<p>ಶಿರಸಿ: ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ ಏ.22ರಂದು ಕರೆದಿರುವ ಸರ್ವ ಸಾಧಾರಣ ಸಭೆ ಪೂರ್ವ ನಿಗದಿಯಂತೆ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದರು. <br /> <br /> ಅವರು ಸಂಸ್ಥೆಯ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು. ಸಂಘದ 50ಕ್ಕೂ ಹೆಚ್ಚು ಸದಸ್ಯರು ಸಂಘಕ್ಕೆ ಅರ್ಜಿ ಬರೆದು ಸಂಘಕ್ಕೆ ಕುಂದು ಉಂಟುಮಾಡುತ್ತಿರುವ ಎಂಟು ಜನ ಸದಸ್ಯರನ್ನು ಹೊರದೂಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3ಗಂಟೆಗೆ ವಿಶೇಷ ಸರ್ವಸಾಧಾರಣ ಸಭೆ ಕರೆಯಲಾಗಿದೆ.<br /> <br /> ಆದರೆ ಸಹಕಾರಿ ಇಲಾಖೆ ಉಪನಿಬಂಧಕರು ಜಿ.ಎಸ್.ಹೆಗಡೆ ಅರಸಿಕೆರೆ ಸಲ್ಲಿಸಿರುವ ಮನವಿ ಪರಿಗಣಿಸಿ ಈ ವಿಷಯ ಚರ್ಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಇದರ ಪತ್ರಿ ಸಂಸ್ಥೆಗೆ ಗುರುವಾರ ಸಂಜೆ ದೊರೆತಿದೆ. <br /> ಉಪನಿಬಂಧಕರಿಗೆ ಈ ಅಧಿಕಾರ ಇಲ್ಲವಾಗಿದ್ದು ಇದು ರಾಜಕೀಯ ಒತ್ತಡದಿಂದ ಕಾನೂನು ವಿರುದ್ಧ ನೀಡಿದ ಆದೇಶವಾಗಿದೆ. ಈ ಆದೇಶ ಉಲ್ಲಂಘಿಸಿ ಟಿ.ಎಸ್.ಎಸ್. ಸಭೆ ನಡೆಸುವದು ನಿಶ್ಚಿತವಾಗಿದೆ. ಏನೇ ರಾಜಕಾರಣ ಮಾಡಿದರೂ ಟಿ.ಎಸ್.ಎಸ್. ಎದುರಿಸಲು ಸಿದ್ಧವಿದೆ ಎಂದು ಅವರು ಹೇಳಿದರು. <br /> <br /> <strong>ಹವ್ಯಕ ಸಚಿವರಿಂದ ತೊಂದರೆ: </strong>ಹವ್ಯಕ ಬ್ರಾಹ್ಮಣರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗೆಲ್ಲ ಟಿ.ಎಸ್.ಎಸ್.ಗೆ ತೊಂದರೆಯಾಗಿದೆ. ಹಿಂದೆ ರಾಮಕೃಷ್ಣ ಹೆಗಡೆ ಸಚಿವರಾಗಿದ್ದಾಗಲೂ ತೊಂದರೆಯಾಗಿತ್ತು. <br /> ಈಗ ಮತ್ತೆ ಸಮಸ್ಯೆ ಎದುರಾಗಿದೆ. ಟಿ.ಎಸ್.ಎಸ್. ಸಹಕಾರಿ ಇಲಾಖೆಯ 64ರ ವಿಚಾರಣೆ, 68ರ ಆದೇಶ ಎದುರಿಸಿದೆ. ಸಂಸ್ಥೆಯನ್ನು ಸುಪರ್ ಸೀಡ್ ಮಾಡುವತ್ತ ಯೋಚನೆ ನಡೆಯುತ್ತಿದೆ ಎಂಬ ವರ್ತಮಾನ ದೊರೆತಿದೆ. <br /> <br /> 20ಸಾವಿರ ಸದಸ್ಯರ ಬಲದೊಂದಿಗೆ ಟಿ.ಎಸ್.ಎಸ್. ಏನೇ ಸಮಸ್ಯೆ ಬಂದರೂ ಎದುರಿಸಲು ಸಿದ್ಧವಿದೆ. ಆದರೆ ಇದರ ಪರಿಣಾಮವನ್ನು ರಾಜಕೀಯ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಬಹುದು’ ಎಂದು ಹೆಸರು ಉಲ್ಲೇಖಿಸದೇ ಶಾಂತಾರಾಮ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಿ.ಡಿ.ವಿಶ್ವಾಮಿತ್ರ, ರಾಮಕೃಷ್ಣ ಹೆಗಡೆ, ಜಿ.ವಿ.