರಿಸಲಾಗುತ್ತಿದೆ. ಇದನ್ನು ಗುಲಾಬಿ, ಡೇರೆ, ಜರ್ಬೆರಾ, ಚೆಂಡು ಹೂವು, ಚಿಂತಾಮಣಿ ಚೆಂಡು ಹೂವು, ಸೇವಂತಿಗೆ ಮೊದಲಾದ ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದರ ಮುಂದೆ ಮಹಾತ್ಮಾ ಗಾಂಧೀಜಿಯ ಪುಟ್ಟ ಮೂರ್ತಿ ಇಟ್ಟು ಹೂವಿನಿಂದ ಅಲಂಕರಿಸಲಾಗುತ್ತದೆ. ಇದು ಈ ಬಾರಿಯ ವಿಶೇಷ~ ಎಂದು ದೇಶಪಾಂಡೆ ಹೆಮ್ಮೆಯಿಂದ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>