<p><strong>ಬೆಂಗಳೂರು:</strong> ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್ ಅಲಸೂರು, ಕೆ.ಆರ್.ಪುರಂ, ಹಂಪಿನಗರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 9.30ರಿಂದ 11ರ ವರೆಗೆ ನಡೆಯಲಿದೆ.</p>.<p>ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಲ್ಲಿ ವಿಳಂಬ, ಗೃಹೇತರದಿಂದ ಗೃಹ ಬಳಕೆ ಸಂಪರ್ಕಕ್ಕೆ ಪರಿವರ್ತನೆ ಮಂಜೂರಾತಿಯಲ್ಲಿ ವಿಳಂಬ, ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು.</p>.<p>ಅಲಸೂರಿನಲ್ಲಿ ನಡೆಯುವ ದಕ್ಷಿಣ- ಪೂರ್ವ 1ನೇ ವಿಭಾಗದ ಅದಾಲತ್ನಲ್ಲಿ ದೊಮ್ಮಲೂರು, ಜಾನ್ಸನ್ ಮಾರ್ಕೆಟ್, ಸಿ.ಎಲ್.ಆರ್. ಸೇವಾ ಠಾಣೆ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945196, 22945159.</p>.<p>ಹಂಪಿನಗರದಲ್ಲಿ ನಡೆಯುವ ಪಶ್ಚಿಮ ಒಂದನೇ ಉಪವಿಭಾಗದ ಅದಾಲತ್ನಲ್ಲಿ ವಿಜಯನಗರ 1 ಮತ್ತು 2ನೇ ಹಂತ, ಹಂಪಿನಗರ, ಎಂ.ಸಿ. ಬಡಾವಣೆ, ಗೋವಿಂದರಾಜನಗರ, ಪ್ರಶಾಂತನಗರ, ಅತ್ತಿಗುಪ್ಪೆ, ಮಾರೇನಹಳ್ಳಿ, ಚಂದ್ರ ಲೇಔಟ್ ಸೇವಾ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945171, 22945172.</p>.<p>ಕೆ.ಆರ್.ಪುರಂನಲ್ಲಿ ನಡೆಯುವ ಪೂರ್ವ 5ನೇ ಉಪವಿಭಾಗದ ಅದಾಲತ್ನಲ್ಲಿ ಸದಾನಂದ ನಗರ, ರಾಮಮೂರ್ತಿ ನಗರ, ಕೆ.ಆರ್. ಪುರಂ ಸೇವಾ ಠಾಣೆ ವ್ಯಾಪ್ತಿಯ ಗ್ರಾಹಕರು ಸದುಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945158, 25663688.</p>.<p>ಗ್ರಾಹಕರು ತಮ್ಮ ದೂರುಗಳ ಪರಿಹಾರಕ್ಕಾಗಿ ಕರೆ ಕೇಂದ್ರದ ದೂರು ಕೊಠಡಿಯನ್ನು (ದೂರವಾಣಿ ಸಂಖ್ಯೆ-22238888) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೆಂಗಳೂರು ಜಲ ಮಂಡಳಿಯ ನೀರಿನ ಅದಾಲತ್ ಅಲಸೂರು, ಕೆ.ಆರ್.ಪುರಂ, ಹಂಪಿನಗರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 9.30ರಿಂದ 11ರ ವರೆಗೆ ನಡೆಯಲಿದೆ.</p>.<p>ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕ ನೀಡುವಲ್ಲಿ ವಿಳಂಬ, ಗೃಹೇತರದಿಂದ ಗೃಹ ಬಳಕೆ ಸಂಪರ್ಕಕ್ಕೆ ಪರಿವರ್ತನೆ ಮಂಜೂರಾತಿಯಲ್ಲಿ ವಿಳಂಬ, ನೀರು ಮತ್ತು ಒಳಚರಂಡಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು.</p>.<p>ಅಲಸೂರಿನಲ್ಲಿ ನಡೆಯುವ ದಕ್ಷಿಣ- ಪೂರ್ವ 1ನೇ ವಿಭಾಗದ ಅದಾಲತ್ನಲ್ಲಿ ದೊಮ್ಮಲೂರು, ಜಾನ್ಸನ್ ಮಾರ್ಕೆಟ್, ಸಿ.ಎಲ್.ಆರ್. ಸೇವಾ ಠಾಣೆ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945196, 22945159.</p>.<p>ಹಂಪಿನಗರದಲ್ಲಿ ನಡೆಯುವ ಪಶ್ಚಿಮ ಒಂದನೇ ಉಪವಿಭಾಗದ ಅದಾಲತ್ನಲ್ಲಿ ವಿಜಯನಗರ 1 ಮತ್ತು 2ನೇ ಹಂತ, ಹಂಪಿನಗರ, ಎಂ.ಸಿ. ಬಡಾವಣೆ, ಗೋವಿಂದರಾಜನಗರ, ಪ್ರಶಾಂತನಗರ, ಅತ್ತಿಗುಪ್ಪೆ, ಮಾರೇನಹಳ್ಳಿ, ಚಂದ್ರ ಲೇಔಟ್ ಸೇವಾ ವ್ಯಾಪ್ತಿಯ ಗ್ರಾಹಕರು ಉಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945171, 22945172.</p>.<p>ಕೆ.ಆರ್.ಪುರಂನಲ್ಲಿ ನಡೆಯುವ ಪೂರ್ವ 5ನೇ ಉಪವಿಭಾಗದ ಅದಾಲತ್ನಲ್ಲಿ ಸದಾನಂದ ನಗರ, ರಾಮಮೂರ್ತಿ ನಗರ, ಕೆ.ಆರ್. ಪುರಂ ಸೇವಾ ಠಾಣೆ ವ್ಯಾಪ್ತಿಯ ಗ್ರಾಹಕರು ಸದುಪಯೋಗ ಪಡೆಯಬಹುದು. ಸಂಪರ್ಕಕ್ಕೆ: 22945158, 25663688.</p>.<p>ಗ್ರಾಹಕರು ತಮ್ಮ ದೂರುಗಳ ಪರಿಹಾರಕ್ಕಾಗಿ ಕರೆ ಕೇಂದ್ರದ ದೂರು ಕೊಠಡಿಯನ್ನು (ದೂರವಾಣಿ ಸಂಖ್ಯೆ-22238888) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>