ಜೋಶಿ ಕಾಗೇರಿ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ ಏ.22ರಂದು ಕರೆದಿರುವ ಸರ್ವ ಸಾಧಾರಣ ಸಭೆ ಪೂರ್ವ ನಿಗದಿಯಂತೆ ನಡೆಯುವುದರಲ್ಲಿ ಸಂಶಯವಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದರು. <br /> <br /> ಅವರು ಸಂಸ್ಥೆಯ ಸಭಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು. ಸಂಘದ 50ಕ್ಕೂ ಹೆಚ್ಚು ಸದಸ್ಯರು ಸಂಘಕ್ಕೆ ಅರ್ಜಿ ಬರೆದು ಸಂಘಕ್ಕೆ ಕುಂದು ಉಂಟುಮಾಡುತ್ತಿರುವ ಎಂಟು ಜನ ಸದಸ್ಯರನ್ನು ಹೊರದೂಡುವಂತೆ ಕೋರಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3ಗಂಟೆಗೆ ವಿಶೇಷ ಸರ್ವಸಾಧಾರಣ ಸಭೆ ಕರೆಯಲಾಗಿದೆ.<br /> <br /> ಆದರೆ ಸಹಕಾರಿ ಇಲಾಖೆ ಉಪನಿಬಂಧಕರು ಜಿ.ಎಸ್.ಹೆಗಡೆ ಅರಸಿಕೆರೆ ಸಲ್ಲಿಸಿರುವ ಮನವಿ ಪರಿಗಣಿಸಿ ಈ ವಿಷಯ ಚರ್ಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ಇದರ ಪತ್ರಿ ಸಂಸ್ಥೆಗೆ ಗುರುವಾರ ಸಂಜೆ ದೊರೆತಿದೆ. <br /> ಉಪನಿಬಂಧಕರಿಗೆ ಈ ಅಧಿಕಾರ ಇಲ್ಲವಾಗಿದ್ದು ಇದು ರಾಜಕೀಯ ಒತ್ತಡದಿಂದ ಕಾನೂನು ವಿರುದ್ಧ ನೀಡಿದ ಆದೇಶವಾಗಿದೆ. ಈ ಆದೇಶ ಉಲ್ಲಂಘಿಸಿ ಟಿ.ಎಸ್.ಎಸ್. ಸಭೆ ನಡೆಸುವದು ನಿಶ್ಚಿತವಾಗಿದೆ. ಏನೇ ರಾಜಕಾರಣ ಮಾಡಿದರೂ ಟಿ.ಎಸ್.ಎಸ್. ಎದುರಿಸಲು ಸಿದ್ಧವಿದೆ ಎಂದು ಅವರು ಹೇಳಿದರು. <br /> <br /> <strong>ಹವ್ಯಕ ಸಚಿವರಿಂದ ತೊಂದರೆ: </strong>ಹವ್ಯಕ ಬ್ರಾಹ್ಮಣರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗೆಲ್ಲ ಟಿ.ಎಸ್.ಎಸ್.ಗೆ ತೊಂದರೆಯಾಗಿದೆ. ಹಿಂದೆ ರಾಮಕೃಷ್ಣ ಹೆಗಡೆ ಸಚಿವರಾಗಿದ್ದಾಗಲೂ ತೊಂದರೆಯಾಗಿತ್ತು. <br /> ಈಗ ಮತ್ತೆ ಸಮಸ್ಯೆ ಎದುರಾಗಿದೆ. ಟಿ.ಎಸ್.ಎಸ್. ಸಹಕಾರಿ ಇಲಾಖೆಯ 64ರ ವಿಚಾರಣೆ, 68ರ ಆದೇಶ ಎದುರಿಸಿದೆ. ಸಂಸ್ಥೆಯನ್ನು ಸುಪರ್ ಸೀಡ್ ಮಾಡುವತ್ತ ಯೋಚನೆ ನಡೆಯುತ್ತಿದೆ ಎಂಬ ವರ್ತಮಾನ ದೊರೆತಿದೆ. <br /> <br /> 20ಸಾವಿರ ಸದಸ್ಯರ ಬಲದೊಂದಿಗೆ ಟಿ.ಎಸ್.ಎಸ್. ಏನೇ ಸಮಸ್ಯೆ ಬಂದರೂ ಎದುರಿಸಲು ಸಿದ್ಧವಿದೆ. ಆದರೆ ಇದರ ಪರಿಣಾಮವನ್ನು ರಾಜಕೀಯ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಎದುರಿಸಬೇಕಾಗಬಹುದು’ ಎಂದು ಹೆಸರು ಉಲ್ಲೇಖಿಸದೇ ಶಾಂತಾರಾಮ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಡಿ.ಡಿ.ವಿಶ್ವಾಮಿತ್ರ, ರಾಮಕೃಷ್ಣ ಹೆಗಡೆ, ಜಿ.ವಿ.ಜೋಶಿ ಕಾಗೇರಿ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>